ರಾಜೀನಾಮೆಯಿಂದ ಕೆಟ್ಟ ಭಾವನೆ ಬರುತ್ತಿದೆ: ಅನಿತಾ ಕುಮಾರಸ್ವಾಮಿ
![ರಾಜೀನಾಮೆಯಿಂದ ಕೆಟ್ಟ ಭಾವನೆ ಬರುತ್ತಿದೆ: ಅನಿತಾ ಕುಮಾರಸ್ವಾಮಿ ರಾಜೀನಾಮೆಯಿಂದ ಕೆಟ್ಟ ಭಾವನೆ ಬರುತ್ತಿದೆ: ಅನಿತಾ ಕುಮಾರಸ್ವಾಮಿ](https://www.varthabharati.in/sites/default/files/images/articles/2019/07/12/200191-1562952801.jpg)
ಬೆಂಗಳೂರು, ಜು.12: ಶಾಸಕರ ರಾಜೀನಾಮೆ ಸರಿಯಲ್ಲ. ರಾಜ್ಯ ರಾಜಕೀಯದ ಇತ್ತೀಚಿಗಿನ ವಿದ್ಯಮಾನಗಳಿಂದ ರಾಜಕಾರಣಿಗಳ ಮೇಲೆ ಕೆಟ್ಟ ಭಾವನೆ ಬರುತ್ತಿದೆ ಎಂದು ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಂಗಾರು ಅಧಿವೇಶನದ ಮೊದಲ ದಿನದ ಕಲಾಪ ಮುಗಿಸಿ ಹೊರಬಂದ ಬಳಿಕ ಮಾತನಾಡಿದ ಅವರು, ಚುನಾವಣೆಯಲ್ಲಿ ಗೆದ್ದ ಮೇಲೆ ಪಕ್ಷಕ್ಕೆ ನಿಷ್ಠೆಯಿಂದ ಇರಬೇಕು. ಸಮಸ್ಯೆಗಳಿವೆ ನಿಜವಾದರೂ, ಅವು ಬಗೆಹರಿಯದಷ್ಟು ದೊಡ್ಡವಲ್ಲ ಎಂದು ಹೇಳಿದರು.
ಸಾ.ರಾ. ಮಹೇಶ್ ಹಿಂದೆ ಬಿಜೆಪಿಯಲ್ಲೇ ಇದ್ದವರು. ಅವರು ವೈಯಕ್ತಿಕವಾಗಿ ಬಿಜೆಪಿ ನಾಯಕರನ್ನ ಭೇಟಿಯಾಗಿರಬಹುದು. ಅವರ ಭೇಟಿಗೆ ರಾಜಕೀಯ ಬಣ್ಣ ಹಚ್ಚೋದು ಬೇಡ ಎಂದು ಸ್ಪಷ್ಟೀಕರಣ ನೀಡಿದರು.
ಇದೇ ವೇಳೆ ಮುಂದಿನ ದಿನಗಳಲ್ಲಿ ನಿಖಿಲ್ ಕುಮಾರಸ್ವಾಮಿ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡುವ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಅದು ಮುಂದಿನ ವಿಚಾರ. ಈಗ ಅದರ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿ ಮುನ್ನಡೆದರು.
Next Story