ಸಜೀಪ ಮುನ್ನೂರು ಗ್ರಾಮ ಪಂಚಾಯತ್ನಲ್ಲಿ ವನಮಹೋತ್ಸವ
ಬಂಟ್ವಾಳ, ಜು.13: ಸಜೀಪ ಮುನ್ನೂರು ಗ್ರಾಮ ಪಂಚಾಯತ್ನಲ್ಲಿ ಇತ್ತೀಚೆಗೆ ವನಮಹೋತ್ಸವ ಆಚರಿಸಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ಶರೀಫ್ ನಂದಾವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಗ್ರಾಪಂ ಉಪಾಧ್ಯಕ್ಷೆ ನಳಿನಿ, ತಾಪಂ ಸದಸ್ಯೆ ನಸೀಮಾ ಬೇಗಂ, ಗ್ರಾಪಂ ಸದಸ್ಯರಾದ ಜನಾರ್ದನ, ಹಂಝ, ಇದಿನಬ್ಬ, ಸುಮತಿ ಎಸ್., ದುಲ್ಸಿನ್ ಪೆರಾವೋ, ನವೀನ್ ಅಂಚನ್, ಅಹ್ಮದ್ ಕಬೀರ್, ಯೂಸುಫ್ ಹೈದರ್, ಪದ್ಮನಾಭ ಹೇಮಾವತಿ, ವನಜಾಕ್ಷಿ, ಪ್ರಮೀಳಾ ಜಿ., ಪ್ರಮೀಳಾ ಪಿ., ಶಬ್ನೂರು ಬೇಗಂ, ಫಾತಿಮತ್ ರೊಹರ ಯು., ನರೇಂದ್ರ ಆಳ್ವ, ಗಿರಿಜಾ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಎಸ್. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Next Story