Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಅಸಾಮಾನ್ಯ ಮಹನೀಯರ ಸಾಮಾನ್ಯತೆಯನ್ನು...

ಅಸಾಮಾನ್ಯ ಮಹನೀಯರ ಸಾಮಾನ್ಯತೆಯನ್ನು ಕಟ್ಟಿಕೊಡುವ ಎಚ್‌ಎಸ್‌ವಿ

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ15 July 2019 6:35 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಅಸಾಮಾನ್ಯ ಮಹನೀಯರ ಸಾಮಾನ್ಯತೆಯನ್ನು ಕಟ್ಟಿಕೊಡುವ ಎಚ್‌ಎಸ್‌ವಿ

 ಕನ್ನಡದ ಅಪ್ಪಟ ಕವಿಯಾಗಿ ಗುರುತಿಸಿಕೊಂಡಿರುವ ಎಚ್. ಎಸ್. ವೆಂಕಟೇಶಮೂರ್ತಿಯವರು ಇತ್ತೀಚೆಗೆ ತಮ್ಮ ‘ಅನಾತ್ಮ ಕಥನ’ದ ಮೂಲಕ ಕವಿಯ ಅಂತರಂಗದ ಒಳಗಿನ ಗದ್ಯವನ್ನು ಹೃದ್ಯ ರೂಪದಲ್ಲಿ ತೆರೆದಿಟ್ಟಿದ್ದರು. ಕವಿಯೊಬ್ಬ ಗದ್ಯ ಪ್ರಕಾರವನ್ನು ಕೈಗೆತ್ತಿಕೊಂಡರೂ ಅದು ತನ್ನ ಕಾವ್ಯ ಲಕ್ಷಣಗಳಿಂದಲೇ ಗಮನ ಸೆಳೆಯುತ್ತದೆ. ಹಿರಿಯ ಕವಿಯೊಬ್ಬರು ತಮ್ಮ ಕಾವ್ಯ, ಬದುಕಿನ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳನ್ನು ಕಟ್ಟಿಕೊಡಲು ಮುಂದಾದಾಗ ಅದರ ಕುರಿತಂತೆ ಸಹೃದಯರು ಸಹಜವಾಗಿಯೇ ಕುತೂಹಲ ತಾಳುತ್ತಾರೆ. ಎಚ್‌ಎಸ್‌ವಿ ಅವರು ಕನ್ನಡ ಸಾಹಿತ್ಯ ಜಗತ್ತು ತಬ್ಬಿಕೊಂಡ ಅಂತಹ 21 ಮಹನೀಯರನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಪುತಿನರಿಂದ ಸುಬ್ರಾಯ ಚೊಕ್ಕಾಡಿಯವರೆಗೆ, ಕವಿ, ಕಥೆಗಾರರು, ಚಿಂತಕರ ಕುರಿತಂತೆ ತಮ್ಮದೇ ಆದ ದೃಷ್ಟಿಕೋನದಿಂದ ನೋಡಿ ಅವರ ವ್ಯಕ್ತಿಚಿತ್ರವನ್ನು ಕಟ್ಟಿಕೊಡುವ ಪ್ರಯತ್ನವನ್ನು ‘ಬೆಳಗಾಗಿ ನಾನೆದ್ದು...’ ಕೃತಿಯಲ್ಲಿ ಮಾಡಿದ್ದಾರೆ. ಬಹುಶಃ ಅವರು ಕಟ್ಟಿಕೊಟ್ಟ ಹಿರಿಯರು ಈ ನಾಡು ಪ್ರತಿದಿನ ಸ್ಮರಿಸಬೇಕಾದ ವ್ಯಕ್ತಿತ್ವ ಎನ್ನುವ ಕಾರಣದಿಂದ ‘ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ...’ ಎನ್ನುವ ಜಾನಪದ ಸಾಲಿನ ತುಣುಕನ್ನು ಕೃತಿಗೆ ತಲೆಬರಹವಾಗಿ ಕೊಟ್ಟಿರಬೇಕು.
ಇಲ್ಲಿರುವುದು ಹಿರಿಯ ಲೇಖಕರ ಕುರಿತ ಪರಿಚಯ ಲೇಖನಗಳಲ್ಲ. ಹಿರಿಯರ ಜೊತೆ ಕಳೆದ ಕೆಲವು ಕ್ಷಣಗಳು, ಘಟನೆಗಳನ್ನು ಇಟ್ಟುಕೊಂಡು ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಕುಶಲಕಲೆಯನ್ನು ಈ ಕೃತಿಯಲ್ಲಿ ಕಾಣಬಹುದು. ಪುತಿನ ಅವರು ಬದುಕನ್ನು ಹೇಗೆ ಒಳಗಣ್ಣಿನಿಂದ ನೋಡುತ್ತಿದ್ದರು ಎನ್ನುವುದಕ್ಕೆ ಉದಾಹರಣೆಯಾಗಿ, ಕಣ್ಣು ಮಬ್ಬಾಗಿದ್ದರೂ ಅವರು ಸೂರ್ಯನಿಗೆ ಮುಖಮಾಡಿದ ಘಟನೆಯನ್ನು ವಿವರಿಸುತ್ತಾರೆ. ‘‘ಕವಿಯಾದವನು ಕಾಣುವುದರ ಆಚೆ ಇರುವ ಕಾಣ್ಕೆಯನ್ನು ಪಡೆಯಬೇಕಯ್ಯ....’’ ಎನ್ನುವ ಪುತಿನ ಮಾತುಗಳಿಗೆ ಪೂರಕವಾಗಿ ಆ ಘಟನೆಯನ್ನು ಎಚ್‌ಎಸ್‌ವಿ ನೆನಪಿಸುತ್ತಾರೆ. ‘ಕವಿಗಳ ಕಲ್ಪಕತೆ’ ಬರಹದಲ್ಲಿ ವಿಮರ್ಶಕ ಅಮೂರರು ತಮ್ಮ ಹೃದಯವಂತಿಕೆಯ ಮೂಲಕ ಹೇಗೆ ಪ್ರಭಾವಿಸಿದ್ದರು ಎನ್ನುವುದನ್ನು ಬರೆಯುತ್ತಾರೆ. ಕೆ. ಎಸ್. ನರಸಿಂಹಸ್ವಾಮಿ ಅವರನ್ನು ನೆನೆಯುತ್ತಾ, ಮೈಸೂರು ಮಲ್ಲಿಗೆಯಷ್ಟೇ ಆಪ್ತವಾದ ಅವರ ಮಾತು-ಕತೆಯನ್ನು ತೆರೆದಿಡುತ್ತಾರೆ. ಎಕ್ಕುಂಡಿಯವರ ಸಾಮಾಜಿಕ ಪ್ರಜ್ಞೆ ಮತ್ತು ಜನಮುಖಿ ಕವಿತ್ವದ ಲೌಕಿ-ಅಲೌಕಿಕತೆ, ಅಡಿಗರ ಕಾವ್ಯದ ಗಹನಗಾಂಭೀರ್ಯ, ನಿತ್ಯವ್ಯವಹಾರದ ತಮಾಷೆ, ವ್ಯವಹಾರ ಶೂನ್ಯತೆ, ಎಲ್. ಎಸ್. ಶೇಷಗಿರಿರಾಯರ ಸಾಹಿತ್ಯ ಮತ್ತು ಬದುಕಿನ ನಡುವಿನ ಸಮನ್ವಯತೆ, ರಾಮಚಂದ್ರ ಶರ್ಮರ ಕಾವ್ಯವ್ಯಾಮೋಹ, ಜಿ.ಎಸ್. ಶಿವರುದ್ರಪ್ಪರ ದೋಸೆಕತೆ ಮತ್ತು ಅವರು ಎತ್ತಿದ ಬಿಲ್ಲುಗಳ ಭಾರ, ಕಣವಿಯ ಮನೆಯ ಹೋಳಿಗೆ ಊಟ, ಕುರ್ತಕೋಟಿ ಎನ್ನುವ ವಿದಗ್ಧ ರಸಿಕ....ಹೀಗೆ....ಇಲ್ಲಿ ತೆರೆದುಕೊಳ್ಳುವ ಮಹನೀಯರ ಪರಿಯೇ ಹೊಸತು. ಅಸಾಮಾನ್ಯರೊಳಗಿರುವ ಸಾಮಾನ್ಯತೆಯನ್ನು ಎಚ್‌ಎಸ್‌ವಿ ತೆರೆದುಕೊಟ್ಟ ರೀತಿ ಅತ್ಯಂತ ಆತ್ಮೀಯವಾಗಿದೆ. ಪ್ರತಿ ವ್ಯಕ್ತಿಪರಿಚಯವೂ ಕಥನ ರೂಪದಲ್ಲಿದ್ದು ನವ್ಮುನ್ನು ಓದಿಸಿಕೊಂಡು ಹೋಗುತ್ತದೆ.
ಬಹುರೂಪಿ ಪ್ರಕಾಶನ ಬೆಂಗಳೂರು ಈ ಕೃತಿಯನ್ನು ಹೊರತಂದಿದೆ. ಒಟ್ಟು ಪುಟಗಳು 144. ಮುಖಬೆಲೆ 150 ರೂಪಾಯಿ. ಆಸಕ್ತರು 70191 82729 ದೂರವಾಣಿಯನ್ನು ಸಂಪರ್ಕಿಸಬಹುದು.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
-ಕಾರುಣ್ಯಾ
-ಕಾರುಣ್ಯಾ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X