ಐಎಂಎ ವಂಚನೆ ಪ್ರಕರಣ: ಧರ್ಮಗುರು ಮತ್ತೆ ಕಸ್ಟಡಿಗೆ
ಬೆಂಗಳೂರು, ಜು.18: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಶಿವಾಜಿನಗರದ ಬೇಪಾರಿ ಮಸೀದಿಯ ಧರ್ಮಗುರು ಹನೀಫ್ ಅಫ್ಸರ್ ಅಝೀಝ್ ಅವರನ್ನು ಜು.25ರವರೆಗೆ ಸಿಟ್ ಕಸ್ಟಡಿಗೆ ಪಡೆದಿದೆ ಎಂದು ತಿಳಿದುಬಂದಿದೆ.
ಜನಸಾಮಾನ್ಯರ ಧಾರ್ಮಿಕ ಭಾವನೆಗಳನ್ನು ದುರ್ಬಳಕೆ ಮಾಡಿಕೊಂಡು ಐಎಂಎ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡುವಂತೆ ಪ್ರಚಾರ ಮಾಡುತ್ತಿದ್ದ. ಜೊತೆಗೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆ, ಜು.11ರಂದು ಸಿಟ್ ಬಂಧಿಸಿತ್ತು.
Next Story