Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಮಧುಮೇಹ ಮತ್ತು ಪಾರ್ಶ್ವವಾಯು ಅಪಾಯ...

ಮಧುಮೇಹ ಮತ್ತು ಪಾರ್ಶ್ವವಾಯು ಅಪಾಯ ತಗ್ಗಿಸಲು ಐದು ಸುಲಭದ ಟಿಪ್ಸ್ ಇಲ್ಲಿವೆ

ವಾರ್ತಾಭಾರತಿವಾರ್ತಾಭಾರತಿ19 July 2019 11:27 PM IST
share
ಮಧುಮೇಹ ಮತ್ತು ಪಾರ್ಶ್ವವಾಯು ಅಪಾಯ ತಗ್ಗಿಸಲು ಐದು ಸುಲಭದ ಟಿಪ್ಸ್ ಇಲ್ಲಿವೆ

ಮಧುಮೇಹ ಮತ್ತು ಪಾರ್ಶ್ವವಾಯು ಅಪಾಯ ತಗ್ಗಿಸಲು ಐದು ಸುಲಭದ ಟಿಪ್ಸ್ ಇಲ್ಲಿವೆ

ಪ್ರಿಡಯಾಬಿಟಿಸ್ ಅಥವಾ ಪೂರ್ವ ಮಧುಮೇಹವನ್ನು ಮಧುಮೇಹಕ್ಕೆ ಮೊದಲಿನ ಹಂತವೆಂದು ಹೇಳಬಹುದು. ಅಂದರೆ ವ್ಯಕ್ತಿಯ ರಕ್ತದಲ್ಲಿ ಸಕ್ಕರೆಯ ಮಟ್ಟ ಸಹಜಕ್ಕಿಂತ ಹೆಚ್ಚಾಗಿರುತ್ತದೆ,ಆದರೆ ಮಧುಮೇಹ ರೋಗಿಯಷ್ಟು ಇರುವುದಿಲ್ಲ. ಸಾಮಾನ್ಯವಾಗಿ ಪ್ರಿಡಯಾಬಿಟಿಸ್ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ ಮತ್ತು ಸದ್ದಿಲ್ಲದೆ ನಮ್ಮ ಶರೀರದ ಮೇಲೆ ದಾಳಿ ಮಾಡುತ್ತದೆ. ಹೆಚ್ಚಿನ ಜನರಿಗೆ ತಮಗೆ ಪ್ರಿಡಯಾಬಿಟಿಸ್ ಇದೆ ಎನ್ನುವುದೇ ಗೊತ್ತಿರುವುದಿಲ್ಲ. ಸರಳ ರಕ್ತಪರೀಕ್ಷೆಯಿಂದ ಇದನ್ನು ಪತ್ತೆ ಹಚ್ಚಬಹುದಾಗಿದೆ.

ನೀವು ಅಗತ್ಯಕ್ಕಿಂತ ಹೆಚ್ಚಿನ ದೇಹತೂಕವನ್ನು ಹೊಂದಿದ್ದರೆ ಅಥವಾ ನಿಮ್ಮ ವಯಸ್ಸು 45 ವರ್ಷಗಳನ್ನು ದಾಟಿದ್ದರೆ ಮತ್ತು ನೀವು ವ್ಯಾಯಾಮವನ್ನೂ ಮಾಡುತ್ತಿಲ್ಲವಾದರೆ ನೀವು ಪ್ರಿಡಯಾಬಿಟಿಸ್‌ಗೆ ಗುರಿಯಾಗುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಿದ್ದೀರಿ ಎಂದೇ ಅರ್ಥ. ಪ್ರಿಡಯಾಬಿಟಿಸ್‌ಗೆ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಟೈಪ್ 2 ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಗುರಿಯಾಗುವ ಅಪಾಯವಿದೆ. ಆದರೆ ಕೆಲವು ಸರಳ ಕ್ರಮಗಳಿಂದ ಈ ಸ್ಥಿತಿಯಿಂದ ಪಾರಾಗಬಹುದಾಗಿದೆ.

►ದೇಹತೂಕವನ್ನು ತಗ್ಗಿಸಿ

ದೇಹದ ತೂಕವನ್ನು ಇಳಿಸಿಕೊಳ್ಳುವುದು ಕಷ್ಟದ ಕೆಲಸ ಎಂದು ನೀವು ಭಾವಿಸಬಹುದು,ಆದರೆ ಅದು ನಿಜಕ್ಕೂ ಅಂತಹ ಕಷ್ಟವೇನಲ್ಲ. ನಿಮ್ಮ ಶರೀರದ ತೂಕವನ್ನು ಕೇವಲ ಶೇ.7ರಷ್ಟು ತಗ್ಗಿಸಿಕೊಂಡರೂ ಅದು ಭಾರೀ ಬದಲಾವಣೆಗೆ ಕಾರಣವಾಗಬಲ್ಲದು. ಆದರೂ,ಪ್ರತಿದಿನ ಆರೋಗ್ಯಕರವಾದ,ಕಡಿಮೆ ಕ್ಯಾಲರಿಗಳಿರುವ ಆಹಾರ ಸೇವನೆಯು ಮುಖ್ಯವಾಗಿದೆ. ಬಹುಶಃ ತೂಕ,ಆಹಾರ ಕ್ರಮ ಮತ್ತು ದೈಹಿಕ ಚಟುವಟಿಕೆಗಳತ್ತ ಗಮನ ನೀಡಲು ಇದು ಸಕಾಲವಾಗುತ್ತದೆ.

►ನಿಮ್ಮ ಊಟ ಆರೋಗ್ಯಕರವಾಗಿರಲಿ

ನಿಮ್ಮ ಊಟದ ಅರ್ಧಭಾಗವು ಪಿಷ್ಟರಹಿತ ತರಕಾರಿಗಳಿಂದ ತುಂಬಿದ್ದರೆ ಅದು ಆರೋಗ್ಯಕರ ಆಹಾರ ಸೇವನೆಯ ಉತ್ತಮ ಆರಂಭವಾಗುತ್ತದೆ. ಹಾಗೆಯೇ ಊಟದ ಕಾಲುಭಾಗವು ಪಿಷ್ಟವಿರುವ ಆಹಾರದಿಂದ ಕೂಡಿರಲಿ. ಇದರ ಜೊತೆಗೆ ಉಳಿದ ಕಾಲುಭಾಗದಲ್ಲಿ ಕೋಳಿಮಾಂಸ,ಮೀನು,ಬೀನ್ಸ್ ಇತ್ಯಾದಿಗಳನ್ನು ಸೇರಿಸಿಕೊಳ್ಳಬಹುದು. ಕರಿದ ಖಾದ್ಯಗಳು ಅಥವಾ ಪಾಸ್ತಾಗಳಂತಹ ಕಾರ್ಬೊಹೈಡ್ರೇಟ್ ಹೆಚ್ಚಿರುವ ಆಹಾರಗಳಿಂದ ದೂರವಿರಿ,ಏಕೆಂದರೆ ಇವು ರಕ್ತದಲ್ಲಿಯ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತವೆ.

►ವ್ಯಾಯಾಮ ನಿಮ್ಮ ದಿನಚರಿಯಾಗಲಿ

ಪ್ರತಿದಿನ ವ್ಯಾಯಾಮವನ್ನು ಮಾಡುವ ಮೂಲಕ ಕೆಲವು ಕ್ಯಾಲರಿಗಳನ್ನು ದಹಿಸುವುದರಿಂದ ತ್ವರಿತವಾಗಿ ತೂಕವನ್ನು ಇಳಿಸಿಕೊಳ್ಳಲು ನೆರವಾಗುತ್ತದೆ ಮತ್ತು ನಿಮ್ಮನ್ನು ಉಲ್ಲಸಿತಗೊಳಿಸುತ್ತದೆ. ನೀವೇನೂ ಮ್ಯಾರಥಾನ್ ಓಟಕ್ಕೆ ಸಿದ್ಧರಾಗಬೇಕಿಲ್ಲವಾದ್ದರಿಂದ ತಲೆ ಬಿಸಿ ಬೇಡ. ವಾರಕ್ಕೆ ಐದು ದಿನಗಳ ಕಾಲ,ಪ್ರತಿದಿನ 30 ನಿಮಿಷಗಳ ಬಿರುಸಿನ ನಡಿಗೆಯಿಂದ ನೀವು ದೇಹತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.ನೀವು ಜಿಮ್‌ಗೂ ಸೇರಿಕೊಂಡು ಬೆವರು ಹರಿಸಬಹುದು.

►ಚೆನ್ನಾಗಿ ನಿದ್ರೆ ಮಾಡಿ

ನಿಮ್ಮ ನಿದ್ರೆಯ ಅವಧಿಯು ನಿಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟದೊಂದಿಗೆ ನಂಟು ಹೊಂದಿದೆ. ನಿಮಗೆ ನಿದ್ರೆ ಬರುವುದು ಕಷ್ಟವಾಗಿದ್ದರೆ,ಬೆಳಿಗ್ಗೆ ಬೇಗನೇ ಎಚ್ಚರವಾಗುತ್ತಿದ್ದರೆ ಮತ್ತು ಐದು ಗಂಟೆಗೂ ಕಡಿಮೆ ನಿದ್ರೆ ಮಾಡುತ್ತಿದ್ದರೆ ನೀವು ಮಧುಮೇಹಕ್ಕೆ ತುತ್ತಾಗುವ ಹೆಚ್ಚಿನ ಸಾಧ್ಯತೆಯಿರುತ್ತದೆ. ರಾತ್ರಿ ಕಡ್ಡಾಯವಾಗಿ 7ರಿಂದ 8 ಗಂಟೆಗಳ ನಿದ್ರೆ ಉತ್ತಮ. ಅಂದ ಹಾಗೆ ರಾತ್ರಿ ಮಲಗುವ ಮುನ್ನ ಕಾಫಿ ಅಥವಾ ಮದ್ಯಸೇವನೆಯಿಂದ ದೂರವಿರುವುದು ಒಳ್ಳೆಯದು. ಉತ್ತಮ ನಿದ್ರೆಗಾಗಿ ವೇಳಾಪಟ್ಟಿಯೊಂದನ್ನು ನಿಗದಿ ಮಾಡಿಕೊಳ್ಳಿ ಮತ್ತು ಪ್ರತಿದಿನ ನಿಗದಿತ ಸಮಯಕ್ಕೆ ಹಾಸಿಗೆಗೆ ಶರಣಾಗಿ. ಇದರ ಜೊತೆಗೆ ನಿಮ್ಮ ಮಲಗುವ ಕೋಣೆಯಲ್ಲಿ ಶಾಂತಿಯುತ ವಾತಾವರಣವಿರುವಂತೆ ನೋಡಿಕೊಳ್ಳಿ.

►ಧೂಮ್ರಪಾನ ಮತ್ತು ಮದ್ಯಪಾನವನ್ನು ವರ್ಜಿಸಿ

ನೀವು ಧೂಮ್ರಪಾನ ಅಥವಾ ಮದ್ಯಪಾನದ ಚಟವನ್ನು ಹೊಂದಿದ್ದರೆ ಅದನ್ನು ವರ್ಜಿಸಲು ಇದು ಸಕಾಲವಾಗಿದೆ. ಧೂಮ್ರಪಾನಿಗಳು ಸಾಮಾನ್ಯವಾಗಿ ಟೈಪ್ 2 ಮಧುಮೇಹಕ್ಕೆ ಗುರಿಯಾಗುವ ಅಪಾಯವನ್ನು ಎದುರಿಸುತ್ತಿರುತ್ತಾರೆ ಮತ್ತು ಧೂಮ್ರಪಾನಿಗಳಲ್ಲದವರಿಗೆ ಹೋಲಿಸಿದರೆ ಈ ಅಪಾಯ ಶೇ.30ರಿಂದ ಶೇ.40ರಷ್ಟು ಹೆಚ್ಚಾಗಿರುತ್ತದೆ. ನೀವು ಮಧುಮೇಹಿಯಾಗಿದ್ದೂ ಧೂಮ್ರಪಾನ ಅಥವಾ ಮದ್ಯಪಾನವನ್ನು ಮಾಡುತ್ತಿದ್ದರೆ ಅದು ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ ಮತ್ತು ರಕ್ತದಲ್ಲಿಯ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿರುವುದಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X