Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಬೆಳಕೆಂಬ ಮಾಯಾಲೋಕದಲ್ಲಿ...

ಬೆಳಕೆಂಬ ಮಾಯಾಲೋಕದಲ್ಲಿ...

ವಾರ್ತಾಭಾರತಿವಾರ್ತಾಭಾರತಿ20 July 2019 8:17 PM IST
share
ಬೆಳಕೆಂಬ ಮಾಯಾಲೋಕದಲ್ಲಿ...

‘ಬೆಳಕು’ ಇಲ್ಲದೆ ಜೀವಜಗತ್ತಿನ ವ್ಯಾಪಾರ ನಡೆಯಲಾರದು. ಬೆಳಕಿಲ್ಲದೆ ಛಾಯಾಚಿತ್ರಕ್ಕೆ ಆಸ್ಪದವೂ ಇಲ್ಲ. ಬೆಳಕಿಲ್ಲದೆ ಯಾವುದೇ ಜೀವಜಾಲಕ್ಕೂ ಜೀವನ ಇರುವುದೇ ಇಲ್ಲ. ಸಕಲ ಜೀವ ಸಂಕುಲಕ್ಕೂ ಬೆಳಕು ಅತ್ಯಗತ್ಯವಾಗಿ ಬೇಕೇ ಬೇಕು. ಹಾಗೇಯೇ ಛಾಯಾಗ್ರಹಣಕ್ಕೂ ಕೂಡ. ಬೆಳಕನ್ನು ನಾವು ಹಲವು ವಿಧಗಳಲ್ಲಿ ಹಲವು ರೂಪಗಳಲ್ಲಿ ಗ್ರಹಿಸಿದ್ದೇವೆ.ನೈಸರ್ಗಿಕ ಬೆಳಕು - ಕೃತಕ ಬೆಳಕು ಎಂದು ಪ್ರಧಾನವಾಗಿ ಪ್ರತ್ಯೇಕಿಸಿದರೂ ನಿಸರ್ಗ ಸಹಜ ಬೆಳಕನ್ನು ಮತ್ತೆ ಮತ್ತೆ ವಿಂಗಡಿಸಿ ಬೆಳಕನ್ನು ಹಲವು ರೀತಿಯಲ್ಲಿ ಪ್ರತ್ಯೇಕಿಸಬಹು ದಾಗಿದೆ. ಸೂರ್ಯ ಮೂಡುವ ಸಮಯದಿಂದ ಹಿಡಿದು ಮುಳುಗುವವರೆಗೆ ಭಿನ್ನ ಅಳತೆಯ ಮಾಪನ (ಡಿಗ್ರಿ)ದಲ್ಲಿ ಕಾಣಬಹುದು. ಸೊನ್ನೆ ಡಿಗ್ರಿಯಿಂದ ಹಿಡಿದು 180 ಡಿಗ್ರಿಯವರೆಗೆ ಇದನ್ನು ವಿಂಗಡಿಸಲಾಗಿದೆ. ಸೂರ್ಯನ ಹುಟ್ಟು ಸೊನ್ನೆ ಡಿಗ್ರಿಯ ಬೆಳಕೆಂದೂ ಮಧ್ಯಾಹ್ನದ ಬೆಳಕನ್ನು 90 ಡಿಗ್ರಿಯ ಬೆಳಕೆಂತಲೂ ಸಂಜೆಯ ಸೂರ್ಯಾಸ್ತವನ್ನು 180 ಡಿಗ್ರಿ ಬೆಳಕೆಂದೂ ವಿಂಗಡಿಸಲಾಗಿದೆ.

ನೈಸರ್ಗಿಕ ಬೆಳಕನ್ನು ಛಾಯಾಗ್ರಹಣದಲ್ಲಿ ಬಳಸುವಾಗ ಸೊನ್ನೆ ಡಿಗ್ರಿ ಬೆಳಕಿನಿಂದ 40 ಡಿಗ್ರಿ ಬೆಳಕಿನವರೆಗೂ ನೇರ ಬೆಳಕು (direct light) ಎಂತಲೂ 40 ಡಿಗ್ರಿ ಬೆಳಕಿನಿಂದ 140 ಡಿಗ್ರಿಯವರೆಗೆ ಬೀಳುವ ಬೆಳಕನ್ನು ನೆತ್ತಿಯ ಮೇಲಿನ (top light) ಬೆಳಕೆಂದೂ 140 ಡಿಗ್ರಿಯಿಂದ 180 ಡಿಗ್ರಿಯವರೆಗೆ (ಸೂರ್ಯಾಸ್ತ) ಮತ್ತೊಮ್ಮೆ ನೇರ ಬೆಳಕೆಂದು ಕರೆಯುತ್ತೇವೆ.

ನೇರ ಬೆಳಕಿನ ಛಾಯಾಗ್ರಹಣದಲ್ಲಿ ಬೆಳಕು ಮನುಷ್ಯನ ಕಣ್ಣೋಟದ ಅಳತೆಗೆ ಬೀಳುವುದರಿಂದ ನಾವು ಚಿತ್ರಿಸ ಬಯಸುವ ವಿಷಯ(subject)ದ ಮೇಲೆ ಸ್ಪಷ್ಟವಾಗಿ ಬೀಳುವುದರಿಂದ (ಎಲ್ಲ ವಸ್ತುಗಳನ್ನು ಮನುಷ್ಯ ತನ್ನ ಕಣ್ಣಳತೆಯ ‘‘ದೃಷ್ಟಿಕೋನ’’ದಲ್ಲಿ ಗ್ರಹಿಸುವುದರಿಂದ ಬೆಳಗಿನ ಮತ್ತು ಸಂಜೆಯ ನೈಸರ್ಗಿಕ ಬೆಳಕು ಕೂಡ ಮನುಷ್ಯ ಗ್ರಹಿಸುವ ವಸ್ತುಗಳ/ವಿಷಯ (subject) ಗಳ ಮೇಲೆ ಬೀಳುವ ನೇರ ಬೆಳಕನ್ನು ಒಳ್ಳೆಯ ಬೆಳಕು ಎಂದು ಗ್ರಹಿಸಿಕೊಂಡಿದ್ದಾನೆ) ಚಿತ್ರ ಸುಂದರವಾಗಿ ಮತ್ತು ಉತ್ತಮವಾಗಿ ಮೂಡಿಬರುತ್ತದೆ. ಬೆಳಕಿನಲ್ಲಿ ಒಳ್ಳೆಯ ಬೆಳಕು (good night), ಕೆಟ್ಟ ಬೆಳಕು ಎಂಬುದು ಇಲ್ಲವಾದರೂ ಮಧ್ಯಾಹ್ನದ ಬೆಳಕನ್ನು ಛಾಯಾಗ್ರಹಣದ ಭಾಷೆಯಲ್ಲಿ ಕೆಟ್ಟ ಬೆಳಕೆಂದು ಪರಿಗಣಿತವಾಗಿದೆ.

ನೈಸರ್ಗಿಕ ಬೆಳಕನ್ನೇ ಛಾಯಾಗ್ರಹಣದಲ್ಲಿ ಎರಡು ರೀತಿಯಲ್ಲಿ ಬಳಸಬಹುದಾಗಿದೆ. ನೇರ ಬೆಳಕು (Direct light) (Indirect light) ಪಾರ್ಶ್ವ ಬೆಳಕು . ನೇರ ಬೆಳಕೆಂದರೆ ಸೂರ್ಯನ ಬೆಳಕನ್ನು ನೇರವಾಗಿ ಉಪಯೋಗಿಸಿಕೊಳ್ಳುವ ಬೆಳಕು. ಉದಾಹರಣೆಗೆ ಲ್ಯಾಂಡ್ ಸ್ಕೇಪ್ ಚಿತ್ರಗಳು, ಕಟ್ಟಡಗಳು, ರಸ್ತೆ, ಕಾಡಿನ ಗಿಡ ಮರಗಳ ಭೂಪ್ರದೇಶ, ಕೆರೆ-ಹೊಳೆ- ಜಲಪಾತ-ಸಮುದ್ರ ತೀರದ ಚಿತ್ರಗಳನ್ನು ತಗೆಯುವಾಗ ಬಳಸುವಂಥ ಬೆಳಕನ್ನು ನೇರ ಬೆಳಕೆಂದು ಭಾವಿಸಿಕೊಳ್ಳಬಹುದು.

ಹಾಗೆಯೇ ಕಟ್ಟಡದ ಒಳಗೆ, ಕಿಟಕಿ, ಬಾಗಿಲು, ಮನೆಯ ಪಡಸಾಲೆ, ಗಾಜಿನ ಹೆಂಚುಗಳ ಮೂಲಕ ಪ್ರತಿಫಲಿಸಬ ಹುದಾದ ಬೆಳಕನ್ನು ಪಾರ್ಶ್ವ ಬೆಳಕು (indirect light) ಎಂದು ಕರೆಯುತ್ತೇವೆ. ಸೂರ್ಯನ ಬೆಳಕಿನಿಂದ ಪ್ರತಿಫಲಿಸ ಬಹುದಾದ ಬೆಳಕು ನೇರ ಬೆಳಕಿಗಿಂತ ಮೃದು ಬೆಳಕಾಗಿ (soft light)  ಪ್ರತಿಫಲಿಸುತ್ತಿರುತ್ತದೆ. ಈ ಮೃದು ಬೆಳಕಿನ ಸಹಾಯದಿಂದ ಮೂಡುವ ಚಿತ್ರಗಳಲ್ಲಿ ನಾಟಕೀಯ ಅಂಶಗಳು ಬೆರೆತಿರುತ್ತವೆ.ನೇರ ಬೆಳಕು ಸಾಮಾನ್ಯವಾಗಿ ಚದುರಿದ ಬೆಕಾಗಿದ್ದರೆ, ಪ್ರತಿಫಲಿತ (ಪಾರ್ಶ್ವ)ಬೆಳಕು ನಿರ್ದಿಷ್ಟ ಮೂಲದಿಂದ ನಿರ್ದಿಷ್ಟ ಸ್ಥಳ (place)ಹಾಗೂ ವಿಷಯ (subject)ದ ಮೇಲೆ ಹದವಾಗಿ ಚೆಲ್ಲಿರುತ್ತದೆ. ಹೀಗಾಗಿ ಬೆಳಕು ಕತ್ತಲೆಯ ಸಮಾಗಮ ಪ್ರತಿಫಲಿತ ಬೆಳಕಿನಲ್ಲಿ ಗಾಢವಾಗಿರುತ್ತದೆ.

ಬೆಳಕಿಗೊಂದು ಟಿಪ್ಪಣಿ:

► ನೈಸರ್ಗಿಕ ಬೆಳಕಿನಲ್ಲಿ ತೆಗೆದ ಚಿತ್ರಗಳು ನೈಜ ಚಿತ್ರಗಳ ಭಾವನೆ ಹೊಮ್ಮಿಸುತ್ತವೆ.

► ನೈಸರ್ಗಿಕ ಬೆಳಕಿನಲ್ಲಿ ವರ್ಣ ಸಂಯೋಜನೆ, ಬೆಳಕಿನಲ್ಲಿರುವ ಸೌಂದರ್ಯ, ಚಿತ್ರಕ್ಕಿರಬೇಕಾದ ‘ಮೂಡ್’ ಮತ್ತು ವಿಭಿನ್ನ ಆಯಾಮಗಳನ್ನು ದೊರಕಿಸಿ ಚಿತ್ರದ ಕಲಾತ್ಮಕ ಸೌಂದರ್ಯವನ್ನು (aesthetic sence)  ಹೆಚ್ಚಿಸುತ್ತದೆ. (ಚಿತ್ರಗಾರನ ಒಳಗಣ್ಣು ಇಲ್ಲಿ ಮುಖ್ಯವಾಗಿ ಕೆಲಸ ಮಾಡಬೇಕು.)

► ಕತ್ತಲು-ಬೆಳಕಿನ ಸಂಯೋಜನೆ ಮೂಲಕ ಚಿತ್ರವೊಂದಕ್ಕೆ ನಾಟಕೀಯ ಅಂಶಗಳನ್ನು ಬೆರೆಸಬಹುದು.

► ಕತ್ತಲು-ಬೆಳಕಿನ ಜೊತೆಗೆ ಧೂಳು, ಹೊಗೆ, ಮೋಡ, ಮಳೆ, ಇಬ್ಬನಿ, ಮಂಜು ಮುಂತಾದ ನೈಸರ್ಗಿಕ ಅಂಶಗಳನ್ನು ಬಳಸಿಕೊಂಡರೆ ವಿಭಿನ್ನ ನೋಟ, ವಿಶೇಷ ದೃಷ್ಟಿಕೋನಗಳಿಂದ ಜೀವಂತಿಕೆಯ ಚಿತ್ರಗಳನ್ನಾಗಿಸಬಹುದು.

► ಬೆಳಕು-ಕತ್ತಲೆಯ ಸಮಾಗಮದಿಂದಲೇ ಅಸಂಗತ ಚಿತ್ರಗಳಾಗಿಸಬಹುದು.

► ಕಲಾತ್ಮಕ ಚಿತ್ರವನ್ನಾಗಿಸಲು ಬೆಳಕು-ಕತ್ತಲೆ (Light & Shadow) ಸಂಯೋಜನೆಯಿಂದ ಚಿತ್ರದ ಮೂಡ್‌ನೊಂದಿಗೆ ನೋಡುಗರ ಭಾವನೆ (mood) ಯನ್ನೂ ಬದಲಿಸಬಹುದು.

ಛಾಯಾಗ್ರಾಹಕನಿಗೆ ಬೆಳಕಿನ ಮೂಲ, ಬೆಳಕಿನಲ್ಲಿರುವ ಸೌಂದರ್ಯ, ಬೆಳಕಿನ ಗುಣಮಟ್ಟಗಳ ಬಗೆಗೆ ಅರಿವಿದ್ದರೆ ಚಿತ್ರದ ಒಳನೋಟ (inner sight) ತೆರೆದುಕೊಳ್ಳುತ್ತದೆ. ಆಗ ಮಾತ್ರ ಕ್ರಿಯಾಶಾಲಿ ಛಾಯಾಗ್ರಾಹಕ ಹುಟ್ಟಲು ಸಾಧ್ಯ. ಬೆಳಕು ಯಾವುದೇ ಇರಲಿ ಅದನ್ನು ಸಮರ್ಥವಾಗಿ ಬಳಸಿಕೊಳ್ಳುವ ಜಾಣ್ಮೆ ಛಾಯಾಗ್ರಾಹಕನಿಗಿರಬೇಕು. ಆಗ ಮಾತ್ರ ಅತ್ಯುತ್ತಮ ಚಿತ್ರವೊಂದು ಮೂಡುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X