ಜಿಲ್ಲಾಧಿಕಾರಿಯಿಂದ ದಲಿತರ ಕಡೆಗಣನೆ: ದಸಂಸ ಒಕ್ಕೂಟ ಆರೋಪ
ಉಡುಪಿ, ಜು.23: ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ಅಧಿಕಾರ ಸ್ವೀಕರಿಸಿ ಸುಮಾರು ಆರು ತಿಂಗಳಾಗಿದ್ದು, ಈವರೆಗೆ ಒಮ್ಮೆ ಸಹ ದಲಿತರ ಕುಂದುಕೊರತೆ ಸಭೆಯನ್ನು ಕರೆಯದೇ, ದಲಿತರ ಸಮಸ್ಯೆಗಳನ್ನು ಆಲಿಸದೇ ದಲಿತರನ್ನು ಕಡೆಗಣಿಸಿದ್ದಾರೆ ಎಂದು ಉಡುಪಿ ಜಿಲ್ಲಾ ದಲಿತ ಸಂಘರ್ಷ ಸಮಿತಿ ಮಹಾಒಕ್ಕೂಟದ ಜಿಲ್ಲಾಧ್ಯಕ್ಷ ಉದಯಕುಮಾರ್ ತಲ್ಲೂರು ಆರೋಪಿಸಿದ್ದಾರೆ.
ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿರುವ ತಲ್ಲೂರು, ಜಿಲ್ಲಾಧಿಕಾರಿಯವರ ಈ ನಡೆಯನ್ನು ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.
ಅಲ್ಲದೇ ಇನ್ನು 15 ದಿನಗಳೊಳಗಾಗಿ ದಲಿತರ ಕುಂದುಕೊರತೆ ಸಭೆಯನ್ನು ಕರೆಯದೇ ಇದ್ದರೆ, ಜಿಲ್ಲಾಧಿಕಾರಿ ಕಚೇರಿ ಎದುರು ಮಹಾಒಕ್ಕೂಟ ಮಳೆಯಲ್ಲಿ ನೆನೆದು ಪ್ರತಿಭಟನೆ ನಡೆಸಲಿದೆ ಎಂದು ಅವರು ಎಚ್ಚರಿಸಿದ್ದಾರೆ.
Next Story