ಸಾಲಬಾಧೆ: ಮೀನುಗಾರ ಆತ್ಮಹತ್ಯೆ
ಕೋಟ, ಜು.23: ಮೀನುಗಾರಿಕೆ ಕೆಲಸ ವಿರಳವಾಗಿರುವುದರಿಂದ ಸಾಲ ಮರುಪಾವತಿಸಲು ಸಾಧ್ಯವಾಗದ ಚಿಂತೆಯಲ್ಲಿ ಮೀನುಗಾರರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜು.23ರಂದು ಬೆಳಗ್ಗೆ ನಡೆದಿದೆ.
ಮೃತರನ್ನು ಕೋಟತಟ್ಟು ಗ್ರಾಮ ಪಡುಕೆರೆ ನಿವಾಸಿ ಚಿಕ್ಕಮ್ಮ ಪೂಜಾರ್ತಿ ಎಂಬವರ ಮಗ ಸಂತೋಷ ಪೂಜಾರಿ(40) ಎಂದು ಗುರುತಿ ಸಲಾಗಿದೆ. ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಇವರು, ಮೀನುಗಾರಿಕೆ ಸಂಬಂಧ ಕೆಲವು ಸೊಸೈಟಿ ಹಾಗೂ ಸಂಘ ಸಂಸ್ಥೆಗಳಲ್ಲಿ ಸಾಲ ಮಾಡಿಕೊಂಡಿದ್ದರು.
ಇತ್ತೀಚೆಗೆ ಮೀನುಗಾರಿಕೆ ಕೆಲಸ ವಿರಳವಾಗಿರುವುದರಿಂದ ಸಾಲ ಮರು ಪಾವತಿಸಲು ಅವರಿಗೆ ಕಷ್ಟವಾಗಿತ್ತೆನ್ನಲಾಗಿದೆ. ಇದೇ ಚಿಂತೆಯಲ್ಲಿ ಅವರು ಮಾನಸಿಕವಾಗಿ ನೊಂದು ಬೆಳಗ್ಗೆ 6:30ರ ಸುಮಾರಿಗೆ ಕೀಟನಾಶಕ ಔಷಧಿಯನ್ನು ಸೇವಿಸಿದ್ದರು. ಇದರಿಂದ ತೀವ್ರವಾಗಿ ಅಸ್ವಸ್ಥ ಗೊಂಡಿದ್ದ ಇವರು ಚಿಕಿತ್ಸೆ ಫಲ ಕಾರಿಯಾಗದೆ ಬೆಳಿಗ್ಗೆ 10:30ರ ಸುಮಾರಿಗೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಮೃತ ಪಟ್ಟರೆಂದು ತಿಳಿದುಬಂದಿದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story