Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಕೃಷಿ ಜಾನಪದ: ಮಹತ್ವದ ಸಂಶೋಧನಾ ಕೃತಿ

ಕೃಷಿ ಜಾನಪದ: ಮಹತ್ವದ ಸಂಶೋಧನಾ ಕೃತಿ

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ24 July 2019 6:44 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಕೃಷಿ ಜಾನಪದ: ಮಹತ್ವದ ಸಂಶೋಧನಾ ಕೃತಿ

ಜಾನಪದ ಸಾಹಿತ್ಯಗಳು ಹುಟ್ಟುವುದೇ ಕಾಯಕಗಳ ಜೊತೆ ಜೊತೆಗೆ. ಕಾಯಕವನ್ನು ಹಗುರ ಮಾಡುವ ಕೆಲಸವೂ ಸಾಹಿತ್ಯದಿಂದಾಗುತ್ತಿತ್ತು. ಧಾರ್ಮಿಕ, ಆಧ್ಯಾತ್ಮಿಕ ಹೊಳಹುಗಳ ಜೊತೆಗೆ ಒಳಗಿನ ನೋವು, ಖುಷಿ, ಸಂತೋಷಗಳು ಈ ಸಂದರ್ಭದಲ್ಲಿ ಅಭಿವ್ಯಕ್ತಿಗೊಳ್ಳುತ್ತಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯೇ ಮುಖ್ಯ ಕಾಯಕ ವಾಗಿದ್ದುದರಿಂದ, ಈ ಕೃಷಿ ಚಟುವಟಿಕೆಗಳಲ್ಲೇ ಹಾಡುಹಸೆಗಳು ಹುಟ್ಟಿಕೊಂಡವು. ಕೃಷಿಯನ್ನು ಹೊರತುಪಡಿಸಿದರೆ ಜಾನಪದ ಹಾಡುಗಳನ್ನು ನಮ್ಮದಾಗಿಸಿಕೊಳ್ಳಲು ಸಾಧ್ಯವಿಲ್ಲ. ಉಳಿದಂತೆ ಮಹಿಳೆಯರ ಮನೆಯೊಳಗಿನ ಕೆಲಸ ಕಾರ್ಯಗಳಲ್ಲೂ ಈ ಹಾಡುಗಳು ಬೆಸೆದುಕೊಂಡಿರುತ್ತಿದ್ದವು. ಜೊತೆಗೆ ಮದುವೆ, ಹಬ್ಬಗಳ ಸಂದರ್ಭದಲ್ಲೂ ಜನಸಾಮಾನ್ಯರು ಹಾಡು, ಕತೆಗಳ ಮೂಲಕ ಸಂಭ್ರಮಗಳನ್ನು ಹಂಚಿಕೊಳ್ಳುತ್ತಿದ್ದರು.
   ಚಿತ್ರದುರ್ಗ ಜಿಲ್ಲೆಯನ್ನು ಕ್ಷೇತ್ರ ಕಾರ್ಯವಾಗಿರಿಸಿ ಕೊಂಡು ಡಾ. ಎಂ. ಜಿ. ಈಶ್ವರಪ್ಪ ಅವರ ಸಂಶೋಧನಾ ಗ್ರಂಥ ‘ಕೃಷಿ ಜಾನಪದ’ ಈ ನೆಲದ ಮೂಲವನ್ನು ಸ್ಪಷ್ಟಿಸುತ್ತದೆ. ಇದು ಕೇವಲ ಜಾನಪದ ಸಾಹಿತ್ಯಕ್ಕಷ್ಟೇ ಸೀಮಿತವಾಗದೆ, ನಾಡಿನ ಕೃಷಿಯ ಒಳಹೊರಗನ್ನೂ, ಅದನ್ನು ನಂಬಿಕೊಂಡ ಜನರ ಬದುಕನ್ನು ತೆರೆದಿಡುತ್ತದೆ. ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ 1983ರಲ್ಲಿ ಬಿ. ಆರ್. ಪ್ರಾಜೆಕ್ಟ್‌ನಲ್ಲಿ ನಡೆದ ಜಾನಪದ ವಿಚಾರಸಂಕಿರಣದಲ್ಲಿ ಲೇಖಕರು ಮಂಡಿಸಿದ ‘ಕೃಷಿ ಜಾನಪದ’ ಲೇಖನದ ವಿಸ್ತೃತ ಫಲವಾಗಿದೆ ಈ ಗ್ರಂಥ. ಇತಿಹಾಸ ಮತು ಪ್ರಾಕ್ತನ ಶಾಸ್ತ್ರದ ದೃಷ್ಟಿಯಿಂದ ಮಹತ್ವಪೂರ್ಣ ಜಿಲ್ಲೆಯಾಗಿರುವ ಚಿತ್ರದುರ್ಗವನ್ನು ಕೇಂದ್ರೀಕರಿಸಿರುವ ಲೇಖಕರು, ಜಿಲ್ಲೆಯ ಹಳ್ಳಿಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ಕೃಷಿ ಕಾರ್ಯಗಳನ್ನು ಸಂಶೋಧನೆ ನಡೆಸಿ ದಾಖಲಿಸಿದ್ದಾರೆ. ಕ್ಷೇತ್ರಕಾರ್ಯದ ಆನಂತರ ಸಂಗ್ರಹಿತ ವಿಷಯಗಳನ್ನು ವರ್ಗೀಕರಿಸಿ, ಲಭ್ಯವಿರುವ ಸಾಹಿತ್ಯದೊಂದಿಗೆ ಪರಾಮರ್ಶಿಸಿ, ವ್ಯವಸಾಯದ ಉಗಮ ಮತ್ತು ಗ್ರಂಥಗಳು, ಚಿತ್ರದುರ್ಗ ಜಿಲ್ಲೆಯ ವ್ಯವಸಾಯ, ಜಿಲ್ಲೆಯ ಮಳೆ ಜಾನಪದ, ಖುಷ್ಕಿ ವ್ಯವಸಾಯದ ಬೆಳೆಗಳು, ತರಿ ಮತ್ತು ಬಾಗಾಯ್ತು ಬೆಳೆಗಳು, ವ್ಯವಸಾಯದ ಸಾಮಾನ್ಯ ವಿಷಯಗಳು ಹೀಗೆ ಏಳು ಅಧ್ಯಾಯದಲ್ಲಿ ಕೃತಿಯೊಳಗೆ ವಿವರಿಸಲಾಗಿದೆ. ವ್ಯವಸಾಯವು ಶಾಸ್ತ್ರೀಯ ಮಾತ್ರವಲ್ಲ, ಅದೊಂದು ಸೃಜನಶೀಲ ಕಾರ್ಯವೆನ್ನುವುದನ್ನೂ ಈ ಕೃತಿಯ ಮೂಲಕ ನಾವು ಮನಗಾಣಬಹುದು. ಚಿತ್ರದುರ್ಗ ಕೇಂದ್ರವಾಗಿದ್ದರೂ, ಕೃತಿಯೂ ಕೃಷಿಯ ಉಗಮ, ಕರ್ನಾಟಕದಲ್ಲಿ ಕೃಷಿಯ ಇತಿಹಾಸ ಇತ್ಯಾದಿಗಳನ್ನು ಗಂಭೀರವಾಗಿ ಅಧ್ಯಯನ ಮಾಡುತ್ತದೆ. ‘ಕವಿರಾಜಮಾರ್ಗ ಪೂರ್ವ ಕಾಲದ ವ್ಯವಸಾಯ ಪದ್ಧತಿ’ಯ ಬಗ್ಗೆಯೂ ಇಲ್ಲಿ ಮಾಹಿತಿಗಳಿವೆ. ಚಿದಾನಂದಮೂರ್ತಿ ಅವರ ಅಧ್ಯಯನವನ್ನು ಉಲ್ಲೇಖಿಸುತ್ತಾ, ರೈತರನ್ನು ಭೂದೇವಿಯ ಮಕ್ಕಳು, ಭೂಮಿಯ ಪುತ್ರರು, ಒಕ್ಕಲು ಮಕ್ಕಳುಗಳೆಂದು ಶಾಸನಗಳು ಕರೆತಿರುವುದನ್ನು ಬರೆಯುತ್ತಾರೆ. ಕನ್ನಡದ ಹಿಂದಿನ ಕಾವ್ಯಗಳಲ್ಲಿ ವ್ಯವಸಾಯ ಹೇಗೆ ಪರಿಚಯಿಸಲ್ಪಟ್ಟಿದೆ, ಎನ್ನುವುದನ್ನು ಕವಿರಾಜ ಮಾರ್ಗದಿಂದ ಹಿಡಿದು ವಚನ ಸಾಹಿತ್ಯದವರೆಗೆ ಬೇರೆ ಬೇರೆ ನೆಲೆಗಳಲ್ಲಿ ಕೃಷಿ ವಿವರಿಸುತ್ತದೆ. ಕನಕ ದಾಸರ ರಾಮಧಾನ್ಯ ಚರಿತ್ರೆಗಾಗಿಯೇ ಹತ್ತು ಪುಟಗಳನ್ನು ಕೃತಿ ಮೀಸಲಿರಿಸಿದೆ. ಬೇಸಾಯಗಳು ನಮ್ಮ ಸಂಸ್ಕೃತಿಯೊಂದಿಗೆ ಅವಿನಾಭಾವವಾಗಿ ಬೆಸೆದಿರುವ ಬಗೆಯನ್ನು ಕುತೂಹಲಕರವಾಗಿ ಕೃತಿ ನಿರೂಪಿಸುತ್ತದೆ. ಕೃಷಿ ದೂರವಾಗುತ್ತಿರುವ ದಿನಗಳಲ್ಲಿ, ಕೃಷಿಯ ಕುರಿತಂತೆ ಅಪಾರ ಮಾಹಿತಿಗಳನ್ನು ಹೊಂದಿರುವ ಈ ಕೃತಿ ಮಹತ್ವಪೂರ್ಣವಾದುದು. ಈ ಕೃತಿಯ ಹುಡುಕಾಟ ಮನುಷ್ಯನ ಬದುಕಿನ ಹುಡುಕಾಟವೇ ಹೌದು.
484 ಪುಟಗಳ ಈ ಕೃತಿಯ ಮುಖಬೆಲೆ 270 ರೂಪಾಯಿ. ಕನ್ನಡ ಸಾಹಿತ್ಯ ಪರಿಷತ್ ಈ ಕೃತಿಯನ್ನು ಹೊರತಂದಿದೆ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
-ಕಾರುಣ್ಯಾ
-ಕಾರುಣ್ಯಾ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X