ಕೊಂಕಣಿ ಸಾಹಿತ್ಯ, ಕಲಾ ಸಂಘಟನೆಯ ಅಧ್ಯಕ್ಷರಾಗಿ ಲೂಯಿಸ್ ಅಲ್ಮೇಡ ಆಯ್ಕೆ

ಉಡುಪಿ, ಜು.27:ಉಡುಪಿ ಜಿಲ್ಲಾ ಕೊಂಕಣಿ ಸಾಹಿತ್ಯ, ಕಲಾ ಮತ್ತು ಸಾಂಸ್ಕೃತಿಕ ಸಂಘಟನೆಯ ವಾರ್ಷಿಕ ಮಹಾಸಭೆ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನನ ಸಭಾಭವನದಲ್ಲಿ ಇತ್ತೀಚೆಗೆ ನಡೆದು, ನಿಕಟಪೂರ್ವ ಅಧ್ಯಕ್ಷ ಡಾ.ಜೆರಾಲ್ಡ್ ಪಿಂಟೊ ಅವರು 2019-20ನೇ ಸಾಲಿನ ದಾಧಿಕಾರಿಗಳ ಆಯ್ಕೆ ನಡೆಸಿಕೊಟ್ಟರು.
ಅಧ್ಯಕ್ಷರಾಗಿ ಮಣಿಪಾಲದ ಲೂಯಿಸ್ ಅಲ್ಮೇಡಾ ಮಣಿಪಾಲ ಇವರು ಸರ್ವಾನುಮತದಿಂದ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಗೊಡ್ಫ್ರಿ ಡಿಸೋಜ ಉದ್ಯಾವರ, ಕಾರ್ಯದರ್ಶಿ-ರೋಜಿ ಬಾರೆಟ್ಟೋ ಕಲ್ಯಾಣಪುರ, ಸಹ ಕಾರ್ಯ ದರ್ಶಿ-ರೋಜಿ ಕ್ವಾಡ್ರಸ್ ಕಲ್ಯಾಣಪುರ, ಕೋಶಾಧಿಕಾರಿ ಆಲ್ಫೋನ್ಸ್ ಡಿಕೋಸ್ತ ಉಡುಪಿ ಆಯ್ಕೆಯಾದರು.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಜೆಸಿಂತಾ ಕ್ವಾಡ್ರಸ್, ರಿಚಾರ್ಡ್ ಡಿಸೋಜ, ಆ್ಯಂಟನಿ ಲೂವಿಸ್, ಆಲ್ಫೋನ್ಸ್ ಡಿಸೋಜ, ಸ್ಟಾನಿ ವಿನ್ಸೆಂಟ್ ರೊಡ್ರಿಗಸ್ ಆಯ್ಕೆಯಾದರು.
Next Story





