ಕ್ಯಾಬ್ ಚಾಲಕನ ಅಪಹರಿಸಿ ಮಾರಣಾಂತಿಕ ಹಲ್ಲೆ
![ಕ್ಯಾಬ್ ಚಾಲಕನ ಅಪಹರಿಸಿ ಮಾರಣಾಂತಿಕ ಹಲ್ಲೆ ಕ್ಯಾಬ್ ಚಾಲಕನ ಅಪಹರಿಸಿ ಮಾರಣಾಂತಿಕ ಹಲ್ಲೆ](https://www.varthabharati.in/sites/default/files/images/articles/2019/07/27/202559-1564247664.jpg)
ಬೆಂಗಳೂರು, ಜು.27: ಕ್ಯಾಬ್ ಚಾಲಕನನ್ನು ಅಪಹರಿಸಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹೊಂಗಸಂಧ್ರದಲ್ಲಿ ನಡೆದಿದೆ.
ಮಂಡ್ಯ ಮೂಲದ ವಿಜಯ್ಕುಮಾರ್ (31) ಹಲ್ಲೆಗೆ ಒಳಗಾದ ಕ್ಯಾಬ್ ಚಾಲಕ ಎಂದು ತಿಳಿದುಬಂದಿದೆ.
ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಮಾರ್ಗವಾಗಿ ವಿಜಯ್ ಕುಮಾರ್ ಬನಶಂಕರಿಗೆ ಹೋಗುತ್ತಿದ್ದರು. ಚಲಿಸುತ್ತಿದ್ದ ಕಾರಿಗೆ ಏಕಾಏಕಿ ಬ್ರೇಕ್ ಹಾಕಿ ಅಪಘಾತಕ್ಕೆ ಕಾರಣನಾಗಿದ್ದಾನೆ ಎನ್ನುವ ಕ್ಷುಲ್ಲಕ ಕಾರಣಕ್ಕೆ ಕ್ಯಾಬ್ ಚಾಲಕನನ್ನು ಅಪಹರಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
Next Story