Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ರಂಗದೊಳಗಿಂದ
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಬುಡಬುಡಿಕೆ
  4. ಮುಖ್ಯಮಂತ್ರಿ ಯಡಿಯೂರಪ್ಪರ ಒಂದು ದಿನದ...

ಮುಖ್ಯಮಂತ್ರಿ ಯಡಿಯೂರಪ್ಪರ ಒಂದು ದಿನದ ವೃತ್ತಾಂತ...

*ಚೇಳಯ್ಯ chelayya@gmail.com*ಚೇಳಯ್ಯ chelayya@gmail.com27 July 2019 6:34 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಮುಖ್ಯಮಂತ್ರಿ ಯಡಿಯೂರಪ್ಪರ ಒಂದು ದಿನದ ವೃತ್ತಾಂತ...

ಯಡಿಯೂರಪ್ಪ ಮುಖ್ಯಮಂತ್ರಿಯಾದುದೇ ಅವರ ಮುಂದಿನ ಕಾರ್ಯಕ್ರಮಗಳ ವಿವರಗಳನ್ನು ಅವರ ಆಪ್ತ ಕಾರ್ಯದರ್ಶಿ ಅಸಂತೋಷ್ ಪತ್ರಕರ್ತರಿಗೆ ಬಿಡುಗಡೆ ಮಾಡಿದರು. ಪತ್ರಕರ್ತ ಎಂಜಲು ಕಾಸಿ ಅವರಿಗೆ ದೊರಕಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ದಿನಚರಿ ಪ್ರಕಟನೆ ಕೆಳಗಿನಂತಿದೆ.
***
ಬೆಳಗ್ಗೆ 7 ಗಂಟೆ: ತೀರಾ ಆಪ್ತರೊಬ್ಬರ ಜೊತೆಗೆ ಗುಪ್ತಸಮಾಲೋಚನೆ. ಬಳಿಕ ಬಿಜೆಪಿಯೊಳಗೆ ಹೊಸದಾಗಿ ಯಾರು ಯಾರು ಅತೃಪ್ತರಿದ್ದಾರೆ ಎನ್ನುವುದರ ಕುರಿತಂತೆ ಗುಪ್ತಚರ ಇಲಾಖೆಯಿಂದ ದೊರಕಿದ ಮಾಹಿತಿ ಪರಿಶೀಲನೆ.
ಬೆಳಗ್ಗೆ 10 ಗಂಟೆ: ಎಲ್ಲ ಅತೃಪ್ತ ಶಾಸಕರು ಚುನಾವಣೆಗಾಗಿ ಮಾಡಿದ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಲು ಸೂಚನೆ. ಈ ಕುರಿತಂತೆ ಸುದ್ದಿಗೋಷ್ಠಿ (ಪತ್ರಕರ್ತರಿಗೆ ವಿಶೇಷ ಉಡುಗೊರೆ-ಶೀರ ಉಪ್ಪಿಟ್ಟಿನ ಜೊತೆಗೆ)
ಬೆಳಗ್ಗೆ 10:30: ಅತೃಪ್ತ ಶಾಸಕರು ವಿವಿಧ ರೆಸಾರ್ಟ್‌ಗಳಲ್ಲಿ ಈಗಾಗಲೇ ಮಾಡಿರುವ ಎಲ್ಲ ಸಾಲಗಳ ಮನ್ನಾ (ವಿವಿಧ ರೆಸಾರ್ಟ್‌ಗಳಿಗೆ ಭೇಟಿ ನೀಡಿದ ಬಳಿಕ ಘೋಷಣೆ)
ಅಪರಾಹ್ನ 11: ನಾಡಿನ ಎಲ್ಲ ಪತ್ರಕರ್ತರು ವಿವಿಧ ಬಾರ್‌ಗಳಲ್ಲಿ, ವೈನ್‌ಶಾಪ್‌ಗಳಲ್ಲಿ ಮಾಡಿರುವ ಸಾಲಗಳ ಮನ್ನಾ. ಈ ಕುರಿತಂತೆ ಮತ್ತೊಂದು ವಿಶೇಷ ಪತ್ರಿಕಾಗೋಷ್ಠಿ. (ಪತ್ರಿಕಾಗೋಷ್ಠಿಯ ಬಳಿಕ ಪತ್ರಕರ್ತರಿಗೆ ವಿಶೇಷಗುಂಡುಗಳ ಹಂಚುವಿಕೆ. ಸಂಭ್ರಮಾಚರಣೆ).
ಮಧ್ಯಾಹ್ನ 12: ಅನರ್ಹ ಶಾಸಕರಿಗೆ ವಿಶೇಷ ಸ್ವಉದ್ಯೋಗ ಯೋಜನೆಗಳ ಘೋಷಣೆ. ಅವರ ಸ್ವಉದ್ಯೋಗಗಳಿಗಾಗಿ ತಲಾ 10 ಕೋಟಿ ರೂ. ಬಿಡುಗಡೆ ಮತ್ತು ಜೊತೆ ಜೊತೆಗೆ ಅವರಿಗೆ ನೀಡಲಾಗುವ ಸಾಲಗಳ ಮನ್ನಾ ಘೋಷಣೆ.
ಮಧ್ಯಾಹ್ನ 1: ಬಿಜೆಪಿಯೊಳಗೆ ಯಾರೂ ಅತೃಪ್ತರಿಲ್ಲ. -ಯಡಿಯೂರಪ್ಪ (ಪತ್ರಿಕಾಗೋಷ್ಠಿ. ಪತ್ರಕರ್ತರಿಗಾಗಿ ವಿಶೇಷ ಊಟದ ವ್ಯವಸ್ಥೆ).
ಅಪರಾಹ್ನ 2: ನಮ್ಮ ಸರಕಾರದಲ್ಲಿ 10 ಉಪಮುಖ್ಯಮಂತ್ರಿಗಳ ನೇಮಕ. (ವಿಶೇಷ ಪತ್ರಿಕಾಗೋಷ್ಠಿಯಲ್ಲಿಹೇಳಿಕೆ)
ಅಪರಾಹ್ನ 2:30: ಉಪಮುಖ್ಯಮಂತ್ರಿ ಸ್ಥಾನಗಳ ಸಂಖ್ಯೆಯಲ್ಲಿ ಇನ್ನಷ್ಟು ಹೆಚ್ಚಳ. ಅತೃಪ್ತರ ಶಮನಕ್ಕಾಗಿ ವಿಶೇಷ ಖಾತೆ ರಚನೆ-ತುರ್ತು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ)
ಅಪರಾಹ್ನ 3: ನಾನು ಮುಖ್ಯಮಂತ್ರಿಯಾಗದಂತೆ ತಡೆಯಲು ಜೆಡಿಎಸ್-ಕಾಂಗ್ರೆಸ್ ಸಂಚು. ಇದು ಅನೈತಿಕ-(ವಿಶೇಷ ತುರ್ತು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ)
ಅಪರಾಹ್ನ 3:30: ತುರ್ತು ಶಾಸಕಾಂಗ ಸಭೆ. ಪಕ್ಷದ ವಿವಿಧ ನಾಯಕರ ಜೊತೆಗೆ ಸಮಾಲೋಚನೆ.
ಸಂಜೆ 4: ಬಿಜೆಪಿಯಿಂದ ಎರಡು ಮುಖ್ಯಮಂತ್ರಿ ಹತ್ತು ಹಿರಿಯ ಉಪಮುಖ್ಯಮಂತ್ರಿ ಮತ್ತು 20 ಉಪಮುಖ್ಯಮಂತ್ರಿಗಳು (ಅತಿ ವಿಶೇಷ ತುರ್ತು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ)
ಸಂಜೆ 4.30: ಪಕ್ಷವಿರೋಧಿ ಕೃತ್ಯ ನಡೆಸಿದರೆ ಶಾಸಕರ ವಿರುದ್ಧ ಕಠಿಣ ಕ್ರಮ(ಮಾಧ್ಯಮಗಳ ಜೊತೆಗೆ ವಿಶೇಷ ಮಾತುಕತೆ).
ಸಂಜೆ 5: ನಾನು ವಿಶ್ವಾಸ ಮತ ಸಾಬೀತು ಪಡಿಸಿಯೇ ಸಿದ್ಧ (ಟಿ.ವಿ. ವಾಹಿನಿಗೆ ಫೋನ್ ಮೂಲಕ ಹೇಳಿಕೆ)
ಸಂಜೆ 5:30: ಪಕ್ಷದೊಳಗೆ ನನ್ನ ವಿರುದ್ಧ ಸಂಚು. ಆರೆಸ್ಸೆಸ್‌ನ ಸಂತೋಷ್ ಅವರು ನನ್ನನ್ನು ಕೆಲಸ ಮಾಡಲು ಬಿಡುತ್ತಿಲ್ಲ- ಗಂಭೀರ ಆರೋಪ.
ಸಂಜೆ 6: ಕೇಶವ ಕೃಪಾ ಬಾಗಿಲಲ್ಲಿ ಯಡಿಯೂರಪ್ಪ. ಕೇಶವ ಕೃಪಾ ಬಾಗಿಲಿಗೆ ಬೃಹತ್ ಬೀಗ. ನಿರಾಶೆಯಿಂದ ವಾಪಾಸ್.
ಸಂಜೆ 6:15: ನನ್ನ ಪರವಾಗಿ ಬಿಜೆಪಿಯಲ್ಲಿ 70 ಮಂದಿ ಶಾಸಕರಿದ್ದಾರೆ. ಅವಕಾಶ ಸಿಕ್ಕಿದರೆ ಕುಮಾರಸ್ವಾಮಿಯವರ ಜೊತೆಗೆ 20-20 ಆಡಲು ಸಿದ್ಧ-(ಪತ್ರಕರ್ತ ಎಂಜಲು ಕಾಸಿಯ ಜೊತೆಗೆ ಯಡಿಯೂರಪ್ಪ)
ಸಂಜೆ 6:20: ಕಾಂಗ್ರೆಸ್‌ನಿಂದ 10 ಅತೃಪ್ತರು ನನಗೆ ಬೆಂಬಲ ನೀಡಲಿದ್ದಾರೆ. ಬಹುಮತ ಸಾಬೀತು ಪಡಿಸಿಯೇ ಸಿದ್ಧ-(ಯಡಿಯೂರಪ್ಪ ಆಪತ್ಕಾಲದ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ.)
ಸಂಜೆ 6:45: ಎಲ್ಲ ಮಠಗಳಿಗೆ ತಲಾ 10 ಕೋಟಿ ರೂಪಾಯಿ ಅನುದಾನ ಘೋಷಣೆ-(ನಿವಾಸದಲ್ಲಿ ಪತ್ರಕರ್ತರಿಗೆ ಮಾಹಿತಿ.)
ಸಂಜೆ 7: ವಿವಿಧ ಸ್ವಾಮೀಜಿಗಳ ಆಶೀರ್ವಾದ ನನ್ನ ಮೇಲಿದೆ. ಆದುದರಿಂದ ವಿಶ್ವಾಸ ಮತ ಸಾಬೀತು ಮಾಡುವಲ್ಲಿ ಯಶಸ್ವಿಯಾಗುತ್ತೇನೆ-ಯಡಿಯೂರಪ್ಪ ಭರವಸೆ.
ರಾತ್ರಿ 7:30: ರಾಜ್ಯದಲ್ಲಿ ಲಿಂಗಾಯತ ಸಮುದಾಯಕ್ಕೆ ಭಾರೀ ಅನ್ಯಾಯವಾಗುತ್ತಿದೆ. ಲಿಂಗಾಯತರಿಗೆ ಆಗುವ ಅನ್ಯಾಯವನ್ನು ನಾನು ಸಹಿಸಲಾರೆ-(ತುರ್ತು ಪತ್ರಿಕಾಗೋಷ್ಠಿಯಲ್ಲಿ ಯಡಿಯೂರಪ್ಪ.)
ರಾತ್ರಿ 8: ಕೇಶವಕೃಪಾದ ಬಾಗಿಲು ತೆಗೆಯದೇ ಇದ್ದರೆ ಲಿಂಗಾಯತ ಸ್ವತಂತ್ರ ಧರ್ಮವಾಗುವುದರ ಬಗ್ಗೆ ನಾನು ಚಿಂತನೆ ನಡೆಸಲಿದ್ದೇನೆ-(ರೆಸಾರ್ಟ್ ಮಾತುಕತೆಯ ಬಳಿಕ ಯಡಿಯೂರಪ್ಪ.)
ರಾತ್ರಿ 8:30: ನನ್ನ ಕೆಜೆಪಿ ಇನ್ನೂ ಅಸ್ತಿತ್ವದಲ್ಲಿದೆ. ಅದರ ರಾಷ್ಟ್ರಾಧ್ಯಕ್ಷನಾಗಿ ನಾನು ಮುಂದುವರಿಯಲಿದ್ದೇನೆ.
ರಾತ್ರಿ 9: ಯಡಿಯೂರಪ್ಪರಿಂದ ರಾಜ್ಯಪಾಲರ ಭೇಟಿ.
ರಾತ್ರಿ 9:30: ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ.
ರಾತ್ರಿ 10: ಸ್ವತಂತ್ರ ಲಿಂಗಾಯತ ಧರ್ಮ ಚಳವಳಿಗೆ ಪೂರ್ಣ ಬೆಂಬಲ. ನೇತೃತ್ವ ವಹಿಸಿಕೊಂಡ ಯಡಿಯೂರಪ್ಪ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
*ಚೇಳಯ್ಯ chelayya@gmail.com
*ಚೇಳಯ್ಯ chelayya@gmail.com
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X