ಎಂ.ಎಂ.ಕಲಬುರ್ಗಿ ಹಂತಕರಿಗೆ ಜಾಮೀನು ನಿರಾಕರಣೆ
![ಎಂ.ಎಂ.ಕಲಬುರ್ಗಿ ಹಂತಕರಿಗೆ ಜಾಮೀನು ನಿರಾಕರಣೆ ಎಂ.ಎಂ.ಕಲಬುರ್ಗಿ ಹಂತಕರಿಗೆ ಜಾಮೀನು ನಿರಾಕರಣೆ](https://www.varthabharati.in/sites/default/files/images/articles/2019/07/28/202669-1564325191.jpg)
ಧಾರವಾಡ, ಜು.28: ಚಿಂತಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಪ್ರಮುಖ ಆರೋಪಿಗಳಾದ ಹುಬ್ಬಳ್ಳಿಯ ಗಣೇಶ್ ಮಿಸ್ಕಿನ್ ಹಾಗೂ ಅಮಿತ್ ಬದ್ದಿಗೆ ಧಾರವಾಡ ಹೈಕೋರ್ಟ್ ಪೀಠವು ಜಾಮೀನು ನೀಡಲು ನಿರಾಕರಿಸಿದೆ.
ಇವರು ಲೇಖಕಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳೂ ಆಗಿದ್ದಾರೆ. ಡಾ.ಎಂ.ಎಂ.ಕಲಬುರ್ಗಿ ಹತ್ಯೆಯಲ್ಲೂ ಇವರದ್ದೇ ಕೈವಾಡ ಇದೆ ಎಂದು ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದರು. ಇವರು 3ನೆ ಹೆಚ್ಚುವರಿ ಹಿರಿಯ ದಿವಾಣಿ ಹಾಗೂ ಸಿಜೆಎಂ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಮಾಡಿದ್ದ ನ್ಯಾಯಾಲಯ ಅರ್ಜಿ ವಜಾ ಮಾಡಿತ್ತು. ಈ ಹಿನ್ನೆಲೆ ಆರೋಪಿಗಳು ಹೈಕೋರ್ಟ್ ಮೊರೆ ಹೋಗಿದ್ದರು.
Next Story