Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ…!

ಓ ಮೆಣಸೇ…!

ಪಿ.ಎ.ರೈ,ಪಿ.ಎ.ರೈ,29 July 2019 8:50 AM IST
share
ಓ ಮೆಣಸೇ…!

ಸಂಸಾರವೆಂಬುದು ಬೀಸುವ ಕಲ್ಲಿನಂತೆ - ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ

- ಸನ್ಯಾಸಿಗಳು ಸಂಸಾರದೊಳಗೆ ಕೈ ಹಾಕಿದರೆ ಜನರು ಕಲ್ಲು ಬೀಸುವುದುಂಟು. 

---------------------

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ನಿಗೂಢ - ಮಮತಾ ಬ್ಯಾನರ್ಜಿ, ಪ.ಬ.ಮುಖ್ಯಮಂತ್ರಿ

- ಪ.ಬಂಗಾಳದ ಕಮ್ಯುನಿಸ್ಟರು ಮುಸಿಮುಸಿ ನಕ್ಕರಂತೆ. 

---------------------

ಕತ್ತಲೆ ಕವಿದ ಮನಸ್ಸನ್ನು ಬೆಳಕಿನೆಡೆಗೆ ಕೊಂಡೊಯ್ಯುವ ಮಹತ್ತರ ಜವಾಬ್ದಾರಿ ಗುರುವಿಗಿದೆ - ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಮುಖಂಡ

-ಕತ್ತಲೆ ಕಳೆಯಬೇಕಾದರೆ ಕೆಲವು ಜವಾಬ್ದಾರಿಗಳನ್ನು ಪೊಲೀಸ್ ಇಲಾಖೆಗಳು ನಿರ್ವಹಿಸುವ ಅಗತ್ಯವೂ ಇದೆ. 

---------------------

ದೇಶದಲ್ಲಿ ಭಾರೀ ಶ್ರೀಮಂತರ ಸಂಖ್ಯೆ ಬಹಳವೇನೂ ಇಲ್ಲ - ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ

-ಭಾರೀ ಬಡವರ ಸಂಖ್ಯೆ ಹೆಚ್ಚಿದೆ ಎನ್ನುವುದೇ ನಮ್ಮ ಹೆಮ್ಮೆ. 

---------------------

ಕಾಶ್ಮೀರಕ್ಕೆ ಸಂಬಂಧಿಸಿ ಭಾರತ-ಪಾಕ್ ನಡುವೆ ಮಧ್ಯಸ್ಥಿಕೆಗೆ ಸಿದ್ಧ - ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ

-ಮೊದಲು ಪಾಕ್ ಮತ್ತು ತಾಲಿಬಾನ್ ನಡುವಿನ ನಿಮ್ಮ ಮಧ್ಯಸ್ಥಿಕೆ ಯಶಸ್ವಿಯಾಗಿ ಮುಗಿಯಲಿ.

---------------------

ಚಂದ್ರಯಾನ- 2ರಿಂದಾಗಿ ಚಂದ್ರನ ಮೇಲ್ಮೈನಲ್ಲಿರುವ ಹೊಸ ವಿಷಯಗಳು ಹೊರಬರಲಿವೆ ಎಂಬ ವಿಶ್ವಾಸವಿದೆ - ರಾಮನಾಥ್ ಕೋವಿಂದ್, ರಾಷ್ಟ್ರಪತಿ

-ಭೂಮಿಯ ಮೇಲ್ಮೈನಲ್ಲಿರುವ ಹಳೆ ಸಮಸ್ಯೆಗಳ ಪರಿಹಾರ ಯಾವಾಗ?

---------------------

ನನ್ನ ತಂದೆಯ ಇಚ್ಛೆಗೆ ವಿರುದ್ಧವಾಗಿ ಹೋಗಿ ಕೆಲವು ತಪ್ಪುಗಳನ್ನು ಮಾಡಿದ್ದರೂ ಒಂದಷ್ಟು ಒಳ್ಳೆಯ ಕೆಲಸ ಮಾಡಿದ ತೃಪ್ತಿ ಇದೆ

- ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

-ಇಂತಹ ತಪ್ಪುಗಳನ್ನು ಇನ್ನಷ್ಟು ಮಾಡಲಿ ಎಂದು ದೇವೇಗೌಡರು ಒಳಗೊಳಗೆ ಹಂಬಲಿಸುತ್ತಿದ್ದಾರಂತೆ.

---------------------

ಸಹೋದ್ಯೋಗಿಗಳೇ ನನ್ನ ಬೆನ್ನಿಗೆ ಚೂರಿ ಹಾಕಿದ್ದಾರೆ - ಡಿ.ಕೆ. ಶಿವಕುಮಾರ್, ಮಾಜಿ ಸಚಿವ

-ಹಿಂದೆ ಸಿದ್ದರಾಮಯ್ಯ ಅವರಿಗೆ ಹಾಕಿದ್ದ ಚೂರಿಯನ್ನೇ ತೆಗೆದು ನಿಮಗೆ ಹಾಕಿರುವ ಸಾಧ್ಯತೆ ಇದೆ. 

---------------------

ದೇಶದಲ್ಲಿ ವಿಧ್ವಂಸಕ ಕೃತ್ಯಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ - ಕಿಶನ್‌ರೆಡ್ಡಿ, ಕೇಂದ್ರ ಸಚಿವ

-ಯಾವ ದೇಶದಲ್ಲಿ?

---------------------

ಸರಕಾರದ ಪತನಕ್ಕಿಂತ ಕುದುರೆ ವ್ಯಾಪಾರ ನೋವು ತಂದಿದೆ - ದೇವೇಗೌಡ, ಮಾಜಿ ಪ್ರಧಾನಿ

-ನೋವು ಬೇಡ, ನಡೆದಿರುವುದು ಕತ್ತೆ ವ್ಯಾಪಾರ. 

---------------------

ದೋಸ್ತಿ ಸರಕಾರದ ಸೋಲು ಪ್ರಜಾತಂತ್ರದ ಗೆಲುವು - ಯಡಿಯೂರಪ್ಪ, ಮುಖ್ಯಮಂತ್ರಿ

-ಒಟ್ಟಿನಲ್ಲಿ ತಂತ್ರದ ಗೆಲುವು ಅಷ್ಟೇ. 

---------------------

ರಾಕ್ಷಸ ರಾಜಕಾರಣದ ವಿರುದ್ಧ ಸಾತ್ವಿಕ ರಾಜಕಾರಣ ಮಾಡುವ ನಮ್ಮ ಪ್ರಯತ್ನಕ್ಕೆ ಗೆಲುವಾಗಿದೆ - ಎಚ್. ವಿಶ್ವನಾಥ್, ಶಾಸಕ

-ಸಾತ್ವಿಕ ರಾಜಕಾರಣದ ಗೆಲುವು ಎನ್ನುವುದು ಲಿಂಬಾವಳಿಯವರ ಅಂಬೋಣ.

---------------------

ಯಡಿಯೂರಪ್ಪರನ್ನು ಹೇಗೆ ಕಂಟ್ರೋಲ್ ಮಾಡಬೇಕೆಂದು ನನಗೆ ಗೊತ್ತು - ಎಚ್.ಡಿ. ರೇವಣ್ಣ, ಶಾಸಕ

-ಕುಮಾರಸ್ವಾಮಿಯವರನ್ನು ಕಂಟ್ರೋಲ್ ಮಾಡುವುದಕ್ಕಿಂತ ಸುಲಭ ಎಂದು ಭಾವಿಸಿ ಸರಕಾರ ಉರುಳಿಸಿರಬೇಕು. 

---------------------

ಜಗತ್ತೇ ಪ್ರಳಯವಾದರೂ ಪಕ್ಷದ್ರೋಹ ಮಾಡಿದ ಶಾಸಕರನ್ನು ಪಕ್ಷಕ್ಕೆ ಮತ್ತೆ ವಾಪಸ್‌ತೆಗೆದುಕೊಳ್ಳುವುದಿಲ್ಲ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

-ನೀವೇ ವಾಪಸ್ ಹೋಗುವ ಸಾಧ್ಯತೆಗಳಿವೆ.

---------------------

ನನ್ನ ಇಷ್ಟು ವರ್ಷದ ರಾಜಕೀಯ ಜೀವನದಲ್ಲಿ ಇದೇ ಪ್ರಥಮ ಬಾರಿಗೆ ಸದನದಲ್ಲಿ ಬಾಯಿ ಮುಚ್ಚಿ ಕುಳಿತಿದ್ದೆ - ಕೆ.ಎಸ್ ಈಶ್ವರಪ್ಪ, ಶಾಸಕ

-ಯಡಿಯೂರಪ್ಪ ಅಧಿಕಾರಾವಧಿಯಲ್ಲಿ ಬಾಯಿ ಬಿಚ್ಚುವುದು ಹೇಗೂ ಇದೆಯಲ್ಲ.

---------------------

ಪಾಕಿಸ್ತಾನದಲ್ಲಿ ಈಗಲೂ 40 ಸಾವಿರ ಉಗ್ರರಿದ್ದಾರೆ - ಇಮ್ರಾನ್ ಖಾನ್, ಪಾಕ್ ಪ್ರಧಾನಿ

-ಶೀಘ್ರದಲ್ಲೇ ನಾವು ಅವರನ್ನು ಮೀರಿಸಲಿದ್ದೇವೆ-ಮೋದಿ ಪ್ರತ್ಯುತ್ತರ

---------------------

ನಮ್ಮ ಶಾಸಕರು ಖರೀದಿಗಿಲ್ಲ - ಕಮಲನಾಥ್, ಮಧ್ಯಪ್ರದೇಶ ಮುಖ್ಯಮಂತ್ರಿ

-ಬೇರೆ ಶಾಸಕರನ್ನು ಖರೀದಿಸಿದವರು ಒಂದಲ್ಲ ಒಂದು ದಿನ ತಮ್ಮ ಶಾಸಕರ ಖರೀದಿಯನ್ನು ಅಸಹಾಯಕರಾಗಿ ನೋಡಬೇಕಾಗುತ್ತದೆ.

---------------------

ಮೈತ್ರಿ ಸರಕಾರ ಪತನ ಗೊಂಡಿದ್ದಕ್ಕೆ ಯಾರೂ ಮತ್ತೆ ಮತ್ತೆ ಶೋಕ ಗೀತೆ ಹಾಡಬಾರದು - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

-ನಿಮ್ಮ ಅಭಿಮಾನಿಗಳು ವಿಜಯಗೀತೆ ಹಾಡುವ ವದಂತಿಗಳಿವೆ.

---------------------

ನಾನು ಬಿಎಸ್ಪಿ ಬಿಡುವ ಪ್ರಶ್ನೆಯೇ ಇಲ್ಲ - ಎನ್. ಮಹೇಶ್, ಶಾಸಕ

-ಮೂರು ಬಿಟ್ಟಮೇಲೆ, ಬಿಎಸ್ಪಿ ಬಿಟ್ಟರೆಷ್ಟು ಉಳಿಸಿಕೊಂಡರೆಷ್ಟು.

---------------------

ಈ ಬಾರಿ ಎಚ್.ಡಿ. ರೇವಣ್ಣ ಅವರ ನಿಂಬೆ ಹಣ್ಣು ಕೆಲಸ ಮಾಡಲಿಲ್ಲ - ಎ.ಮಂಜು, ಮಾಜಿ ಸಚಿವ

-ಸದ್ಯಕ್ಕೆ ಲಿಂಬಾವಳಿಯವರ ಲಿಂಬೆಯದೇ ಸುದ್ದಿ.

---------------------

ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರದ ಪತನ ಪ್ರಜಾಪ್ರಭುತ್ವದ ಕರಾಳ ಅಧ್ಯಾಯ - ಮಾಯಾವತಿ, ಬಿಎಸ್ಪಿ ಅಧ್ಯಕ್ಷೆ

-ಆ ಅಧ್ಯಾಯದ ಮೊದಲ ಪುಟದಲ್ಲೇ ನಿಮ್ಮ ಶಾಸಕರೊಬ್ಬರ ಹೆಸರಿದೆ.

---------------------

ವ್ಯಕ್ತಿಯೊಬ್ಬನನ್ನು ಭಯೋತ್ಪಾದಕನೆಂದು ಘೋಷಿಸುವ ಕಾನೂನು ಅಗತ್ಯವಿದೆ - ಅಮಿತ್ ಶಾ, ಕೇಂದ್ರ ಸಚಿವ

-ಅಂತಹ ಘೋಷಣೆಯೊಂದಕ್ಕೆ ಅರ್ಹರಾದ ವ್ಯಕ್ತಿ ಈಗಾಗಲೇ ಸಂಸದನೆಂಬ ಹೆಸರಲ್ಲಿ ಸಂಸದ್ ಪ್ರವೇಶಿಸಿರುವ ಕುರಿತಂತೆ ವದಂತಿಗಳಿವೆ.

---------------------

ಆಮ್ಲಜನಕ ಸೇವಿಸಿ ಆಮ್ಲಜನಕವನ್ನೇ ಹೊರಬಿಡುವ ಏಕೈಕ ಪ್ರಾಣಿ ಹಸು - ತ್ರಿವೇಂದ್ರ ಸಿಂಗ್, ಉತ್ತರಾಖಂಡ ಮುಖ್ಯಮಂತ್ರಿ

-ಆಮ್ಲಜನಕವನ್ನೇ ಹೊರಗೆ ಬಿಡುವುದಾದರೆ, ಅದು ಆಮ್ಲಜನಕವನ್ನು ಸೇವಿಸುವುದಾದರೂ ಯಾಕೆ?

---------------------

ಅಮೆರಿಕ ಪ್ರವಾಸ ಮುಗಿಸಿ ಹಿಂದಿರುಗಿದಾಗ ಕ್ರಿಕೆಟ್‌ನ ವಿಶ್ವಕಪ್ ಗೆದ್ದು ಬಂದಷ್ಟೇ ಖುಷಿಯಾಯಿತು - ಇಮ್ರಾನ್ ಖಾನ್, ಪಾಕ್ ಪ್ರಧಾನಿ

-ನೀವು ಘೋಷಿಸಿದ ಉಗ್ರರ ಸಂಖ್ಯೆ ವಿಶ್ವಕಪ್‌ನಲ್ಲಿ ಸಂಗ್ರಹಿಸಿದ ರನ್‌ಗಳ ಸಂಖ್ಯೆ ಇರಬಹುದೇ?

---------------------

ನಾವು ಅತೃಪ್ತರಲ್ಲ, ಅಸಹಾಯಕರು - ಶಿವರಾಮ ಹೆಬ್ಬಾರ್, ಶಾಸಕ

-ಹಣದ ಪೆಟ್ಟಿಗೆಯ ಮುಂದೆ ಅಸಹಾಯಕರಾಗಿರಬೇಕು, ಪಾಪ!

share
ಪಿ.ಎ.ರೈ,
ಪಿ.ಎ.ರೈ,
Next Story
X