ಬೆಳೆವಿಮೆ ನೋಂದಣಿ: ಆ.14ರ ವರೆಗೆ ಅವಧಿ ವಿಸ್ತರಣೆಗೆ ಸಿಎಂ ಸೂಚನೆ
![ಬೆಳೆವಿಮೆ ನೋಂದಣಿ: ಆ.14ರ ವರೆಗೆ ಅವಧಿ ವಿಸ್ತರಣೆಗೆ ಸಿಎಂ ಸೂಚನೆ ಬೆಳೆವಿಮೆ ನೋಂದಣಿ: ಆ.14ರ ವರೆಗೆ ಅವಧಿ ವಿಸ್ತರಣೆಗೆ ಸಿಎಂ ಸೂಚನೆ](https://www.varthabharati.in/sites/default/files/images/articles/2019/07/29/202855-1564419069.jpg)
ಬೆಂಗಳೂರು, ಜು. 29: ಬೆಳೆವಿಮೆ ನೋಂದಣಿ ಅವಧಿಯನ್ನು 2019ರ ಆಗಸ್ಟ್ 14ರ ವರೆಗೆ ವಿಸ್ತರಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೃಷಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ಇಂದಿಲ್ಲಿ ಸೂಚನೆ ನೀಡಿದ್ದಾರೆ.
2019ರ ಮುಂಗಾರು ಹಂಗಾಮಿನಲ್ಲಿ ವಿವಿಧ ಕಾರಣಗಳಿಂದಾಗಿ ನೋಂದಣಿ ಕನಿಷ್ಠ ಪ್ರಮಾಣದಲ್ಲಿರುವುದರಿಂದ ಬೆಳೆವಿಮಾ ನೋಂದಣಿ ಅವಧಿಯನ್ನು ವಿಸ್ತರಿಸುವಂತೆ ಹಾಗೂ ಇದಕ್ಕೆ ಅಗತ್ಯವಿದ್ದಲ್ಲಿ ಕೇಂದ್ರಕ್ಕೆ ಸೂಕ್ತ ಪ್ರಸ್ತಾವನೆಯನ್ನು ಕಳುಹಿಸುವಂತೆ ಆರ್ಥಿಕ ಮತ್ತು ಕೃಷಿ ಇಲಾಖೆ ಅಧಿಕಾರಿಗಳಿಗೆ ಸಿಎಂ ನಿರ್ದೇಶನ ನೀಡಿದ್ದಾರೆ.
Next Story