ಉಡುಪಿ, ಆ.1: ತಿರುಪತಿ ಹಾಗೂ ಕಾಶಿ ಪ್ರವಾಸಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋಗಿದ್ದ ಮಹಿಳೆಯೊಬ್ಬರು ನಾಪತ್ತೆಯಾಗಿದ್ದಾರೆ.
ಕೊಡವೂರು ಗ್ರಾಮದ ಹನುಮಾನ್ ನಗರ ಕೊಳ ನಿವಾಸಿ ಶೈಲಜಾ (45) ನಾಪತ್ತೆಯಾದವರು. ಇವರು ಜು.11ರ ಬೆಳಗ್ಗೆ 10 ಗಂಟೆಗೆ ಮನೆಯಿಂದ ಹೋಗಿದ್ದರು. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.