ಸಂವಿಧಾನದ ಹಕ್ಕು ಪಡೆಯಲು ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಿದ್ದ: ಬಸವ ಜಯಮೃತ್ಯುಂಜಯ ಸ್ವಾಮೀಜಿ
ದಾವಣಗೆರೆ: ಜೈನ, ಬೌದ್ದ ಧರ್ಮದವರು ಕೂಡ ಸುಪ್ರೀಂ ಕೋರ್ಟ್ ಮೆಟ್ಟಿಲೇರಿಯೇ ಪ್ರತ್ಯೇಕವಾಗಿದ್ದು. ನಾವು ಕೂಡ ಸಂವಿಧಾನದ ಹಕ್ಕು ಪಡೆಯಲು ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಿದ್ದ ಎಂದು ಕೂಡಲಸಂಗಮದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕೇಂದ್ರಕ್ಕೆ ಮತ್ತೊಮ್ಮೆ ಶಿಫಾರಸ್ಸು ಕಳಿಸುತ್ತೇವೆ. ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಹಿಂದಿನ ಸರ್ಕಾರದ ಪಾತ್ರವಿಲ್ಲ. ನ್ಯಾ. ನಾಗಮೋಹನದಾಸ್ ನೇತೃತ್ವದ ಸಮಿತಿ ರಚನೆ ಮಾಡಲಾಗಿದೆ. ಆದರೆ ಈ ಬಗ್ಗೆ ತಪ್ಪಾಗಿ ಅರ್ಥೈಸುವ ಪ್ರಯತ್ನ ನಡೆದಿದೆ. ಯಾರು ಧರ್ಮ ಒಡೆಯುವ ಪ್ರಯತ್ನ ಮಾಡಿಲ್ಲ ಎಂದರು.
ಪೇಜಾವರ ಶ್ರೀಗಳ ಪಂಥಾಹ್ವಾನಕ್ಕೆ ಬೇಸರ:
12 ನೇ ಶತಮಾನದಲ್ಲೇ ಬಸವಣ್ಣನವರು ನಮ್ಮ ಧರ್ಮದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸಾಣೀಹಳ್ಳಿ ಶ್ರೀಗಳು ಪಂಥಾಹ್ವಾನದ ಬಗ್ಗೆ ಯಾವ ನಿರ್ಧಾರ ಕೈಗೊಳ್ಳುತ್ತಾರೋ ಅದಕ್ಕೆ ನಾವು ಬದ್ದ ಎಂದು ಪೇಜಾವರ ಶ್ರೀಗಳ ಹೇಳಿಕೆಗೆ ತಮ್ಮ ನಿಲುವು ಪ್ರಕಟಿಸಿದ್ದಾರೆ.
ಪೇಜಾವರ ಶ್ರೀಗಳು ಪಂಥಾಹ್ವಾನ ನೀಡಿರುವುದು ಸರಿಯಲ್ಲ. ಅವರು ಒಬ್ಬ ಹಿರಿಯ ಶ್ರೀಗಳಾಗಿದ್ದಾರೆ. ಸಂವಾದ, ಚರ್ಚೆಗೆ ಕರೆಯಲಿ ನಾವು ಮುಕ್ತವಾಗಿ ಬರಲು ಸಿದ್ದ.12 ನೇ ಶತಮಾನದಲ್ಲೇ ಬಸವಣ್ಣನವರು ಇದಕ್ಕೆ ಉತ್ತರ ಕೊಟ್ಟಿದ್ದಾರೆ. ಈಗ ನಾವು ಕೊಡುವ ಅವಶ್ಯಕತೆ ಇಲ್ಲ.ಈ ಬಗ್ಗೆ ಯಾರು ತಪ್ಪು ತಿಳಿಯುವುದು ಬೇಡ ನಾವು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ ಹೇಳಿದರು.
ಲಿಂಗಾಯತ, ವೀರಶೈವ ಎರಡು ಒಂದೇ ಎಂದು ಶಾಮನೂರು ಶಿವಶಂಕರಪ್ಪ ಹೇಳಿಕೆ ನೀಡಿದ್ದಾರೆಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಶಾಮನೂರು ಶಿವಶಂಕರಪ್ಪ ನವರು ಕೂಡ ಲಿಂಗಾಯತರೇ. ಅವರು ವೀರಶೈವ ಮಹಾಸಭದ ರಾಷ್ಟ್ರೀಯ ಅಧ್ಯಕ್ಷರಾಗಿದ್ದರಿಂದ ಈ ರೀತಿ ಹೇಳುತ್ತಿದ್ದಾರೆ ಎಂದು ತಿಳಿಸಿದರು.