ಮುಸ್ಲಿಂ ನಿರೂಪಕನನ್ನು ಕಂಡು ಕಣ್ಣಿಗೆ ಕೈ ಅಡ್ಡ ಹಿಡಿದ ‘ಹಮ್ ಹಿಂದೂ’ ಸ್ಥಾಪಕ!
ಝೊಮ್ಯಾಟೋ ಘಟನೆ ಬಗ್ಗೆ ಟಿವಿ ಚರ್ಚಾ ಕಾರ್ಯಕ್ರಮ
ಹೊಸದಿಲ್ಲಿ, ಆ.2: ಮುಸ್ಲಿಂ ಯುವಕನಿಂದ ಆಹಾರ ಡೆಲಿವರಿ ಪಡೆಯಲು ಝೊಮ್ಯಾಟೋ ಗ್ರಾಹಕನೊಬ್ಬ ನಿರಾಕರಿಸಿದ ಘಟನೆಗೆ ಸಂಬಂಧಿಸಿ ನಡೆಯುತ್ತಿದ್ದ ಟಿವಿ ಚರ್ಚಾ ಕಾರ್ಯಕ್ರಮವೊಂದರಲ್ಲಿ ಮುಸ್ಲಿಂ ನಿರೂಪಕನನ್ನು ನೋಡಿ ‘ಹಮ್ ಹಿಂದು’ ಸಂಘಟನೆಯ ಸ್ಥಾಪಕ ಅಜಯ್ ಗೌತಮ್ ತನ್ನ ಕಣ್ಣುಗಳನ್ನು ಕೈ ಅಡ್ಡ ಹಿಡಿದು ಮುಚ್ಚಿದ ಘಟನೆ ನಡೆದಿದೆ.
ಝೊಮ್ಯಾಟೋ ಘಟನೆ ಸಂಬಂಧ ಚರ್ಚೆಗೆ ಗೌತಮ್ ಅವರನ್ನು ನ್ಯೂಸ್ 24 ಸ್ಟುಡಿಯೋಗೆ ಆಹ್ವಾನಿಸಲಾಗಿದ್ದಾಗ ಅವರು ಮುಸ್ಲಿಂ ನಿರೂಪಕನ ಮುಖವನ್ನು ನೋಡಲು ನಿರಾಕರಿಸಿದ್ದಾರೆ. ಗೌತಮ್ ಅವರನ್ನು ಇನ್ನು ಮುಂದೆ ಯಾವುದೇ ಚರ್ಚೆ ಕಾರ್ಯಕ್ರಮಗಳಿಗೆ ಆಹ್ವಾನಿಸದೇ ಇರಲು ಈ ಸುದ್ದಿ ವಾಹಿನಿ ನಿರ್ಧರಿಸಿದೆ.
ನ್ಯೂಸ್ ನೇಷನ್ ಯುಟ್ಯೂಬ್ನಲ್ಲಿ ಆಗಸ್ಟ್ 1ರಂದು ಅಪ್ಲೋಡ್ ಮಾಡಿದ ವೀಡಿಯೋದಲ್ಲಿ ಈ ಘಟನೆ ತೋರಿಸಲಾಗಿರಲಿಲ್ಲ. ಆದರೆ ನಂತರ ಘಟನೆಯ ಸಣ್ಣ ವೀಡಿಯೋ ತುಣುಕನ್ನು ಅಪ್ಲೋಡ್ ಮಾಡಲಾಗಿದ್ದು, ಅದು ಭಾರೀ ಆಕ್ರೋಶ ಸೃಷ್ಟಿಸಿದೆ.
ಸಾಮಾಜಿಕ ಜಾಲತಾಣಗಳಲ್ಲೂ ಈ ಘಟನೆಯನ್ನು ಟೀಕಿಸಿ ಹಲವರು ಟ್ವೀಟ್ ಮಾಡಿದ್ದಾರೆ.
न्यूज़ 24 के ऐंकर को देख कर पंडित अजय गौतम ने ढक लीं आँखें...क्योंकि उस ऐंकर का नाम है सउद मोहम्मद ख़ालिद pic.twitter.com/Es8MaUSPPG
— Manak Gupta (@manakgupta) August 1, 2019