Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಚುನಾವಣೆ ಸಂದರ್ಭ ಖಾಸಗಿ ಇಂಜಿನಿಯರ್ ಗಳ...

ಚುನಾವಣೆ ಸಂದರ್ಭ ಖಾಸಗಿ ಇಂಜಿನಿಯರ್ ಗಳ ಕೈಯಲ್ಲಿ ಇವಿಎಂ: ಆರ್ ಟಿಐಯಿಂದ ಬಹಿರಂಗ!

ಚುನಾವಣಾ ಆಯೋಗ ನಿರಾಕರಿಸಿದ್ದ ಸತ್ಯ ಈಗ ಬಹಿರಂಗ

ವಾರ್ತಾಭಾರತಿವಾರ್ತಾಭಾರತಿ4 Aug 2019 3:12 PM IST
share
ಚುನಾವಣೆ ಸಂದರ್ಭ ಖಾಸಗಿ ಇಂಜಿನಿಯರ್ ಗಳ ಕೈಯಲ್ಲಿ ಇವಿಎಂ: ಆರ್ ಟಿಐಯಿಂದ ಬಹಿರಂಗ!

ಚುನಾವಣಾ ಪ್ರಕ್ರಿಯೆಗಳಲ್ಲಿ ಯಾವುದೇ ಖಾಸಗಿ ಕಂಪೆನಿಗಳಾಗಲೀ ಅಥವಾ ಹೊರಗಿನ ಯಾವುದೇ ಮೂಲಗಳಾಗಲೀ ಯಾವ ರೀತಿಯಲ್ಲೂ ಭಾಗಿಯಾಗುವುದಿಲ್ಲ ಎಂದು ಭಾರತೀಯ ಚುನಾವಣಾ ಆಯೋಗ ಹೇಳುತ್ತಲೇ ಬಂದಿದೆ. ಆದರೆ thequint.com ನ ತನಿಖಾ ವರದಿಯೊಂದು ಇದನ್ನು ಸುಳ್ಳು ಎಂದು ನಿರೂಪಿಸಿದೆ.

ಇವಿಎಂಗಳು ಮತ್ತು ವಿವಿಪ್ಯಾಟ್ ಮೆಶಿನ್ ಗಳನ್ನು ತಯಾರಿಸುವ ಎಲೆಕ್ಟ್ರಾನಿಕ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿ. (ಇಸಿಐಎಲ್) ಖಾಸಗಿ ಇಂಜಿನಿಯರ್ ಗಳನ್ನು ‘ಸಲಹೆಗಾರರಾಗಿ’ ನೇಮಿಸಿತ್ತು ಮತ್ತು ಈ ಖಾಸಗಿ ಇಂಜಿನಿಯರ್ ಗಳು 2017ರಿಂದ ವಿಧಾನಸಭೆ ಚುನಾವಣೆಗಳಲ್ಲಿ ಮತ್ತು 2019ರ ಲೋಕಸಭಾ ಚುನಾವಣೆಗಳಲ್ಲಿ ಚುನಾವಣಾ ಆಯೋಗದೊಂದಿಗೆ ಕೆಲಸ ಮಾಡಿದ್ದರು ಎನ್ನುವುದನ್ನು ತೋರಿಸುವ ಆರ್ ಟಿಐ ದಾಖಲೆಗಳನ್ನು thequint.com ಸಂಗ್ರಹಿಸಿದೆ.

ಈ ಖಾಸಗಿ ಇಂಜಿನಿಯರ್ ಗಳ ಕೆಲಸವು ಅತ್ಯಂತ ಅತ್ಯಂತ ಸೂಕ್ಷ್ಮವಾಗಿದೆ. ಮೊದಲ ಹಂತದ ಪರಿಶೀಲನೆಯಿಂದ ಹಿಡಿದು ಮತ ಎಣಿಕೆಯ ದಿನದವರೆಗೆ ಇವಿಎಂಗಳು ಮತ್ತು ವಿವಿಪ್ಯಾಟ್ ಗಳನ್ನು ಪರಿಶೀಲಿಸುವುದು ಮತ್ತು ನಿರ್ವಹಿಸುವುದು ಅವರ ಕೆಲಸವಾಗಿದೆ. ಅದರರ್ಥ ಚುನಾವಣೆ ನಡೆಯುವವರೆಗೆ ಇವಿಎಂಗಳ ಮೇಲೆ ಹಿಡಿತವಿರುತ್ತದೆ ಎನ್ನುವುದು!.

ಈ ಇಂಜಿನಿಯರ್ ಗಳು ಮುಂಬೈ ಮೂಲದ ಟಿ&ಎಂ ಸರ್ವಿಸಸ್ ಕನ್ಸಲ್ಟಿಂಗ್ ಪ್ರೈ.ಲಿ. ಎಂಬ ಖಾಸಗಿ ಕಂಪೆನಿಯವರು. ಆದರೆ ಈ ಬಗ್ಗೆ ಚುನಾವಣಾ ಆಯೋಗವನ್ನು ಪ್ರಶ್ನಿಸಿದರೆ, “ಯಾವುದೇ ಖಾಸಗಿ ಕಂಪೆನಿ ಇಂಜಿನಿಯರ್ ಗಳನ್ನು ಪೂರೈಸಿಲ್ಲ” ಎಂದು ಹೇಳುತ್ತಿದೆ ಎಂದು thequint.com ವರದಿ ಮಾಡಿದೆ.

ಸ್ಪಷ್ಟವಾಗಿ ಚುನಾವಣಾ ಆಯೋಗವು ಮಾಹಿತಿಯನ್ನು ಅಡಗಿಸಿಡುತ್ತಿದೆ ಮತ್ತು ಜನರ ದಾರಿತಪ್ಪಿಸುತ್ತಿದೆ. ಯಾಕಾಗಿ?

ಚುನಾವಣಾ ಪ್ರಕ್ರಿಯೆಯಲ್ಲಿ ಖಾಸಗಿ ಇಂಜಿನಿಯರ್ ಗಳ ಪಾಲ್ಗೊಳ್ಳುವಿಕೆ ಬಗ್ಗೆ 2017ರ ಉತ್ತರಾಖಂಡ ವಿಧಾನಸಭೆ ಚುನಾವಣೆ ಸಂದರ್ಭ ಅಮಿತ್ ಅಹ್ಲುವಾಲಿಯಾ ಎಂಬ ವಕೀಲರೊಬ್ಬರು ಆರ್ ಟಿಐ ಮಾಹಿತಿ ಕೋರಿದ್ದರು.

“ಇಸಿಐಎಲ್ ಮ್ಯಾನ್ ಪವರ್ ಸಪ್ಲೈ ಏಜೆನ್ಸಿಯಾದ ಟಿ & ಎಂ ಸರ್ವಿಸಸ್ ಕನ್ಸಲ್ಟಿಂಗ್ ಪ್ರೈ.ಲಿ.ನಿಂದ ನುರಿತ ಮತ್ತು ಅರೆ ನುರಿತ ಸಲಹೆಗಾರರನ್ನು ಪಡೆಯುತ್ತದೆ” ಎಂದು ಇಸಿಐಎಲ್ ಆರ್ ಟಿಐ ಉತ್ತರದಲ್ಲಿ ತಿಳಿಸಿತ್ತು. 2017ರ ಉತ್ತರಾಖಂಡ ವಿಧಾನಸಭಾ ಚುನಾವಣೆ ಸಂದರ್ಭ ಸುಮಾರು 50 ಖಾಸಗಿ ಇಂಜಿನಿಯರ್ ಗಳನ್ನು ಇವಿಎಂಗಳ ಪರಿಶೀಲನೆಗಾಗಿ ಬಳಸಲಾಗಿತ್ತು ಮತ್ತು ಇಸಿಐಎಲ್ ನ ಕೇವಲ 8 ಉದ್ಯೋಗಿಗಳು ಮಾತ್ರ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು ಎಂದೂ ಇಸಿಐಲ್ ಸ್ಪಷ್ಟಪಡಿಸಿತ್ತು.

ಈ ಬಗ್ಗೆ ಕ್ವಿಂಟ್ ಕೆಲ ಇಂಜಿನಿಯರ್ ಗಳ ಜೊತೆ ಮಾತನಾಡಿದ್ದು, 2019ರ ಲೋಕಸಭಾ ಚುನಾವಣೆ ಸಂದರ್ಭವೂ ತಾವು ಕೆಲಸ ಮಾಡಿದ್ದೆವು ಎಂದವರು ಸ್ಪಷ್ಟಪಡಿಸಿದ್ದಾರೆ. ಅದೂ ಕೂಡ ಇವಿಎಂಗಳು ಮತ್ತು ವಿವಿಪ್ಯಾಟ್ ಗಳನ್ನು ನಿರ್ವಹಿಸಲು (ಮತಎಣಿಕೆ ದಿನದವರೆಗೆ).

ಪಕ್ಷದ ಚಿಹ್ನೆಗಳು ಮತ್ತು ಅಭ್ಯರ್ಥಿಗಳ ಹೆಸರುಗಳಂತಹ ಸೂಕ್ಷ್ಮ ಮಾಹಿತಿಗಳನ್ನು ಇವಿಎಂಗಳಲ್ಲಿ ಮತ್ತು ವಿವಿಪ್ಯಾಟ್ ಗಳಿಗೆ ಅಪ್ಲೋಡ್ ಮಾಡುವುದು ಈ ಇಂಜಿನಿಯರ್ ಗಳ ಕೆಲಸ ಎನ್ನುವುದು ಗಮನಾರ್ಹ. ಇದಕ್ಕಾಗಿ ಚುನಾವಣೆಗಿಂತ 15 ದಿನಗಳವರೆಗೆ ಅವರು ಇವಿಎಂ ಮತ್ತು ವಿವಿಪ್ಯಾಟ್ ಗಳ ‘ಆ್ಯಕ್ಸೆಸ್’ ಹೊಂದಿರುತ್ತಾರೆ ಅರ್ಥಾತ್ ಅವುಗಳನ್ನು ನಿರ್ವಹಿಸುವ ಅಧಿಕಾರ ಈ ಇಂಜಿನಿಯರ್ ಗಳಿಗೆ ಇರುತ್ತದೆ.

► ಈ ಇಂಜಿನಿಯರ್ ಗಳನ್ನು ಚುನಾವಣಾ ಆಯೋಗವು ಸಂಪೂರ್ಣವಾಗಿ ಪರಿಶೀಲಿಸಿದೆಯೇ?... ನಮಗೆ ತಿಳಿದಿಲ್ಲ!

► ಈ ಇಂಜಿನಿಯರ್ ಗಳನ್ನು ನೀಡಿದ ಕಂಪೆನಿ ಟಿ & ಎಂ ಸರ್ವಿಸಸ್ ಕನ್ಸಲ್ಟಿಂಗ್ ಬಗ್ಗೆ ಚುನಾವಣಾ ಆಯೋಗವು ಪರಿಶೀಲಿಸದೆಯೇ?... ನಮಗೆ ತಿಳಿದಿಲ್ಲ!

ಈ ವಿಚಾರದಲ್ಲಿ ಚುನಾವಣಾ ಆಯೋಗವು ಜನರನ್ನು ಮಾತ್ರವಲ್ಲ ಆಯೋಗದ ಮಾಜಿ ಮುಖ್ಯಸ್ಥರನ್ನೂ ದಾರಿ ತಪ್ಪಿಸಿದೆ ಎಂದು thequint.com ಆರೋಪಿಸಿದೆ.

2017ರ ವಿಧಾನಸಭಾ ಚುನಾವಣೆ ಸಂದರ್ಭ ಇವಿಎಂ ನಿರ್ವಹಣೆಯಂತಹ ಸೂಕ್ಷ್ಮ ಕೆಲಸಗಳನ್ನು ಹೊರಗಿನವರಿಗೆ ವಹಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿತ್ತು ಎಂದು ಮಾಜಿ ಚುನಾವಣಾ ಮುಖ್ಯ ಆಯುಕ್ತ ಡಾ.ಎಸ್.ವೈ. ಖುರೇಷಿ ದಿ ಕ್ವಿಂಟ್ ಜೊತೆ ಮಾತನಾಡುತ್ತಾ ತಿಳಿಸಿದ್ದರು. ತಾನು ಈ ಬಗ್ಗೆ ಚುನಾವಣಾ ಆಯೋಗದ ಅಧಿಕಾರಿಗಳ ಜೊತೆ ಮಾತನಾಡಿದ್ದು, ಆಯೋಗದೊಳಗಿನ ಇಂಜಿನಿಯರ್ ಗಳು ಮಾತ್ರ ಇವಿಎಂಗಳು ಮತ್ತು ವಿವಿಪ್ಯಾಟ್ ಗಳನ್ನು ನಿರ್ವಹಿಸುತ್ತಾರೆ ಎಂದವರು ಭರವಸೆ ನೀಡಿದ್ದಾರೆ ಎಂದು ಖುರೇಷಿ ತಿಳಿಸಿದ್ದರು.

ಆದರೆ ಇದೀಗ ಆರ್ ಟಿಐ ಉತ್ತರ ಈ ಎಲ್ಲಾ ಹೇಳಿಕೆಗಳನ್ನು ಸುಳ್ಳಾಗಿಸಿದೆ!. ಇಷ್ಟು ಮಾತ್ರವಲ್ಲದೆ 2017ರ ವಿಧಾನಸಭೆ ಚುನಾವಣೆ ವೇಳೆ ಖಾಸಗಿ ಇಂಜಿನಿಯರ್ ಗಳನ್ನು ಬಳಸಲಾಗಿದೆ ಎಂದು ಇಸಿಐಲ್ ಸ್ವತಃ ಆರ್ ಟಿಐ ಉತ್ತರದಲ್ಲಿ ತಿಳಿಸಿದೆ. ಚುನಾವಣಾ ಆಯೋಗ ಹಾಗಾದರೆ ಸುಳ್ಳು ಹೇಳಿದ್ದೇಕೆ?.

ಕೃಪೆ: thequint.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X