ವರಿಷ್ಠರು ಸೂಚನೆ ನೀಡಿದರೆ 24 ಗಂಟೆಯಲ್ಲಿ ಸಚಿವ ಸಂಪುಟ ರಚನೆ: ಸಿಎಂ ಯಡಿಯೂರಪ್ಪ
![ವರಿಷ್ಠರು ಸೂಚನೆ ನೀಡಿದರೆ 24 ಗಂಟೆಯಲ್ಲಿ ಸಚಿವ ಸಂಪುಟ ರಚನೆ: ಸಿಎಂ ಯಡಿಯೂರಪ್ಪ ವರಿಷ್ಠರು ಸೂಚನೆ ನೀಡಿದರೆ 24 ಗಂಟೆಯಲ್ಲಿ ಸಚಿವ ಸಂಪುಟ ರಚನೆ: ಸಿಎಂ ಯಡಿಯೂರಪ್ಪ](https://www.varthabharati.in/sites/default/files/images/articles/2019/08/4/203749-1564924170.jpg)
ಬೆಂಗಳೂರು, ಆ.4: ನಮ್ಮದು ರಾಷ್ಟ್ರೀಯ ಪಕ್ಷ. ನಾನೊಬ್ಬನೇ ತೀರ್ಮಾನ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ದೆಹಲಿಯ ಬಿಜೆಪಿ ವರಿಷ್ಠರು ಸೂಚಿಸಿದ 24 ಗಂಟೆ ಒಳಗೆ ಸಚಿವ ಸಂಪುಟ ರಚಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ನರಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ.6, 7 ಹಾಗೂ 8ರಂದು ದೆಹಲಿಯಲ್ಲಿ ಇರುತ್ತೇನೆ. ಈ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿ ಸಚಿವ ಸಂಪುಟ ರಚನೆ ಕುರಿತು ಚರ್ಚೆ ನಡೆಸುತ್ತೇನೆಂದು ತಿಳಿಸಿದರು.
ಕೃಷ್ಣಾನದಿಯ ಪ್ರವಾಹ ಸ್ಥಿತಿಯ ಬಗ್ಗೆ ಪ್ರಸ್ತಾಪಿಸಿದ ಅವರು, ಬಿಜಾಪುರ ಮತ್ತು ಬೆಳಗಾವಿಯಲ್ಲಿ ಹಲವು ಹಳ್ಳಿಗಳು ಮುಳುಗಡೆಯಾಗಿವೆ. ಈ ಸಂಬಂಧ ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚೆಸಿದ್ದೇನೆ. ನಿರಾಶ್ರಿತರಿಗೆ ಶಾಲೆಗಳಲ್ಲಿ ಉಳಿಯಲು ವ್ಯವಸ್ಥೆ ಮಾಡಲಾಗಿದೆ. ನಾಳೆ ನಿರಾಶ್ರಿತ ಕೇಂದ್ರಗಳಿಗೆ ಭೇಟಿ ನೀಡಲಿದ್ದೇನೆಂದು ಅವರು ಹೇಳಿದರು.
Next Story