Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ…

ಓ ಮೆಣಸೇ…

ಪಿ.ಎ.ರೈಪಿ.ಎ.ರೈ5 Aug 2019 12:02 AM IST
share
ಓ ಮೆಣಸೇ…

   *ಎಚ್.ಡಿ. ದೇವೇಗೌಡರಿಗೆ ಅಧಿಕಾರದ ದುರಾಸೆ ಜಾಸ್ತಿ
- ಕೆ.ಆರ್. ಪೇಟೆ ಕೃಷ್ಣ, ಮಾಜಿ ಸ್ಪೀಕರ್
ಅದನ್ನು ದುರಾಸೆ ಎನ್ನುವುದಕ್ಕಿಂತ ಮಕ್ಕಳ ಕುರಿತ ಧೃತರಾಷ್ಟ್ರ ಪ್ರೀತಿ ಅನ್ನುವುದೇ ಚೆನ್ನ.

---------------------
 
ಕೇಂದ್ರದಲ್ಲಿ ಪ್ರಧಾನಿ ಮೋದಿಯ ಪ್ರಭಾವ ಎಷ್ಟಿದೆಯೋ ಕರ್ನಾಟಕದಲ್ಲಿ ಸಿಎಂ ಯಡಿಯೂರಪ್ಪರ ಪ್ರಭಾವವೂ ಅಷ್ಟೇ ಇದೆ

- ಕೆ.ಎನ್. ರಾಜಣ್ಣ, ಕಾಂಗ್ರೆಸ್ ಮಾಜಿ ಶಾಸಕ
ಮತದಾರರ ಪ್ರಜ್ಞಾವಂತಿಕೆಯ ಅಭಾವವೂ ಅಷ್ಟೇ ಇದೆ.

---------------------

ಅತೃಪ್ತ ಶಾಸಕರನ್ನು ಅನರ್ಹಗೊಳಿಸಿರುವುದು ಬಿಜೆಪಿಗೆ ಒಳಗೊಳಗೆ ಖುಷಿಯಾಗಿದೆ - ಬಸವರಾಜ ಹೊರಟ್ಟಿ, ವಿ.ಪ. ಸದಸ್ಯ
 ನಿಮಗೆ ಹೊರಗೊರಗೆ ಖುಷಿಯಾದಂತಿದೆ.

---------------------
 
ಬುಲೆಟ್ ಮತ್ತು ಬಾಂಬ್‌ಗಿಂತಲೂ ಅಭಿವೃದ್ಧಿಯೇ ಶಕ್ತಿಶಾಲಿ - ನರೇಂದ್ರ ಮೋದಿ, ಪ್ರಧಾನಿ
  ಅದು ಬಾಂಬ್‌ಗಿಂತ ಶಕ್ತಿಶಾಲಿ ಎನ್ನುವ ಕಾರಣಕ್ಕೆ ಅಭಿವೃದ್ಧಿಯಾಗದಂತೆ ನೋಡಿಕೊಳ್ಳುತ್ತಿದ್ದೀರಾ?
---------------------
 
ಪಾಶ್ಚಾತ್ಯ ಶಿಕ್ಷಣದಿಂದ ಇಂದಿನ ಯುವ ಜನತೆ ವಿದ್ಯೆ ಕಲಿಸಿದ ಗುರುಗಳನ್ನೇ ಮರೆಯುತ್ತಿದ್ದಾರೆ - ಕುಂಬ್ಳೆ ಸುಂದರ ರಾವ್, ಯಕ್ಷಗಾನ ಕಲಾವಿದ
ಸುರತ್ಕಲ್ ಗಲಭೆಗೆ ಪಾಶ್ಚಾತ್ಯ ಶಿಕ್ಷಣವೇ ಕಾರಣವಿರಬಹುದೇ?
---------------------
 
ಕಾಶ್ಮೀರ ವಿವಾದ ಬಗೆಹರಿಸಲು ಅಮೆರಿಕ ಅಧ್ಯಕ್ಷ ಟ್ರಂಪ್ ಮಧ್ಯಸ್ಥಿಕೆ ವಹಿಸಲು ಸಿದ್ಧವಿರುವುದಾಗಿ ಹೇಳಿರುವುದು ಪಾಕ್ ನಿರೀಕ್ಷೆಗೂ ಮೀರಿದ್ದಾಗಿದೆ - ಮುಹಮ್ಮದ್ ಖುರೇಷಿ, ಪಾಕ್ ಸಚಿವ
ಯಾರೋ ಮಧ್ಯಸ್ಥಿಕೆ ವಹಿಸಲು ಕಾಶ್ಮೀರವೆಂದರೆ, ಮದುವೆ ಸಂಬಂಧ ಅಲ್ಲ.

---------------------
 
ಗುಂಪು ಹಲ್ಲೆ, ಗೋರಕ್ಷಣೆ ವಿಚಾರ ಮುಂದಿಟ್ಟು ಕೊಂಡು ಹಿಂದೂ ಧರ್ಮದ ಹೆಸರು ಕೆಡಿಸುವ ಕೆಲಸ ನಡೆಯುತ್ತಿದೆ - ಮೋಹನ್ ಭಾಗವತ್, ಆರೆಸ್ಸೆಸ್ ಸರಸಂಘಚಾಲಕ
ಹಿಂದೂ ಧರ್ಮದ ಹೆಸರು ಕೆಡಿಸುವುದಕ್ಕಾಗಿಯೇ ಆರೆಸ್ಸೆಸ್ ಸ್ಥಾಪನೆಯಾಗಿರುವಾಗ, ಅವೆಲ್ಲದರ ಅಗತ್ಯವಿದೆಯೇ?
---------------------
 
2014 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ನನ್ನ ಜೀವನದಲ್ಲಿ ನಾನು ಮಾಡಿದ ಅತಿದೊಡ್ಡ ತಪ್ಪು - ನಂದನ್ ನಿಲೇಕಣಿ, ಇನ್ಫೋಸಿಸ್ ಸಂಸ್ಥಾಪಕ
ತಮ್ಮ ಪರವಾಗಿ ಕರಪತ್ರ ಹಿಡಿದು ಪ್ರಚಾರ ಮಾಡಿದ್ದು ನನ್ನ ಜೀವನದ ಅತಿ ದೊಡ್ಡ ತಪ್ಪು ಎಂದು ಕಾರ್ನಾಡ್ ಆತ್ಮ ಮರುಗುತ್ತಿದೆಯಂತೆ.

---------------------
 
ಕಾಂಗ್ರೆಸ್‌ನಲ್ಲಿ ಒಬ್ಬ ಟ್ರಬಲ್ ಶೂಟರ್ ಇದ್ದರೆ, ಬಿಜೆಪಿಯಲ್ಲಿ ಹತ್ತು ಟ್ರಬಲ್ ಕಿಲ್ಲರ್ಸ್ ಇದ್ದಾರೆ - ಕಟ್ಟಾ ಸುಬ್ರಮಣ್ಯ ನಾಯ್ಡು, ಮಾಜಿ ಸಚಿವ
 
ಅಲ್ಲಿ ಕುಖ್ಯಾತ ಶೂಟರ್‌ಗಳಷ್ಟೇ ಇದ್ದಾರೆ.

---------------------
  ಲಿಂಗಾಯತ ಧರ್ಮದ ಬಗ್ಗೆ ಮಾತನಾಡಲು ಮಾಜಿ ಸಿಎಂ ಸಿದ್ದರಾಮಯ್ಯ ಲಿಂಗಾಯತರೇ?
- ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ
ಯಡಿಯೂರಪ್ಪರು ಲಿಂಗಾಯತರಾದರೆ ಸಿದ್ದರಾಮಯ್ಯ ಯಾಕಲ್ಲ? ಎಂದು ಲಿಂಗಾಯತ ಸ್ವಾಮೀಜಿಗಳೇ ಕೇಳಿದ್ದಾರೆ.

---------------------
  ನನ್ನನ್ನು ನಾನು ಮಾರಿಕೊಂಡಿಲ್ಲ
- ಎಚ್. ವಿಶ್ವನಾಥ್, ಅನರ್ಹ ಶಾಸಕ
ನಿಮ್ಮನ್ನು ನೀವು ಕೊಂದು ಕೊಂಡಿದ್ದೀರಿ ಅಷ್ಟೇ.

---------------------
 
ಅಧಿಕಾರವಿದ್ದರೂ ನಾವು ನಮ್ಮ ಕಾರ್ಯಕರ್ತರನ್ನು ಕಡೆಗಣಿಸಿದ್ದು ಮಹಾಪರಾಧ -ದೇವೇಗೌಡ, ಮಾಜಿಪ್ರಧಾನಿ
ಅಧಿಕಾರವಿಲ್ಲದೇ ಇರುವಾಗ ಕಾರ್ಯಕರ್ತರ ನೆನಪಾಗುವುದು ಸಹಜ.

---------------------
 
ನನ್ನ ಮಾತು ಕೇಳಲಿಲ್ಲ, ಅದಕ್ಕೆ ಸಮ್ಮಿಶ್ರ ಸರಕಾರ ಪತನವಾಯಿತು - ಸತೀಶ್ ಜಾರಕಿಹೊಳಿ. ಮಾಜಿ ಸಚಿವ
ಅಂತೂ ಪತನದ ಹಿಂದೆ ನಿಮ್ಮ ಕೈವಾಡ ಇದೆಯೆಂದಾಯಿತು.

---------------------

ನಾನು ತಪ್ಪು ದಾರಿಯಲ್ಲಿ ನಡೆದರೆ ವಿರೋಧ ಪಕ್ಷದ ಪ್ರಮುಖರು ಒಂದು ಕರೆ ಮಾಡಿದರೆ ಸಾಕು ತಪ್ಪನ್ನು ತಿದ್ದಿ ಕೊಳ್ಳುವೆ - ಯಡಿಯೂರಪ್ಪ, ಮುಖ್ಯಮಂತ್ರಿ
  ಅಂದರೆ ಆಡಳಿತ ಪಕ್ಷದ ನಾಯಕರ ಕರೆ ಸ್ವೀಕರಿಸುವುದಿಲ್ಲ ಎಂದಾಯಿತು.
---------------------
ನಾಯಕತ್ವ ಇತ್ಯರ್ಥವಾಗದಿದ್ದರೆ ಕಾಂಗ್ರೆಸ್ ಸರ್ವನಾಶ ಖಚಿತ - ಶಶಿತರೂರು, ಸಂಸದ
   
ನಾಶವಾಗುವುದಕ್ಕೆ ಅಲ್ಲಿ ಉಳಿದಿರುವುದಾದರೂ ಏನು?
---------------------
 
ಅತೃಪ್ತರಿಗೂ ನಮಗೂ ಯಾವುದೇ ಸಂಬಂಧವಿಲ್ಲ - ಆರ್. ಅಶೋಕ್, ಶಾಸಕ
ಯಡಿಯೂರಪ್ಪ ಅವರಷ್ಟೇ ನೇರ ಸಂಬಂಧ ಇಟ್ಟುಕೊಂಡಿದ್ದರು ಎಂದಾಯಿತು.

---------------------
 
ರಾಜ್ಯದಲ್ಲಿ ಜೆಡಿಎಸ್ ಮತ್ತೊಮ್ಮೆ ಅಧಿಕಾರಕ್ಕೆ ಬರುವ ದಿನಗಳು ದೂರವಿಲ್ಲ -ಪ್ರಜ್ವಲ್ ರೇವಣ್ಣ, ಸಂಸದ
  ಅಂದರೆ ಮತ್ತೆ ರೆಸಾರ್ಟ್ ರಾಜಕೀಯ ಆರಂಭವಾಗಲಿದೆಯೇ?
---------------------
 

ಬುದ್ಧ ದೇವರನ್ನು ಪೂಜಿಸುತ್ತಿದ್ದ. ಹಾಗಾಗಿ ಅವನೂ ಹಿಂದೂ - ವಿಶ್ವೇಶ ತೀರ್ಥಸ್ವಾಮೀಜಿ, ಪೇಜಾವರ ಮಠ
ಮಠಕ್ಕೆ ಬಂದರೆ ಆತನನ್ನು ಯಾವ ಪಂಕ್ತಿಯಲ್ಲಿ ಕೂರಿಸುತ್ತೀರಿ?
---------------------
 
ನಾನು ಜಗತ್ತಿನಲ್ಲೇ ಅತ್ಯಂತ ಕಡಿಮೆ ಜನಾಂಗೀಯವಾದಿ ವ್ಯಕ್ತಿ - ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ಜಗತ್ತು ಅಷ್ಟೇನೂ ಕೆಟ್ಟು ಹೋಗಿಲ್ಲ.

---------------------
 
ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಪ್ಪಟ ಮಣ್ಣಿನ ಮಗ - ಗೋವಿಂದ ಕಾರಜೋಳ, ಮಾಜಿ ಸಚಿವ
ಕಾಗೆ ಹಾರಿಸುವುದೆಂದರೆ ಇದೆ.

---------------------
 
ಶೂಟಿಂಗ್ ಸೆಟ್‌ನಲ್ಲಿ ಜೀವಂತಿಕೆ ತುಂಬಿದರೆ ಚಿತ್ರದಲ್ಲಿಯೂ ಜೀವಂತಿಕೆ ಇರುತ್ತದೆ - ಹೃತಿಕ್ ರೋಷನ್, ನಟ
  ನಟನೆಯಲ್ಲೂ ಒಂದಿಷ್ಟು ಜೀವಂತಿಕೆ ಬೇಡವೇ?

---------------------

ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ - ಅಮಿತ್ ಶಾ, ಕೇಂದ್ರ ಸಚಿವ
ಅದನ್ನು ಜಗತ್ತಿಗೆ ಸಾಬೀತು ಮಾಡಿ ತೋರಿಸಿದ್ದೀರಿ.

---------------------

ಅನರ್ಹ ಶಾಸಕರ ಬೆನ್ನಿಗೆ ಬಿಜೆಪಿ ನಿಲ್ಲುವುದಿಲ್ಲ - ಪ್ರಹ್ಲಾದ್ ಜೋಷಿ, ಸಂಸದ
  ಬೆನ್ನಿಗೆ ಚೂರಿ ಹಾಕುವುದೆಂದರೆ ಇದೇ.
---------------------

share
ಪಿ.ಎ.ರೈ
ಪಿ.ಎ.ರೈ
Next Story
X