ದನಗಳನ್ನು ತೊಳೆಯಲು ಹೋದ ಯುವಕ ನೀರುಪಾಲು
![ದನಗಳನ್ನು ತೊಳೆಯಲು ಹೋದ ಯುವಕ ನೀರುಪಾಲು ದನಗಳನ್ನು ತೊಳೆಯಲು ಹೋದ ಯುವಕ ನೀರುಪಾಲು](https://www.varthabharati.in/sites/default/files/images/articles/2019/08/5/204001-1565027589.jpg)
ಶಿವಮೊಗ್ಗ, ಆ. 5: ಕೆರೆಯಲ್ಲಿ ದನಗಳ ಮೈ ತೊಳೆಯಲು ಹೋದ ಯುವಕನೋರ್ವ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದ ಬಳಿ ನಡೆದಿದೆ.
ಗಣೇಶ್ (25) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಇವರು ದನಗಳನ್ನು ಕೆರೆಯಲ್ಲಿ ತೊಳೆಯಲು ಹೋದಾಗ ನೀರುಪಾಲಾಗಿದ್ದಾರೆ ಎಂದು ಕುಟುಂಬದವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಕೆರೆಯಿಂದ ಶವವನ್ನು ಹೊರತೆಗೆಯಲಾಗಿದೆ. ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story