Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಅಡಿಗೆಯನ್ನು ಸುಲಭವಾಗಿಸುವ ನಾನ್-ಸ್ಟಿಕ್...

ಅಡಿಗೆಯನ್ನು ಸುಲಭವಾಗಿಸುವ ನಾನ್-ಸ್ಟಿಕ್ ಕುಕ್‌ವೇರ್ ಅಪಾಯವನ್ನೂ ತರುತ್ತದೆ!

ವಾರ್ತಾಭಾರತಿವಾರ್ತಾಭಾರತಿ6 Aug 2019 9:27 PM IST
share
ಅಡಿಗೆಯನ್ನು ಸುಲಭವಾಗಿಸುವ ನಾನ್-ಸ್ಟಿಕ್ ಕುಕ್‌ವೇರ್ ಅಪಾಯವನ್ನೂ ತರುತ್ತದೆ!

ಇಂದು ಮಹಿಳೆಯರು ಅಡಿಗೆ ಮನೆಯ ಅಗತ್ಯಗಳನ್ನು ಖರೀದಿಸುವಾಗ ನಾನ್-ಸ್ಟಿಕ್ ಕುಕ್‌ವೇರ್ ಅಥವಾ ಅಂಟಿಕೊಳ್ಳದ ಅಡಿಗೆ ಸಾಧನಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ. ನಾನ್-ಸ್ಟಿಕ್ ಪಾತ್ರೆಗಳು ಅತ್ಯಂತ ಕಡಿಮೆ ಎಣ್ಣೆಯನ್ನು ಬಳಸುವುದರಿಂದ ಹೆಚ್ಚು ಅನುಕೂಲಕರವಾಗಿವೆ. ನಾನ್-ಸ್ಟಿಕ್ ಪ್ಯಾನ್‌ನಲ್ಲಿ ಆಹಾರವನ್ನು ಬೇಯಿಸುವಾಗ ನೀವು ಅತ್ಯಂತ ಕಡಿಮೆ ಎಣ್ಣೆ ಬಳಸಿದ್ದರೂ ಅದು ಅಂಟಿಕೊಳ್ಳುವುದಿಲ್ಲ. ನಾನ್-ಸ್ಟಿಕ್‌ನ ಅನುಕೂಲತೆಗಳಿಂದಾಗಿ ಹೆಚ್ಚಿನ ಮನೆಗಳಲ್ಲಿ ಅವು ಬಳಕೆಯಾಗುತ್ತಿವೆ.

ನಾನ್ ಸ್ಟಿಕ್ ಅಡಿಗೆ ಪಾತ್ರೆಗಳು ಅನುಕೂಲವನ್ನು ನೀಡುವಷ್ಟೇ ಹಾನಿಯನ್ನೂ ನಮ್ಮ ಆರೋಗ್ಯಕ್ಕುಂಟು ಮಾಡುತ್ತವೆ.

 ಈ ಪಾತ್ರೆಗಳ ತಯಾರಿಕೆಯಲ್ಲಿ ಬಳಸಲಾಗುವ ಪರ್‌ಫ್ಲುರೊಒಕ್ಟನಾಯಿಕ್ ಆ್ಯಸಿಡ್(ಪಿಎಫ್‌ಒಎ) ಕ್ಯಾನ್ಸರ್‌ಕಾರಕವಾಗಿದ್ದು ನಾನ್-ಸ್ಟಿಕ್ ಪಾತ್ರೆಗಳಲ್ಲಿ ಅಡಿಗೆ ಮಾಡುತ್ತಿರುವಾಗ,ವಿಶೇಷವಾಗಿ ಅವು ಅತಿಯಾಗಿ ಬಿಸಿಯಾದಾಗ ವಿಷಕಾರಿ ಹೊಗೆಯನ್ನು ಹೊರಸೂಸುತ್ತದೆ. ಈ ಹೊಗೆಯನ್ನು ಸೇವಿಸಿದರೆ ನಾವು ಹಲವಾರು ಆರೋಗ್ಯ ಸಮಸ್ಯೆಗಳನ್ನು ಆಹ್ವಾನಿಸಿದಂತಾಗುತ್ತದೆ. ನಾನ್-ಸ್ಟಿಕ್ ಪಾತ್ರೆಗಳಲ್ಲಿ ಅಡಿಗೆ ಮಾಡುವುದರಿಂದ ಉಂಟಾಗುವ ಹಾನಿಗಳು ಇಲ್ಲಿವೆ.

► ಥೈರಾಯ್ಡ

ಪಿಎಫ್‌ಒಎ ಫ್ಲೋರೈಡ್ ಸಂಯುಕ್ತವಾಗಿದೆ. ಫ್ಲೋರೈಡ್ ಮೂಲತಃ ವಿಷವಸ್ತುವಾಗಿದ್ದು ಅದು ಹೈಪೊಥೈರಾಯ್ಡಿಸಮ್‌ಗೆ ಕಾರಣವಾಗುತ್ತದೆ.

► ಅರಿವಿನ ಕ್ಷೀಣತೆ

 ನಾನ್-ಸ್ಟಿಕ್ ಪಾಟ್‌ಗಳು ಮತ್ತು ಪ್ಯಾನ್‌ಗಳಲ್ಲಿರುವ ಫ್ಲೋರೈಡ್‌ನಿಂದಾಗಿ ಗ್ರಹಣ ಶಕ್ತಿ ಕ್ಷೀಣಿಸುತ್ತದೆ

► ಮೂಳೆ ರೋಗ ನಾನ್-ಸ್ಟಿಕ್ ಪಾತ್ರೆಗಳ ನಿಯಮಿತ ಬಳಕೆಯಿಂದಾಗಿ ಮೂಳೆಗಳು ಪೆಡಸಾಗುತ್ತವೆ ಮತ್ತು ಮೂಳೆಗಳು ದುರ್ಬಲಗೊಳ್ಳುತ್ತವೆ.

► ಕ್ಯಾನ್ಸರ್

ಪಿಎಫ್‌ಒಎ ಹಲ್ಲುಗಳು,ಮೂಳೆಗಳು ಮತ್ತು ಪೈನಿಯಲ್ ಗ್ರಂಥಿಯಲ್ಲಿ ಸಂಗ್ರಹಗೊಳ್ಳುತ್ತದೆ ಮತ್ತು ವಿವಿಧ ಕ್ಯಾನ್ಸರ್‌ಗಳಿಗೆ ನಾಂದಿ ಹಾಡುತ್ತದೆ.

► ಹೃದಯಾಘಾತ

  ಪ್ರತಿದಿನ ಪಿಎಫ್‌ಒಎಗೆ ಒಡ್ಡಿಕೊಳ್ಳುವುದು ಶರೀರದಲ್ಲಿಯ ಟ್ರೈಗ್ಲಿಸರೈಡ್ ಮಟ್ಟಗಳನ್ನು ಹೆಚ್ಚಿಸುತ್ತದೆ ಎನ್ನುವುದು ನಾನ್-ಸ್ಟಿಕ್ ಪಾತ್ರೆಗಳ ಕುರಿತು ಎಚ್ಚರಿಕೆಯ ಸಂಕೇತವಾಗಿದೆ. ಶರೀರದಲ್ಲಿ ಟ್ರೈಗ್ಲಿಸರೈಡ್ ಮಟ್ಟಗಳು ಹೆಚ್ಚಿದರೆ ಅದು ಹೃದಯಾಘಾತ,ಪಾರ್ಶ್ವವಾಯು ಮತ್ತು ಇತರ ಹೃದ್ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ.

► ಸಂತಾನೋತ್ಪತ್ತಿ ಸಮಸ್ಯೆ

 ಗರ್ಭಿಣಿಯರು ಪ್ರತಿದಿನ ಪಿಎಫ್‌ಒಎಗೆ ತೆರೆದುಕೊಂಡರೆ ಅದು ಅತ್ಯಂತ ಹಾನಿಕಾರಕವಾಗುತ್ತದೆ. ಅದು ಸಂತಾನೋತ್ಪತ್ತಿ ಸಮಸ್ಯೆಗಳನ್ನು ಹಾಗೂ ಕಡಿಮೆ ಜನನ ತೂಕ,ಮಗುವಿನ ತಲೆಯ ಗಾತ್ರದಲ್ಲಿ ಬದಲಾವಣೆಯಂತಹ ಹಲವಾರು ಜನ್ಮದತ್ತ ದೋಷಗಳಿಗೆ ಕಾರಣವಾಗುತ್ತದೆ.

► ರೋಗ ನಿರೋಧಕ ವ್ಯವಸ್ಥೆ

 ನಾನ್-ಸ್ಟಿಕ್ ಅಡಿಗೆ ಪಾತ್ರೆಗಳು ಶರೀರದ ರೋಗ ನಿರೋಧಕ ಶಕಿಗೆ ಹಾನಿಯನ್ನುಂಟು ಮಾಡುತ್ತವೆ ಎನ್ನುವುದು ಅವು ತರುವ ಅತ್ಯಂತ ಆಘಾತಕಾರಿ ಅಪಾಯವಾಗಿದೆ.

► ಯಕೃತ್ತು

ನಾನ್-ಸ್ಟಿಕ್ ಪಾತ್ರೆಗಳು ಹೊರಸೂಸುವ ವಿಷಯುಕ್ತ ಹೊಗೆಯು ಯಕೃತ್ತು ಮತ್ತು ಮೇದೋಜ್ಜೀರಕ ಗ್ರಂಥಿಗೆ ಅಪಾಯಕಾರಿಯಾಗಿದೆ.

► ಮೂತ್ರಪಿಂಡಗಳು

ಪಿಎಫ್‌ಒಎ ಮೂತ್ರಪಿಂಡಗಳಿಗೂ ಹಾನಿಯನ್ನುಂಟು ಮಾಡುತ್ತದೆ ಎಂದು ಕೆಲವು ಸಂಶೋಧನೆಗಳು ಬೆಳಕಿಗೆ ತಂದಿವೆ ಮತ್ತು ಈ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಯುತ್ತಿದೆ.

► ಕೊಲೆಸ್ಟ್ರಾಲ್

ನಾನ್-ಸ್ಟಿಕ್ ಪಾತ್ರೆಗಳನ್ನು ಹೆಚ್ಚಾಗಿ ಬಳಸುತ್ತಿದ್ದರೆ ಪಿಎಫ್‌ಒಎ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ ಮೂಲಕ ಹೃದ್ರೋಗಕ್ಕೆ ಕಾರಣವಾಗುತ್ತದೆ.

ನಾನ್-ಸ್ಟಿಕ್ ಕುಕ್‌ವೇರ್‌ನಿಂದ ಇಷ್ಟೆಲ್ಲ ಅಪಾಯಗಳಿರುವಾಗ ಸಾಂಪ್ರದಾಯಿಕವಾದ ಬೀಡು ಕಬ್ಬಿಣದ ಕಾವಲಿ,ಬಾಣಲೆ ಇತ್ಯಾದಿಗಳಿಗೆ ಮರಳುವುದು ಬುದ್ಧಿವಂತಿಕೆಯಾಗುತ್ತದೆ. ಆದರೆ ನಾನ್-ಸ್ಟಿಕ್ ಮೇಲಿನ ವ್ಯಾಮೋಹವನ್ನು ಬಿಡಲು ಅಸಾಧ್ಯವೆಂದಾದರೆ ಅವುಗಳಲ್ಲಿ ಕಡಿಮೆ ಉಷ್ಣತೆಯಲ್ಲಿ ಆಹಾರಗಳನ್ನು ಬೇಯಿಸಿ. ವಿಷಾನಿಲ ಸಂಯುಕ್ತಗಳು ಹೊರಹೊಮ್ಮುವುದನ್ನು ತಡೆಯಲು ಉಷ್ಣತೆ 500 ಡಿಗ್ರಿ ಫ್ಯಾರೆನ್‌ಹೀಟ್ ಮೀರದಂತೆ ಎಚ್ಚರಿಕೆ ವಹಿಸಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X