ಸಂಶಯಾಸ್ಪದ ಮೃತ್ಯು: ದೂರು
ಕುಂದಾಪುರ, ಆ. 6: ಕನ್ಯಾನ ಗ್ರಾಮದ ಜಾಡಿ ರಸ್ತೆ ಪಶ್ಚಿಮ ಬದಿಯ ಸರಕಾರಿ ಗೇರು ಹಾಡಿಯ ಬಳಿ ವ್ಯಕ್ತಿಯೊಬ್ಬರು ಅನುಮಾನಸ್ಪದವಾಗಿ ಮೃತಪಟ್ಟ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರನ್ನು ಬಾಲಕೃಷ್ಣ ಎಂದು ಗುರುತಿಸಲಾಗಿದೆ.
ಬೆಂಗಳೂರಿನಲ್ಲಿ ಬೇಕರಿ ವ್ಯಾಪಾರ ಮಾಡಿಕೊಂಡಿದ್ದ ಬಾಲಕೃಷ್ಣ ಅವರ ಮೃತದೇಹ ಆ.5ರಂದು ಬೆಳಗ್ಗೆ ಹಾಡಿಯ ಬಳಿ ಪತ್ತೆಯಾಗಿದ್ದು, ಈ ಬಗ್ಗೆ ಸ್ಥಳದಲ್ಲಿ ಪರಿಶೀಲಿಸಿದಾಗ ವಿಷದ ಬಾಟಲ್ ಹಾಗೂ ವಿಷದ ಪ್ಯಾಕೇಟ್ ಕಂಡು ಬಂದಿದೆ. ಆದರೂ ಬಾಲಕೃಷ್ಣ ಅವರ ಮರಣದಲ್ಲಿ ಸಂಶಯ ಇರುವುದಾಗಿ ಮೃತರ ಸಂಬಂಧಿ ಕುಂದ ಬಾರಂದಾಡಿ ಗ್ರಾಮದ ಸುಬ್ರಹ್ಮಣ್ಯ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
Next Story