ಗಾಳಿ, ಮಳೆ : ಪಾಂಡವರಕಲ್ಲಿನಲ್ಲಿ ಹಲವು ಮನೆಗಳಿಗೆ ಹಾನಿ, ಎಸ್ ಡಿ ಪಿ ಐ ನೆರವು

ಬಂಟ್ವಾಳ : ಧಾರಾಕಾರ ಮಳೆ ಮತ್ತು ಬಿರುಗಾಳಿಯಿಂದ ಪಾಂಡವರಕಲ್ಲು ನಲ್ಲಿ ಹಲವಾರು ಮನೆಗಳಿಗೆ ಹಾನಿ ಉಂಟಾಗಿದ್ದು, ಈ ಸಂದರ್ಭ ವಿಷಯ ತಿಳಿದ ಪಾಂಡವರಕಲ್ಲು ಎಸ್ ಡಿ ಪಿ ಐ ಕಾರ್ಯಕರ್ತರು ಹಾನಿ ಸ್ಥಳಕ್ಕೆ ಧಾವಿಸಿ ಜನರ ಕಷ್ಟ-ನಷ್ಟಗಳಿಗೆ ಸ್ಪಂದಿಸಿದರು.
ಬಡಗಕಜೆಕಾರು ಗ್ರಾಮ ಪಂಚಾಯತ್ ಸದಸ್ಯ ಅಥಾವುಲ್ಲಾ ರವರ ನೇತೃತ್ವದಲ್ಲಿ ಕಾರ್ಯಕರ್ತರು ಹಾನಿಯಾದ ಪ್ರದೇಶಗಳನ್ನು ಸುಗಮ ಗೊಳಿಸಿ, ಜನರ ಸಂಕಷ್ಟಕ್ಕೆ ನೆರವಾದರು.









