Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮರಗಳನ್ನು ಕಡಿದದ್ದಕ್ಕೆ ಗಳಗಳನೆ ಅತ್ತ...

ಮರಗಳನ್ನು ಕಡಿದದ್ದಕ್ಕೆ ಗಳಗಳನೆ ಅತ್ತ ಬಾಲಕಿ ಈಗ ರಾಜ್ಯದ ಹಸಿರು ರಾಯಭಾರಿ!

ವಾರ್ತಾಭಾರತಿವಾರ್ತಾಭಾರತಿ9 Aug 2019 1:52 PM IST
share
ಮರಗಳನ್ನು ಕಡಿದದ್ದಕ್ಕೆ ಗಳಗಳನೆ ಅತ್ತ ಬಾಲಕಿ ಈಗ ರಾಜ್ಯದ ಹಸಿರು ರಾಯಭಾರಿ!

ಇಂಫಾಲ್, ಆ.9: ತನ್ನ ಮನೆಯ ಬಳಿ ಹರಿಯುವ ನದಿ ದಂಡೆ ಸಮೀಪ ತಾನು ನೆಟ್ಟ ಎರಡು ಗುಲ್‍ ಮೊಹರ್ ಮರಗಳನ್ನು ಸ್ವಚ್ಛತಾ ಕಾರ್ಯವೊಂದರ ಸಂದರ್ಭ ಕಡಿದರೆಂಬ ಕಾರಣಕ್ಕೆ ಗಳಗಳನೆ ಅತ್ತು ಇಂಟರ್ನೆಟ್ ಸೆನ್ಸೇಶನ್ ಆಗಿದ್ದ ಮಣಿಪುರದ 9 ವರ್ಷದ ಬಾಲಕಿ ಇದೀಗ ರಾಜ್ಯದ ಹಸಿರು ರಾಯಭಾರಿಯಾಗಿ ನೇಮಕಗೊಂಡಿದ್ದಾಳೆ. ರಾಜ್ಯದ ಮುಖ್ಯಮಂತ್ರಿಯ ಗ್ರೀನ್ ಮಣಿಪುರ್ ಮಿಷನ್ ಯೋಜನೆಗೆ ಆಕೆ ಈಗ ಬ್ರ್ಯಾಂಡ್ ಅಂಬಾಸಿಡರ್.

ಎಲಂಗ್ಬಮ್ ಪ್ರೇಮ್ ಕುಮಾರ್ ಹಾಗೂ ಶಾಯಾ ದಂಪತಿಯ ಪುತ್ರಿಯಾಗಿರುವ ವೆಲೆಂಟಿನಾ, ಹಿಯಂಗ್ಲಮ್ ವಬಗೈ ಎಂಬಲ್ಲಿರುವ ಅಮುಟೊಂಬಿ ಡಿವೈನ್ ಲೈಫ್ ಸ್ಕೂಲ್ ಇಲ್ಲಿನ ಐದನೇ ತರಗತಿ ವಿದ್ಯಾರ್ಥಿನಿ. ಆಕೆ ಒಂದನೇ ತರಗತಿಯಲ್ಲಿರುವಾಗ ಎರಡು ಗುಲ್‍ ಮೊಹರ್ ಗಿಡಗಳನ್ನು ನೆಟ್ಟಿದ್ದು, ಅವುಗಳು ಈಗ ಸಾಕಷ್ಟು ದೊಡ್ಡ ಮರವಾಗಿವೆ. ಇತ್ತೀಚೆಗೆ ಅದನ್ನು ಕಡಿದಾಗ ಎಂದು ಅತ್ತಿದ್ದ ವೆಲೆಂಟಿನಾಳ ವೀಡಿಯೋವನ್ನು  ಆಕೆಯ ಮಾವ ಅಂತರ್ಜಾಲದಲ್ಲಿ ಶೇರ್ ಮಾಡಿದ ನಂತರ ಅದು ವೈರಲ್ ಆಗಿತ್ತು.

ಆಕೆಯ ಈ ಪ್ರಕೃತಿ ಪ್ರೇಮ ಮುಖ್ಯಮಂತ್ರಿಯ ಮನಸ್ಸನ್ನೂ ಕರಗಿಸಿತ್ತಲ್ಲದೆ ಅವರು ಆಕೆಯನ್ನು ರಾಜ್ಯದ ಹಸಿರು ರಾಯಭಾರಿಯನ್ನಾಗಿಸಿದ್ದಾರೆ. ಆಕೆ ಒಂದು ವರ್ಷದ ತನಕ ಈ ಹುದ್ದೆಯಲ್ಲಿರಲಿದ್ದು, ತನ್ನ ಮನೆಯ ಸುತ್ತಮುತ್ತ ನೆಡಲು ಹಲವು ಗಿಡಗಳನ್ನು ನೀಡಲಾಗಿದೆ. ಸರಕಾರ ಪ್ರವರ್ತಿತ ಗಿಡ ನೆಡುವ ಕಾರ್ಯಕ್ರಮಗಳಲ್ಲೂ ಆಕೆಯನ್ನು  ಶಾಮೀಲುಗೊಳಿಸಲಾಗುವುದು. ಸರಕಾರಿ ಜಾಹೀರಾತು ಹಾಗೂ ಪ್ರಚಾರಗಳಲ್ಲೂ ಆಕೆ ಕಾಣಿಸಿಕೊಳ್ಳಲಿದ್ದಾಳೆ.

ಆಕೆಗೆ ಸರಕಾರ ಸಂಭಾವನೆಯನ್ನೂ ನೀಡಲಿದ್ದು ಜತೆಗೆ ಸಂಚಾರ  ಸೌಲಭ್ಯ, ವಸತಿ ಹಾಗೂ ಆಹಾರ ಸೌಲಭ್ಯಗಳನ್ನೂ ನೀಡಲಾಗುವುದು.

ಜೂನ್ 22ರಂದು ಆರಂಭಗೊಂಡ ಸರಕಾರದ ಗ್ರೀನ್ ಮಣಿಪುರ್ ಮಿಷನ್ ಅನ್ವಯ ಅರಣ್ಯ ಪ್ರದೇಶಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X