Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ:...

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಹಲವು ಪ್ರಶಸ್ತಿಗಳನ್ನು ಗೆದ್ದ ಕನ್ನಡದ ‘ನಾತಿಚರಾಮಿ’, ‘ಕೆಜಿಎಫ್’

ವಾರ್ತಾಭಾರತಿವಾರ್ತಾಭಾರತಿ9 Aug 2019 3:58 PM IST
share
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಹಲವು ಪ್ರಶಸ್ತಿಗಳನ್ನು ಗೆದ್ದ ಕನ್ನಡದ ‘ನಾತಿಚರಾಮಿ’, ‘ಕೆಜಿಎಫ್’

ಹೊಸದಿಲ್ಲಿ, ಆ.9: 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಶುಕ್ರವಾರ ಪ್ರಕಟಿಸಲಾಗಿದ್ದು,11 ಪ್ರಶಸ್ತಿಗಳು ಕನ್ನಡದ ಮುಡಿಗೇರಿವೆ. ‘ನಾತಿಚರಾಮಿ’ ಅತ್ಯುತ್ತಮ ಕನ್ನಡ ಚಿತ್ರ ಸಹಿತ ಐದು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದರೆ,ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಎರಡು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಪ್ರಶಸ್ತಿಗಳ ಸಿಂಹಪಾಲನ್ನು ಬಾಲಿವುಡ್ ತನ್ನ ಮಡಿಲಿಗೆ ಹಾಕಿಕೊಂಡಿದೆ. ಗುಜರಾತಿ ಚಿತ್ರ ‘ಹೆಲ್ಲಾರೊ’ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ‘ಅಂಧಾಧುನ್’ಚಿತ್ರದಲ್ಲಿನ ನಟನೆಗಾಗಿ ಆಯುಷ್ಮಾನ್ ಖುರಾನಾ ಮತ್ತು ‘ಉರಿ:ದಿ ಸರ್ಜಿಕಲ್ ಸ್ಟ್ರೈಕ್’ ಚಿತ್ರಕ್ಕಾಗಿ ವಿಕಿ ಕೌಶಲ್ ಅವರು ಅತ್ಯುತ್ತಮ ನಟ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಅತ್ಯುತ್ತಮ ನಟಿ ಪ್ರಶಸ್ತಿಯು ತೆಲುಗು ಚಿತ್ರ ‘ಮಹಾನಟಿ’ಯಲ್ಲಿ ಅಂದಿನ ತಾರೆ ಸಾವಿತ್ರಿ ಪಾತ್ರವನ್ನು ನಿರ್ವಹಿಸಿರುವ ಕೀರ್ತಿ ಸುರೇಶ್ ಅವರ ಮುಡಿಗೇರಿದೆ.

ಕನ್ನಡಕ್ಕೆ ಸಂದ ಗೌರವಗಳು

► ಅತ್ಯುತ್ತಮ ಕನ್ನಡ ಚಿತ್ರ:ನಾತಿಚರಾಮಿ

► ಅತ್ಯುತ್ತಮ ಆ್ಯಕ್ಷನ್ ಚಿತ್ರ:ಕೆಜಿಎಫ್

► ಅತ್ಯುತ್ತಮ ಮಕ್ಕಳ ಚಿತ್ರ:ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು

► ಅತ್ಯುತ್ತಮ ಬಾಲನಟ:ಪಿ.ವಿ.ರೋಹಿತ್(ಒಂದಲ್ಲ ಎರಡಲ್ಲ)(ಇತರ ಮೂವರೊಂದಿಗೆ ಜಂಟಿಯಾಗಿ)

► ವಿಶೇಷ ಉಲ್ಲೇಖಾರ್ಹ ಪ್ರಶಸ್ತಿ:ಶ್ರುತಿ ಹರಿಹರನ್(ನಾತಿಚರಾಮಿ)

► ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ಸ್:ಕೆಜಿಎಫ್(ತೆಲುಗು ಚಿತ್ರ ‘AWE’ಯೊಂದಿಗೆ ಜಂಟಿಯಾಗಿ)

► ಅತ್ಯುತ್ತಮ ಗೀತೆರಚನೆ:ಮಾಯಾವಿ ಮನವೆ(ನಾತಿಚರಾಮಿ)

► ಅತ್ಯುತ್ತಮ ಸಂಕಲನ:ನಾತಿಚರಾಮಿ

► ಅತ್ಯುತ್ತಮ ಹಿನ್ನೆಲೆ ಗಾಯಕಿ:ಬಿಂದು ಮಾಲಿನಿ(ಮಾಯಾವಿ ಮನವೆ-ನಾತಿಚರಾಮಿ)

► ರಾಷ್ಟ್ರೀಯ ಏಕತೆ ಕುರಿತು ಅತ್ಯುತ್ತಮ ಚಿತ್ರಕ್ಕಾಗಿ ನರ್ಗಿಸ್ ದತ್ ಪ್ರಶಸ್ತಿ:ಒಂದಲ್ಲ ಎರಡಲ್ಲ

► ಅತ್ಯುತ್ತಮ ಆರ್ಕೈವ್ಸ್ ಚಿತ್ರ ಪ್ರಶಸ್ತಿ:ಮೂಕಜ್ಜಿಯ ಕನಸುಗಳು

► ರಾಷ್ಟ್ರಮಟ್ಟದ ಇತರ ಪ್ರಶಸ್ತಿಗಳು

► ಅತ್ಯುತ್ತಮ ಚಿತ್ರ: ಹೆಲ್ಲಾರೊ(ಗುಜರಾತಿ)

► ಅತ್ಯುತ್ತಮ ನಿರ್ದೇಶಕ: ಆದಿತ್ಯ ಧರ್(ಉರಿ)

► ಅತ್ಯುತ್ತಮ ನಟಿ: ಕೀರ್ತಿ ಸುರೇಶ್(ಮಹಾನಟಿ-ತೆಲುಗು)

► ಅತ್ಯುತ್ತಮ ನಟ: ಆಯುಷ್ಮಾನ್ ಖುರಾನಾ(ಬಧಾಯಿ ಹೋ-ಹಿಂದಿ) ಮತ್ತು ವಿಕಿ ಕೌಶಲ್(ಉರಿ-ಹಿಂದಿ)

► ಅತ್ಯುತ್ತಮ ಪೋಷಕ ನಟಿ: ಸುರೇಖಾ ಸಿಕ್ರಿ(ಬಧಾಯಿ ಹೋ-ಹಿಂದಿ)

► ಅತ್ಯುತ್ತಮ ಪೋಷಕ ನಟ: ಸ್ವಾನಂದ ಕಿರ್ಕಿರೆ(ಚುಂಬಕ್-ಮರಾಠಿ)

► ಅತ್ಯುತ್ತಮ ಬಾಲನಟ: ಸಮೀಪ್ ಸಿಂಗ್(ಹರ್ಜೀತಾ-ಪಂಜಾಬಿ),ತಲ್ಹಾ ಅರ್ಷದ್ ರೆಸಿ(ಹಮೀದ್-ಉರ್ದು) ಮತ್ತು ಶ್ರೀನಿವಾಸ ಪೋಕಳೆ(ನಾಳ-ಮರಾಠಿ)

► ಅತ್ಯುತ್ತಮ ಮನೋರಂಜನಾ ಚಿತ್ರ: ಬಧಾಯಿ ಹೋ(ಹಿಂದಿ)

► ಪರಿಸರ ರಕ್ಷಣೆ ಕುರಿತು ಅತ್ಯುತ್ತಮ ಚಿತ್ರ: ಪಾನಿ(ಮರಾಠಿ)

► ಸಾಮಾಜಿಕ ವಿಷಯ ಕುರಿತು ಅತ್ಯುತ್ತಮ ಚಿತ್ರ: ಪ್ಯಾಡ್‌ಮ್ಯಾನ್(ಹಿಂದಿ)

► ಅತ್ಯುತ್ತಮ ಹಿಂದಿ ಚಿತ್ರ: ಬಧಾಯಿ ಹೋ

► ಅತ್ಯುತ್ತಮ ಉರ್ದು ಚಿತ್ರ: ಹಮೀದ್

► ಅತ್ಯುತ್ತಮ ಮರಾಠಿ ಚಿತ್ರ: ಭೋಂಗಾ

► ಅತ್ಯುತ್ತಮ ಮಲಯಾಳಂ ಚಿತ್ರ: ಸುಡಾನಿ ಫ್ರಂ ನೈಜಿರಿಯಾ

► ಅತ್ಯುತ್ತಮ ತಮಿಳು ಚಿತ್ರ: ಬಾರಂ

► ಅತ್ಯುತ್ತಮ ತೆಲುಗು ಚಿತ್ರ: ಮಹಾನಟಿ

► ಅತ್ಯುತ್ತಮ ಮೂಲ ಚಿತ್ರಕಥೆ: ರಾಹುಲ ರವೀಂದ್ರನ್(ಚಿ ಲಾ ಸೌ-ತೆಲುಗು)

► ಅತ್ಯುತ್ತಮ ಅಳವಡಿತ ಚಿತ್ರಕಥೆ: ಶ್ರೀರಾಮ ರಾಘವನ್(ಅಂಧಾಧುನ್-ಹಿಂದಿ)

► ಅತ್ಯುತ್ತಮ ನೃತ್ಯ ನಿರ್ದೇಶನ: ಘೂಮರ್(ಪದ್ಮಾವತ್-ಹಿಂದಿ)

► ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ಸ್: AWE(ತೆಲುಗು)

► ಅತ್ಯುತ್ತಮ ಸಂಗೀತ ನಿರ್ದೇಶಕ: ಸಂಜಯ ಲೀಲಾ ಬನ್ಸಾಲಿ(ಪದ್ಮಾವತ್)

► ಅತ್ಯುತ್ತಮ ಹಿನ್ನೆಲೆ ಸಂಗೀತ: ಉರಿ(ಹಿಂದಿ)

► ಅತ್ಯುತ್ತಮ ಮೇಕಪ್: AWE(ತೆಲುಗು)

► ಅತ್ಯುತ್ತಮ ಕಾಸ್ಟೂಮ್ ಡಿಸೈನ್: ಮಹಾನಟಿ(ತೆಲುಗು)

► ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: ಕಮ್ಮರ ಸಂಭವಂ (ಮಲಯಾಳಂ)

► ಅತ್ಯುತ್ತಮ ಸಿನೆಮಟೋಗ್ರಾಫಿ: ಓಲಾ(ಮಲಯಾಳಂ)

► ಅತ್ಯುತ್ತಮ ಸಂಭಾಷಣೆ: ತಾರೀಖ್(ಬಂಗಾಳಿ)

► ಅತ್ಯುತ್ತಮ ಹಿನ್ನೆಲೆ ಗಾಯಕ: ಅರಿಜಿತ್ ಸಿಂಗ್(ಬಿಂತೆ ದಿಲ್-ಪದ್ಮಾವತ್)

share
ವಾರ್ತಾಭಾರತಿ
ವಾರ್ತಾಭಾರತಿ
Next Story
X