ಮಂಗಳೂರು: ನೇತ್ರಾವತಿ ನದಿಗೆ ಹಾರಿದ ಯುವತಿ

ಮಂಗಳೂರು, ಆ. 9: ನೇತ್ರಾವತಿ ನದಿಯ ಉಳ್ಳಾಲ ಸೇತುವೆಯಿಂದ ಯುವತಿಯೋರ್ವಳು ಶುಕ್ರವಾರ ಸಂಜೆ ಹಾರಿದ ಘಟನೆ ನಡೆದಿದೆ.
ಯುವತಿಯನ್ನು ಗಜನೀಶ್ವರಿ ಕೆ ಎಂದು ಗುರುತಿಸಲಾಗಿದ್ದು, ಸಂಜೆ 7 ಗಂಟೆಯ ಸುಮಾರಿಗೆ ತನ್ನ ಬ್ಯಾಗ್, ಮೊಬೈಲ್ನ್ನು ಸೇತುವೆ ಮೇಲೆಯೇ ಎಸೆದು ನದಿಗೆ ಹಾರಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳದಲ್ಲಿ ಕುತೂಹಲಿಗರ ನೂರಾರು ಜನರ ದಂಡು ನೆರೆದಿದೆ.
ಕಂಕನಾಡಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಪರಿಶೀಲನೆ ನಡೆಸಿದ್ದಾರೆ.
Next Story





