Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಉಡುಪಿ: ಕೋಡಿ, ಗಂಗೊಳ್ಳಿಯಲ್ಲಿ...

ಉಡುಪಿ: ಕೋಡಿ, ಗಂಗೊಳ್ಳಿಯಲ್ಲಿ ಮುಂದುವರಿದ ಕಡಲ ಕೊರೆತ

ವಾರ್ತಾಭಾರತಿವಾರ್ತಾಭಾರತಿ10 Aug 2019 9:46 PM IST
share

ಉಡುಪಿ, ಆ.10: ರಾಜ್ಯದ ವಿವಿದೆಡೆಗಳಲ್ಲಿ ಕಂಡುಬಂದಿರುವ ಭೀಕರವಾದ ನೆರೆ ಪರಿಸ್ಥಿತಿ ಉಡುಪಿ ಜಿಲ್ಲೆಯಲ್ಲಿ ಕಂಡು ಬರದಿದ್ದರೂ, ಜಿಲ್ಲೆಯಲ್ಲಿ ಗಾಳಿ- ಮಳೆಯಿಂದ ಮನೆಗಳ ಕುಸಿತ, ಹಾನಿಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಅದೇ ರೀತಿ ಕುಂದಾಪುರ ತಾಲೂಕಿನ ಕೋಡಿ ಮತ್ತು ಗಂಗೊಳ್ಳಿಗಳಲ್ಲಿ ಕಡಲು ಕೊರೆತ ಮುಂದುವರಿದಿದೆ ಎಂದು ವರದಿಗಳು ತಿಳಿಸಿವೆ.

ಕುಂದಾಪುರದಲ್ಲಿ ಇಂದು ಮೂರು ಮನೆಗಳಿಗೆ ಮಾತ್ರ ಹಾನಿಯಾದ ವರದಿಗಳು ಬಂದಿದ್ದು, ಉಳಿದಂತೆ ಕೋಡಿ ಮತ್ತು ಗಂಗೊಳ್ಳಿಯಲ್ಲಿ ಕಡಲ ಕೊರೆತ ಮುಂದುವರಿದಿದೆ. ಆದರೆ ಇದರಿಂದ ತೆಂಗಿನ ಮರಗಳಿಗಾಗಲೀ, ಮನೆಗಳಿಗಾಗಲೀ ಯಾವುದೇ ಅಪಾಯವಾಗಿಲ್ಲ ಎಂದು ಕುಂದಾಪುರದ ತಹಶೀಲ್ದಾರ್ ತಿಪ್ಪೇಸ್ವಾಮಿ ತಿಳಿಸಿದ್ದಾರೆ.

 ಚಕ್ರಾ ನದಿಗೆ ಲಿಂಗನಮಕ್ಕಿ ಅಣೆಕಟ್ಟಿನಿಂದ ನೀರು ಬಿಡುವ ಸಾಧ್ಯತೆ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ವೈರಲ್ ಆಗುತ್ತಿರುವ ಕುರಿತು ಪ್ರಶ್ನಿಸಿದಾಗ, ವಾರಾಹಿ ಹಾಗೂ ಚಕ್ರಾ ನದಿಗಳಿಗೆ ನೀರು ಬಿಡುವ ಕುರಿತಂತೆ ಅಲ್ಲಿನ ಇಂಜಿನಿಯರ್‌ ಗಳೊಂದಿಗೆ ಮಾತನಾಡಿದ್ದು, ಅಂಥಾ ಸಾಧ್ಯತೆ ಇದ್ದರೆ, ಸಾಕಷ್ಟು ಮುಂಚಿತವಾಗಿ ಮಾಹಿತಿ ನೀಡುವಂತೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಬೈಂದೂರು ತಾಲೂಕಿನಲ್ಲಿ ಇಂದು ಎಂಟು ಮನೆಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ. ಬಿಜೂರು ಗ್ರಾಮದ ರಮೇಶ್ ಪೂಜಾರಿ ಎಂಬವರ ಮನೆ ಗಾಳಿ-ಮಳೆಗೆ ಸಂಪೂರ್ಣ ಹಾನಿಗೊಂಡಿದ್ದು 1.5 ಲಕ್ಷ ರೂ. ನಷ್ಟವಾಗಿದೆ. ಹೆರೂರು ಗ್ರಾಮದ ಕೃಷ್ಣ ನಾಯ್ಕರ ಮನೆಗೆ 22ಸಾವಿರ, ಶೀನಾ ನಾಯ್ಕರ ಮನೆಗೆ 24ಸಾವಿರ, ನಾವುಂದ ಗ್ರಾಮದ ಸಾಕು ಅವರ ತೋಟಕ್ಕೆ 15 ಸಾವಿರ, ಗುಡ್ಡಮ್ಮ ಶೆಡ್ತಿ ಅವರ ಮನೆಗೆ, ಹಡವು ಗ್ರಾಮದ ಕೃಷ್ಣಮೂರ್ತಿ ಉಡುಪರ ಮನೆಗೆ 20ಸಾವಿರ, ನಾಡದ ಖಾದರ್ ಅವರ ಮನೆಗೆ ಆರು ಸಾವಿರ ರೂ., ನಾವುಂದ ಸಿಂಗಾರಿ ಶೆಡ್ತಿ ತೋಟ ಭಾರೀ ಪ್ರಮಾಣದಲ್ಲಿ ಹಾನಿಗೊಳಗಾಗಿದೆ.

ಕುಂದಾಪುರದಲ್ಲಿ ಕೋಣಿ ನಾಗಪ್ಪ ಪೂಜಾರಿ ಪಕ್ಕಾ ಮನೆಗೆ ಭಾಗಶ: ಹಾನಿಯಾಗಿ 40 ಸಾವಿರ, ಹಂಗಳೂರಿನ ಕೃಷ್ಣ ದೇವಾಡಿಗ ಮನೆಗೆ 20ಸಾವಿರ, ಹೊಂಬಾಡಿ ಮಂಡಾಡಿಯ ಸುಮನ ಶೆಟ್ಟಿ ಅವರ ತೋಟಗಾರಿಕಾ ಬೆಳೆಗಳಿಗೆ 25,000ರೂ. ನಷ್ಟವಾದ ಬಗ್ಗೆ ವರದಿಗಳು ಬಂದಿವೆ.

ಬ್ರಹ್ಮಾವರ ತಾಲೂಕಿನ ಆರೂರು ಗ್ರಾಮದ ವೆಂಕಟ ನಾಯ್ಕರ ಮನೆಗೆ 20ಸಾವಿರ, ಬನ್ನಂಜಿಯ ಆನಂದ ಶೆಟ್ಟಿ ಅವರ ಮನೆ ಸಂಪೂರ್ಣ ಹಾನಿಗೊಂಡಿದ್ದು ಎರಡು ಲಕ್ಷ ರೂ., ಚೇರ್ಕಾಡಿ ಗ್ರಾಮದ ಮಾಲತಿ ಅವರ ಮನೆಗೆ 10 ಸಾವಿರ, ಸದಾನಂದ ಶೆಟ್ಟಿ ಅವರ ಮನೆಗೆ 10 ಸಾವಿರ ರೂ. ನಷ್ಟವಾಗಿದೆ.

 ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮದ ವಿಠಲ ಶೆಟ್ಟಿ ಅವರ ತೋಟದ 45 ಅಡಿಕೆ, 250 ಬಾಳೆ ಗಿಡಗಳನ್ನು ಹಾನಿಗೊಂಡಿದ್ದು 50,000ರೂ.ನಷ್ಟ ವಾಗಿದೆ.ಕಾಂತಾವರ ಮರುತಗುಡ್ಡೆಯ ಗಿರೀಶ ಪೂಜಾರಿ ಅವರ ಅಂಗಡಿ ಮೇಲ್ಚಾವಣಿ ಹಾರಿಹೋಗಿ 10ಸಾವಿರ, ಅದೇ ಗ್ರಾಮದ ಲೀಲಾ ನಾಯ್ಕ, ಸುಂದರ ನಲ್ಕೆ, ಹಾಗೂ ಯಾದವ ನಲ್ಕೆ ಅವರ ಮನೆಗೆ ತಲಾ 10,000ರೂ., ಕಾಂತಾವರ ಬೇಲಾಡಿ ಹೊಸಮನೆಯ ಜಯಶ್ರೀ ಭಟ್ ಅವರ ಮನೆಗೆ 20 ಸಾವಿರ ಹಾಗೂ ನಂದಳಿಕೆ ಗ್ರಾಮದ ವಸಂತ ಶೆಟ್ಟಿ ಅವರ ಮನೆಗೆ 30 ಸಾವಿರ ರೂ. ನಷ್ಟವಾದ ಬಗ್ಗೆ ಅಂದಾಜು ಮಾಡಲಾಗಿದೆ ಎಂದು ತಾಲೂಕು ಕಚೇರಿ ಮಾಹಿತಿ ನೀಡಿದೆ.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯ ಪ್ರಾಕೃತಿಕ ವಿಕೋಪ ನಿಯಂತ್ರಣ ಕಚೇರಿಗೆ ಬಂದ ಮಾಹಿತಿಯಂತೆ ಜಿಲ್ಲೆಯಲ್ಲಿ 28 ಪ್ರಕರಣಗಳಲ್ಲಿ ಐದು ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ಹಾನಿ ಸಂಭವಿಸಿದೆ. ಬೈಂದೂರಿನ ಶಿರೂರು ಗ್ರಾಮದ ತಿಮ್ಮ ಆಚಾರಿ ಮನೆಗೆ 50 ಸಾವಿರ, ಬ್ರಹ್ಮಾವರದ ಚಿತ್ರವಾಡಿ ಗ್ರಾಮದ ರತ್ನ ನಾಯರಿ, ಹಲುವಳ್ಳಿ ಗ್ರಾಮದ ಕಮಲ ಪೂಜಾರ್ತಿ ಮನೆಗೆ ತಲಾ 20 ಸಾವಿರ ರೂ.ನಷ್ಟ ಸಂಭವಿಸಿದೆ.

ಇನ್ನು ಕುಂದಾಪುರ ತಾಲೂಕು ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಸೂಡ ಹಿರಿಯ ಪ್ರಾಥಮಿಕ ಶಾಲೆಯ ಮೇಲೆ ಮರಬಿದ್ದು ಏಳು ಲಕ್ಷ ರೂ. ನಷ್ಟ ಉಂಟಾಗಿದೆ. ಅಂಜಾರು ಗ್ರಾಮದ ಗಿರಿಜಮ್ಮ ಶೆಡ್ತಿ ಮನೆಗೆ 50 ಸಾವಿರ, ಅದೇ ಗ್ರಾಮದ ಸುಫಲ ಶೆಟ್ಟಿ ಮನೆಗೆ 40 ಸಾವಿರ, ಆನಗಳ್ಳಿ ಗ್ರಾಮದ ಭಾರತಿ ಶೆಟ್ಟಿ ಮನೆಗೆ 50 ಸಾವಿರ, ಬಳ್ಕೂರು ಗ್ರಾಮದ ಸುಚಿತ್ರ ಅವರ ಮನೆಗೆ 50 ಸಾವಿರ ನಷ್ಟವಾಗಿದೆ.

ಇನ್ನು ಕಾರ್ಕಳ ತಾಲೂಕು ಮುಡಾರು ಗ್ರಾಮದ ವನಿತಾ ಶೆಟ್ಟಿ ಅವರ ಮನೆಗೆ ಎರಡು ಲಕ್ಷ ರೂ. ಹಾನಿ ಸಂಭವಿಸಿದೆ. ಅದೇ ರೀತಿ ಈದು ಗ್ರಾಮದ ಗಣೇಶ್ ಗೋಡಬೋಲೆ ಅವರ ಗಾಳಿ ಮಳೆಯಿಂದ 1.20 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜು ಮಾಡಲಾಗಿದೆ.

ಜಿಲ್ಲೆಯಲ್ಲಿ ತೋಟದ ಬೆಳೆಗಳಿಗೆ ಹಾಗೂ ಕೃಷಿ ಬೆಳೆಗಳಿಗೆ ಹಾನಿಯಾದ 14 ಪ್ರಕರಣಗಳು ವರದಿಯಾಗಿದ್ದು ಇದರಿಂದ ಒಟ್ಟು ಸುಮಾರು 2.50 ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ನಷ್ಟದ ಅಂದಾಜು ಮಾಡಲಾಗಿದೆ. ಕುಂದಾಪು ತಾಲೂಕಿನಿಂದ 12 ಹಾಗೂ ಕಾರ್ಕಳ ತಾಲೂಕಿನಿಂದ ಎರಡು ಪ್ರಕರಣಗಳು ವರದಿಯಾಗಿವೆ ಎಂದು ಜಿಲ್ಲಾಧಿಕಾರಿ ಕಚೇರಿ ನಿಯಂತ್ರಣ ಕೇಂದ್ರ ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X