Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಉಡುಪಿ: ಜಿಲ್ಲೆಯಲ್ಲಿ ಮನೆಗಳಿಗೆ, ಕೃಷಿ...

ಉಡುಪಿ: ಜಿಲ್ಲೆಯಲ್ಲಿ ಮನೆಗಳಿಗೆ, ಕೃಷಿ ಬೆಳೆಗೆ ಹಾನಿ

ವಾರ್ತಾಭಾರತಿವಾರ್ತಾಭಾರತಿ13 Aug 2019 10:22 PM IST
share

ಉಡುಪಿ, ಆ.13: ಆಗಾಗ ಸುರಿಯುತ್ತಿರುವ ಮಳೆಗೆ ಜಿಲ್ಲೆಯಲ್ಲಿ ಮನೆಗಳ ಗೋಡೆ ಕುಸಿಯುವ, ಮರಗಳು ಬಿದ್ದು ಹಾನಿಗೊಳ್ಳುವ, ತೋಟಗಾರಿಕಾ ಬೆಳೆ ಹಾಗೂ ಕೃಷಿ ಬೆಳೆಗೆ ಹಾನಿಯಾಗುವ ಪ್ರಕರಣಗಳು ಇನ್ನೂ ಮುಂದುವರಿದಿದ್ದು, ಜಿಲ್ಲೆಯಲ್ಲಿ 50ಕ್ಕೂ ಅಧಿಕ ಪ್ರಕರಣಗಳು ಇಂದೂ ನಾನಾ ಕಡೆಗಳಿಂದ ವರದಿಯಾಗಿವೆ.

ಬ್ರಹ್ಮಾವರ ತಾಲೂಕು ನೀಲಾವರ ಗ್ರಾಮದ ಗಿರಿಜಾ ಆಚಾರ್ತಿ ಎಂಬವರ ಮನೆಯ ಮಾಡು ಕುಸಿದು 50,000ಕ್ಕೂ ಅಧಿಕ ನಷ್ಟವಾದ ಬಗ್ಗೆ ವರದಿಯಾಗಿದೆ ಅದೇ ರೀತಿ ನೀಲಾವರ ಗ್ರಾಮದ ಬಾವಲಿಕುದ್ರಿನ ಸಿಲ್ವಿಯಾ ಡಿಸೋಜ ಅವರ ಮನೆಗೋಡೆ ಕುಸಿದು 20ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ.

ಉಳಿದಂತೆ ಉಪ್ಪೂರು ಗ್ರಾಮದ ಹಲವು ಮನೆಗಳಿಗೆ ಹಾನಿಯಾಗಿವೆ. ಮಹಾಬಲ ಮೆಂಡನ್‌ರ ಮನೆಗೆ 65,700 ರೂ., ವನಜ ಅವರ ಪಕ್ಕಾ ಮನೆಗೆ 20.300ರೂ., ನಾಗಿ ಪೂಜಾರ್ತಿ ಮನೆಗೆ 10 ಸಾವಿರ ರೂ., ಶಶಿಕಲಾ ಮನೆಗೆ 11,200ರೂ., ಮಾಧವ ಪೂಜಾರಿಯವರ ಮನೆಗೆ 24ಸಾವಿರ ರೂ., ಅಣ್ಣಯ್ಯ ಪೂಜಾರಿ ಮನೆಗೆ 6ಸಾವಿರ ರೂ., ಹಾವಂಜೆ ಗ್ರಾಮದ ಪಾರ್ವತಿ ಮನೆಗೆ 21,000ರೂ. ನಷ್ಟವಾಗಿದೆ.

ಶಾಲೆಗಳಿಗೆ ಹಾನಿ: ಬೈಂದೂರು ತಾಲೂಕಿನ ಎರಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ನಿನ್ನೆಯ ಮಳೆಯಿಂದ ಹಾನಿಯಾದ ವರದಿಗಳು ಬಂದಿವೆ. ಎಳಜಿತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆ ಇಂದು 10 ಗಂಟೆ ಸುಮಾರಿಗೆ ಬಿರುಕು ಬಿಟ್ಟಿದ್ದು 25,000ರೂ. ಹಾಗೂ ಗೋಳಿಹೊಳೆ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯ ಮಾಡಿನ ಪಕ್ಕಾಸಿ ಗಾಳಿಗೆ ತುಂಡಾಗಿದ್ದು 25,000ರೂ.ನಷ್ಟವಾಗಿದೆ.

ಬಡಾಕೆರೆ ನಾರಾಯಣ ರಾವ್ ಅವರ ಮನೆಯ ಕೊಟ್ಟಿಗೆಗೆ ಹಾನಿಯಾಗಿ 18ಸಾವಿರ ರೂ., ತೆಗ್ಹಗರ್ಸೆಯ ತಿಮ್ಮಪ್ಪ ಗಾಣಿಗರ ಮನೆ ಹಾಗೂ ಕೊಟ್ಟಿಗೆಗೆ ಹಾನಿಯಾಗಿದೆ. ಬಿಜೂರು ಗ್ರಾಮದ ಚಂದ್ರಕಾಂತ ನಾಯಕ್‌ರ ಮನೆಗೆ ಭಾಗಶ: ಹಾನಿಯಾಗಿ 40ಸಾವಿರ ರೂ., ನಾಡದ ಸದಾಶಿವ ಮಯ್ಯರ ಮನೆ ಮೇಲೆ ಮರಬಿದ್ದು 25ಸಾವಿರ ರೂ.ನಷ್ಟವಾಗಿದೆ.

ಉಳಿದಂತೆ ಕೆರ್ಗಾಲು ಗ್ರಾಮದ ಮುಕಾಂಬು ಮನೆಗೆ 15 ಸಾವಿರ, ಅದೇ ಗ್ರಾಮದ ಸೀತು ಮನೆಗೆ 12 ಸಾವಿರ, ಯಶೋಧ ಅವರ ಮನೆಗೆ 12 ಸಾವಿರ, ಸುಬ್ಬಿ ಅವರ ಮನೆಗೆ 12 ಸಾವಿರ, ವೆಂಕಮ್ಮ ಅವರ ಮನೆಗೆ 13ಸಾವಿರ ರೂ., ಅನಸೂಯರ ಮನೆಗೆ 12ಸಾವಿರ, ಯಡ್ತರೆ ಗ್ರಾಮದ ಗೋವಿಂದರ ಮನೆಗೆ 50ಸಾವಿರ ರೂ., ಅಣ್ಣಪ್ಪ ಪೂಜಾರಿ ಮನೆಗೆ ಒಂದು ಲಕ್ಷ ರೂ., ಬಿಜೂರು ಗ್ರಾಮದ ವೆಂಕಮ್ಮ ಪೂಜಾರ್ತಿ ಮನೆಗೆ 50 ಸಾವಿರ, ಹಾಗೂ ನಾರಾಯಣ ಶೆಟ್ಟಿ ಅವರ ಮನೆಗೆ 35 ಸಾವಿರ ರೂ. ನಷ್ಟವಾದ ಬಗ್ಗೆ ವರದಿಗಳು ಬಂದಿವೆ.

ಕಾರ್ಕಳ ತಾಲೂಕಿನ ನಿಂಜೂರಿನ ಶಾಂತಾ ಅವರ ಮನೆಗೆ 10ಸಾವಿರ, ನೂರಾಲ್‌ಬೆಟ್ಟು ವಿಶ್ವನಾಥರ ಮನೆಯ ಅಡಿಕೆ ಹಾಗೂ ತೆಂಗಿನ ಮರಗಳು ಹಾನಿಗೊಂಡು 20ಸಾವಿರ, ಬೋಳದ ರತ್ನಾವತಿ ಅವರ ಕೊಟ್ಟಿಗೆಗೆ 6ಸಾವಿರ, ಮರ್ಣೆಯ ಕೃಷ್ಣ ಅವರ ಮನೆಗೆ 15ಸಾವಿರ ನಷ್ಟವಾದ ಅದೇ ಗ್ರಾಮದ ಚಂದ್ರಯ್ಯ ಆಚಾರಿ ಅವರ 1.68 ಎಕರೆ ಭತ್ತದ ಗದ್ದೆಯ ಬೆಳೆ ನಾಶವಾಗಿ 30 ಸಾವಿರ ರೂ. ನಷ್ಟವಾಗಿದೆ.

ಕುಂದಾಪುರ ತಾಲೂಕಿನ ಕಮಲಶಿಲೆ ಗ್ರಾಮದ ಸುಮಿತ್ರಾರ ಪಕ್ಕಾ ಮನೆಗೆ 15 ಸಾವಿರ, ಸೇನಾಪುರ ಗ್ರಾಮದ ರಾಧಾರ ಮನೆಗೆ 14ಸಾವಿರ, ಕೆರಾಡಿ ಗ್ರಾಮದ ಹರ್ಷೇಂದ್ರ ನಾಯ್ಕರ ಮನೆಗೆ 50 ಸಾವಿರ, ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಕಾವೇರಿ ಮೊಗೇರ್ತಿ ಅವರ ಮನೆಗೆ 40 ಸಾವಿರ, ಗುಜ್ಜಾಡಿ ಗ್ರಾಮದ ಅಕ್ಕಮ್ಮರ ಮನೆಗೆ 50ಸಾವಿರ, ಬೆಳ್ಳಾಲ ಗ್ರಾಮದ ಗುಲಾಬಿ ಶೆಡ್ತಿ ಮನೆಯ ಕೊಟ್ಟಿಗೆಗೆ 20 ಸಾವಿರ, ಅದೇ ಗ್ರಾಮದ ಸರೋಜರ ಮನೆಗೆ 15 ಸಾವಿರ ರೂ. ಹಾಗೂ ವಜೇರ ಹೋಬಳಿ ಗ್ರಾಮದ ರಮೇಶ್ ಪೂಜಾರಿ ಮನೆಗೆ 28 ಸಾವಿರ ರೂ.ನಷ್ಟ ಸಂಭವಿಸಿದೆ.
ಅಲ್ಲದೇ ಬೈಂದೂರು ತಾಲೂಕಿನಿಂದ ಆರು ತೋಟಗಾರಿಕಾ ಬೆಳೆ ಹಾಗೂ ಭತ್ತದ ಕೃಷಿ ಬೆಳೆಗೆ ಹಾನಿಯಾದ ಪ್ರಕರಣಗಳು ವರದಿಯಾಗಿದ್ದು, 1.25 ಲಕ್ಷ ರೂ.ಮೊತ್ತದ ಕೃಷಿ ಬೆಳೆ ಹಾನಿಯಾದ ಬಗ್ಗೆಯೂ ವರದಿಗಳು ಬಂದಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X