ಕೊಣಾಜೆ: ಮಂಗಳ ಗ್ರಾಮೀಣ ಯುವಕ ಸಂಘ ವತಿಯಿಂದ ಸ್ವಾತಂತ್ರ್ಯದಿನಾಚರಣೆ
ಕೊಣಾಜೆ: ಮಂಗಳ ಗ್ರಾಮೀಣ ಯುವಕ ಸಂಘ ವತಿಯಿಂದ ಸ್ವಾತಂತ್ರ್ಯದಿನಾಚರಣೆ ಆಚರಿಸಲಾಯಿತು.
ಶ್ರೀ ರವೀಂದ್ರ ರೈ ಹರೇಕಳ ಧ್ವಜಾರೋಹಣಗೈದರು. ಮುಖ್ಯ ಅತಿಥಿಗಳಾಗಿ ಹಾಜಿ ಇಬ್ರಾಹಿಂ ಕೋಡಿಜಾಲ್ ಶುಭ ಕೋರಿದರು.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷ ನಝರ್ ಷಾ ಪಟ್ಟೋರಿ, ಪಂಚಾಯತ್ ಸದಸ್ಯರಾದ ಮುತ್ತು ಶೆಟ್ಟಿ, ವೇದಾವತಿ ಗಟ್ಟಿ, ಯುವಕ ಸಂಘದ ಮಾಜಿ ಅಧ್ಯಕ್ಷರುಗಳಾದ ಅಬ್ದುಲ್ ರಹ್ಮಾನ್ ಕೋಡಿಜಾಲ್, ಅಬ್ದುಲ್ ನಾಸಿರ್ ಕೆಕೆ, ಅಚ್ಚುತಾ ಗಟ್ಟಿ, ದಯಾನಂದ ಗಟ್ಟಿ, ಹಬೀಬ್, ಅಶ್ರಫ್, ಹಸನ್ ಕುಂಞಿ ಹಾಜಿ, ಹಮೀದ್ ಕಂಗು, ಹಿತಿಲು ಮಹಮ್ಮದ್ ಹಾಜಿ, ಕೆ ಐ ಅಮೀರ್, ಲತೀಫ್, ಇಬ್ರಾಹಿಂ ಕೆಎಂ, ಜಿಪಿ ಖಾದರ್, ಅಮೀರ್, ಶರೀಫ್, ಅಬ್ದುಲ್ ಖಾದರ್, ಅಂದು, ಜೆಪಿ ಇಬ್ರಾಹಿಂ, ಪ್ರಾಥಮಿಕ ಶಾಲೆಯ ಅಧ್ಯಾಪಕ ವೃಂದದವರು, ವಿದ್ಯಾರ್ಥಿಗಳು, ಅಂಗನವಾಡಿ ಶಿಕ್ಷಕಿ, ಪುಟಾಣಿ ಮಕ್ಕಳು, ಊರಿನ ಅನೇಕ ಗಣ್ಯರು ಈ ಸಂದರ್ಭ ಉಪಸ್ಥಿತರಿದ್ದರು.
ಕೆಎಂ ಅಬ್ದುಲ್ ರಹಿಮಾನ್ ಸ್ವಾಗತಿಸಿದರು, ನಾಸಿರ್ ಕೆಕೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Next Story