ಮುಖ್ಯಮಂತ್ರಿಗಳ ಸ್ವಾತಂತ್ರ್ಯ ಭಾಷಣ: ವಿಶೇಷ ಸ್ಥಾನಮಾನ ರದ್ದತಿಯೇ ಪ್ರಮುಖ ವಿಷಯ

ಹೊಸದಿಲ್ಲಿ, ಆ.15: ದೇಶಾದ್ಯಂತ ರಾಜ್ಯಗಳ ಮುಖ್ಯಮಂತ್ರಿಗಳು ಆಯಾ ರಾಜ್ಯಗಳಲ್ಲಿ ನಡೆದ ಸ್ವಾತಂತ್ರೋತ್ಸವದಲ್ಲಿ ಭಾಗವಹಿಸಿ ಜನರನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳ ಭಾಷಣದಲ್ಲಿ ತಮ್ಮ ರಾಜ್ಯಕ್ಕೆ ನೀಡಲಾದ ವಿಶೇಷ ಸ್ಥಾನಮಾನದ ರಕ್ಷಣೆಯೇ ಪ್ರಮುಖ ವಿಷಯವಾಗಿತ್ತು. 73ನೇ ಸ್ವಾತಂತ್ರ ಸಂಭ್ರಮಾಚರಣೆಯಲ್ಲಿ ಧ್ವಜಾರೋಹಣಗೈದ ನಂತರ ಅರೆಸೈನಿಕಪಡೆ ಮತ್ತು ಪೊಲೀಸರ ಪಥಸಂಚಲವನ್ನು ವೀಕ್ಷಿಸಿದ ಮುಖ್ಯಮಂತ್ರಿಗಳು ನಂತರ ತಮ್ಮ ಭಾಷಣದಲ್ಲಿ ತಮ್ಮ ಸರಕಾರದ ಸಾಧನೆಗಳ ಬಗ್ಗೆ ಜನರಿಗೆ ತಿಳಿಸಿದರು. ವಿಶೇಷ ಸ್ಥಾನಮಾನ ರದ್ದತಿಯ ಬಳಿಕ ಇದೇ ಮೊದಲ ಬಾರಿ ಸ್ವಾತಂತ್ರೋತ್ಸವ ಆಚರಿಸುತ್ತಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯಪಾಲ ಸತ್ಯಪಾಲ ಸಿಂಗ್ ಧ್ಜಜಾರೋಹಣ ನಡೆಸಿ ಮಾತನಾಡಿದರು. 370ನೇ ವಿಧಿ ರದ್ಧತಿಯಿಂದ ಕೇಂದ್ರ ಸರಕಾರ ರಾಜ್ಯದ ಜನರ ಗುರುತನ್ನು ತಿರುಚಿಯೂ ಇಲ್ಲ ಅಥವಾ ಪಣಕ್ಕೂ ಇಟ್ಟಿಲ್ಲ ಎಂದು ಅವರು ಇದೇ ವೇಳೆ ಅಭಿಪ್ರಾಯಿಸಿದರು. ಮತ್ತೊಂದಡೆ ಈಶಾನ್ಯ ರಾಜ್ಯಗಳಲ್ಲೀ 370ನೇ ವಿಧಿ ರದ್ಧತಿಯ ಬಗ್ಗೆ ಜನರಲ್ಲಿ ಉಂಟಾಗಿರುವ ಆತಂಕವನ್ನು ಆ ರಾಜ್ಯಗಳ ಮುಖ್ಯಮಂತ್ರಿಗಳು ಶಮನಗೊಳಿಸಲು ಯತ್ನಿಸಿದರು.
ಈ ಕುರಿತು ತಮ್ಮ ಸ್ವಾತಂತ್ರ ಭಾಷಣದಲ್ಲಿ ಮಾತನಾಡಿದ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮ ಖಂಡು, ಸಂವಿಧಾನದಲ್ಲಿ ರಾಜ್ಯಕ್ಕೆ ನೀಡಲಾಗಿರುವ 371-ಎಚ್ ವಿಧಿಯ ನಿಬಂಧನೆಗಳು ಯಥಾವತ್ ಮುಂದುವರಿಯಲಿದೆ ಎಂದು ಜನರಿಗೆ ಭರವಸೆ ನೀಡುವುದಾಗಿ ತಿಳಿಸಿದರು. ಇಟನಗರದ ಇಂದಿರಾಗಾಂಧಿ ಪಾರ್ಕ್ನಲ್ಲಿ ತ್ರಿವರ್ಣ ಧ್ವಜ ಹಾರಿಸಿದ ನಂತರ ಮಾತನಾಡಿದ ಅವರು, ಸಂವಿಧಾನದ 371ನೇ ವಿಧಿಯು ಅರುಣಾಚಲ ಪ್ರದೇಶ ಸೇರಿದಂತೆ ಕೆಲವು ರಾಜ್ಯಗಳ ಆರ್ಥಿಕ ಮತ್ತು ಸಾಂಸ್ಕೃತಿಕ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಿದರು. ನಮ್ಮ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 371(ಎಫ್) ವಿಧಿಯನ್ನು ಸಂರಕ್ಷಿಸುವ ಪ್ರತಿಜ್ಞೆಯನ್ನು ನಾನು 73ನೇ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಮಾಡುತ್ತಿದ್ದೇನೆ ಎಂದು ಸಿಕ್ಕಿ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಂಗ್ ತಿಳಿಸಿದ್ದಾರೆ. ಮಿಝಾರಾಂ ಮತ್ತು ಮೇಘಾಲಯದ ಮುಖ್ಯಮಂತ್ರಿಗಳು ತಮ್ಮ ಸ್ವಾತಂತ್ರ ಭಾಷಣದಲ್ಲಿ ಪ್ರಗತಿ ಮತ್ತು ಸುಧಾರಣೆಗೆ ಒತ್ತು ನೀಡಿದರೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಕ್ಟೋಬರ್ 29ರಿಂದ ಡಿಟಿಸಿ ಮತ್ತು ಕ್ಲಸ್ಟರ್ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಿಸಿದ್ದಾರೆ. ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಬೆಂಬಲಿಸಿದ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್, ಜಮೀನುರಹಿತ ಕುಟುಂಬಗಳಿಗೆ ಜಮೀನಿನ ಹಕ್ಕುಗಳನ್ನು ನೀಡಲು ನೂತನ ನೀತಿಯನ್ನು ಪರಿಚಯಿಸಲಾಗುವುದು ಎಂದು ತಿಳಿಸಿದ್ದಾರೆ. ನಾಲ್ಕು ಗಂಟೆಗಳ ಸ್ವಾತಂತ್ರೋತ್ಸವ ಭಾಷಣದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಅಪರಾಧ, ಭ್ರಷ್ಟಾಚಾರ ಮತ್ತು ಕೋಮುವಾದದ ಜೊತೆ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ ಮತ್ತು ನಮ್ಮ ಸರಕಾರ.