Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಮಾನವ ಘನತೆಯ ಚಳವಳಿ

ಮಾನವ ಘನತೆಯ ಚಳವಳಿ

ವಾರ್ತಾಭಾರತಿವಾರ್ತಾಭಾರತಿ16 Aug 2019 12:01 AM IST
share
ಮಾನವ ಘನತೆಯ ಚಳವಳಿ

ಗುರುವಿಂದಾಯಿತ್ತೆಂಬೆನೆ?
ಗುರುವಿಂದಾಗದು.
ಲಿಂಗದಿಂದಾಯಿತ್ತೆಂಬೆನೆ?
ಲಿಂಗದಿಂದಾಗದು.
ಜಂಗಮದಿಂದಾಯಿತ್ತೆಂಬೆನೆ?
ಜಂಗಮದಿಂದಾಗದು.
ಪಾದೋದಕದಿಂದಾಯಿತ್ತೆಂಬೆನೆ?
ಪಾದೋದಕದಿಂದಾಗದು.
ಪ್ರಸಾದದಿಂದಾಯಿತ್ತೆಂಬೆನೆ?
ಪ್ರಸಾದದಿಂದಾಗದು.
ತನ್ನಿಂದ ಅಹುದು, ತನ್ನಿಂದ
ಹೋಹುದು ಕಾಣಾ
ಕೂಡಲಚೆನ್ನಸಂಗಮದೇವಾ.
                             -ಚೆನ್ನಬಸವಣ್ಣ

ವಚನ ಚಳವಳಿ ಮಾನವಘನತೆಯ ಚಳವಳಿಯಾಗಿದೆ. ಈ ಘನತೆಯ ಮೂಲ ಕಾಯಕದಲ್ಲಿದೆ ಮತ್ತು ಕಾಯಕದಿಂದ ಬಂದದ್ದನ್ನು ಮಾತ್ರ ಸ್ವೀಕರಿಸುವುದರಲ್ಲಿದೆ. ಹೀಗಾಗಿ ಶರಣರು ದೇವರಿಗೂ ಬೇಡುವವರಲ್ಲ. ಬೇಡುವುದು ಕಾಯಕಕ್ಕೆ ಮಾಡುವ ಅಪಮಾನ. ಆ ಮೂಲಕ ಮಾನವಘನತೆಯನ್ನು ಎತ್ತಿಹಿಡಿದಿದ್ದರು. ಐಹಿಕ ಬದುಕಿನ ವಿಚಾರ ಬಂದಾಗ ಶರಣರು ಎಂದೂ ದೇವರ ಮೇಲೆ ಅವಲಂಬಿತ ರಾದವರಲ್ಲ. ‘‘ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು, ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ?’’ ಎಂದು ಲದ್ದೆಯ ಸೋಮಣ್ಣ ಪ್ರಶ್ನಿಸಿದ್ದಾರೆ.
ದೈನಂದಿನ ಬದುಕಿನ ಆಗುಹೋಗುಗಳೆಲ್ಲ ಆಯಾ ವ್ಯಕ್ತಿಯಿಂದಲೇ ನೆರವೇರುವಂಥವು ಹೊರತಾಗಿ ಗುರು, ಲಿಂಗ, ಜಂಗಮ, ಪಾದೋದಕ ಮತ್ತು ಪ್ರಸಾದದಿಂದ ಆಗುವುದಿಲ್ಲ ಎಂದು ಚೆನ್ನಬಸವಣ್ಣನವರು ತಿಳಿಸಿದ್ದಾರೆ.
‘‘ಶಿವಶಕ್ತಿ ಸಂಪುಟವೆಂಬುದೆಂತು ಹೇಳಿರಣ್ಣಾ
ಶಿವನೇ ಚೈತನ್ಯಾತ್ಮಕನು. ಶಕ್ತಿಯೆ ಚಿತ್ತು.
ಇಂತು ಚೈತನ್ಯಾತ್ಮಕನೆ ಚಿತ್‌ಸ್ವರೂಪನೆಂದರಿಯಬಲ್ಲಡೆ
ಆತನೆ ಶರಣ ಗುಹೇಶ್ವರಾ.’’
ಎಂದು ಪ್ರಭುದೇವರು ತಿಳಿಸಿದ್ದಾರೆ. ಶಿವನೇ ಚೈತನ್ಯನಾದ ಕಾರಣ ಮತ್ತು ಆತನೆ ಚಿತ್‌ಸ್ವರೂಪನೆಂದು ಅರಿತಾಗ ನಾವು ಮಾಡುವ ಕಾಯಕಕ್ಕೂ ಆತನೇ ಮೂಲವಾಗಿರುವನು. ಆದ್ದರಿಂದ ಮಾನವರು ಕಾಯಕವನ್ನು ಅವಲಂಬಿಸಿದಾಗ ಭೌತಿಕ ಜಗತ್ತಿನ ಅವಶ್ಯಕತೆಗಳಿಗಾಗಿ ದೇವರಿಗಾಗಲಿ, ಇನ್ನೊಬ್ಬರಿಗಾಗಲಿ ಕೇಳುವ ಅವಶ್ಯಕತೆ ಇರುವುದಿಲ್ಲ.
‘‘ಹಸಿದಾಗ ಒಂದು ತುತ್ತು ಓಗರವನಿಕ್ಕುವೆ. ನಾ ದೇವ ಕಾಣಾ ಗುಹೇಶ್ವರಾ!’’ ಎಂದು ಪ್ರಭುದೇವರು ಇನ್ನೊಂದು ವಚನದಲ್ಲಿ ಮಾನವನ ಮಹತ್ವವನ್ನು ಸಾರಿದ್ದಾರೆ.
‘‘ತನುವ ಬೇಡಿದಡೀವೆ, ಮನವ ಬೇಡಿದಡೀವೆ, ಧನವ ಬೇಡಿದಡೀವೆ, ಬೇಡು ಬೇಡೆಲೆ ಹಂದೆ’’ ಎಂದು ಬಸವಣ್ಣನವರು ದೇವರಿಗೆ ಹೇಳಿದ್ದಾರೆ. ಹೀಗೆ ದೇವರನ್ನು ಹೇಡಿ ಎಂದು ಕರೆಯುವ ಮೂಲಕ ಮಾನವಕುಲಕ್ಕೆ ಧೈರ್ಯ ತುಂಬಿದ್ದಾರೆ. ‘‘ಮನುಷ್ಯರು ದುಡಿಯಬೇಕು ಮತ್ತು ಕೊಡಬೇಕು’’ ಎಂಬುದರ ಕಡೆಗೆ ಒತ್ತು ನೀಡಿದ್ದಾರೆ. ಹೀಗೆ ಶರಣರು ವ್ಯಷ್ಟಿ, ಸಮಷ್ಟಿ ಮತ್ತು ಇವುಗಳಿಗೆ ಕಾರಣವಾದ ಸೃಷ್ಟಿಕರ್ತನ ಮಧ್ಯೆ ಇರುವ ಸಾಮರಸ್ಯವನ್ನು ಕಾಯಕ, ದಾಸೋಹದ ಮೂಲಕ ಎತ್ತಿ ತೋರಿಸಿದ್ದಾರೆ.
‘‘ಬ್ರಹ್ಮನ ನಾವು ಬಲ್ಲೆವು, ವಿಷ್ಣುವ ನಾವು ಬಲ್ಲೆವು
ತೆತ್ತೀಸಕೋಟಿ ದೇವತೆಗಳ ನಾವು ಬಲ್ಲೆವು
ಅದೇನು ಕಾರಣವೆಂದಡೆ;
ಇವರು ಹಲವು ಕಾಲ ನಮ್ಮ ನೆರೆಮನೆುಲ್ಲಿದ್ದರಾಗಿ
ಇವರು ದೇವರೆಂಬುದ ನಾ ಬಲ್ಲೆನಾಗಿ

ಒಲ್ಲೆನೆಂದಾತನಂಬಿಗ ಚೌಡಯ್ಯ.’’ ಎಂದು ಅಂಬಿಗರ ಚೌಡಯ್ಯನವರು ಹೇಳಿದ್ದಾರೆ. 33 ಕೋಟಿ ದೇವತೆಗಳು ಮಾನವ ನಿರ್ಮಿತವಾಗಿವೆ. ಆದ್ದರಿಂದ ಇವು ಕಣ್ಣಿಗೆ ಕಾಣುತ್ತವೆ. ಜಗತ್ತನ್ನು ಸೃಷ್ಟಿಸಿದ ಸೃಷ್ಟಿಕರ್ತ ಅಗೋಚರನಾಗಿದ್ದಾನೆ. ಇದೆಲ್ಲವನ್ನು ಬಲ್ಲ ಅಂಬಿಗರ ಚೌಡಯ್ಯನವರು ಮಾನವ ನಿರ್ಮಿತ ದೇವರುಗಳನ್ನು ತಿರಸ್ಕರಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X