ಉಳ್ಳಾಲ ಸೇತುವೆಯಿಂದ ಯುವಕ ನಾಪತ್ತೆ: ಆತ್ಮಹತ್ಯೆ ಶಂಕೆ ?
ಮಂಗಳೂರು: ಸಮೀಪದ ನೇತ್ರಾವತಿ ನದಿಯ ಉಳ್ಳಾಲ ಸೇತುವೆಯಿಂದ ಶುಕ್ರವಾರ ತಡರಾತ್ರಿ ಯುವಕನೋರ್ವ ನಾಪತ್ತೆಯಾದ ಘಟನೆ ನಡೆದಿದೆ.
ಕಡಬ ಮೂಲದ ಸದಾಶಿವ (29) ನಾಪತ್ತೆಯಾದ ಯುವಕ ಎಂದು ತಿಳಿದುಬಂದಿದೆ. ಸೇತುವೆ ಬಳಿ ನಿಲ್ಲಿಸಿದ ಬೈಕ್ ನಲ್ಲಿದ್ದ ದಾಖಲೆಗಳು ಸದಾಶಿವ ಅವರದ್ದು ಎಂದು ಹೇಳಲಾಗುತ್ತಿದೆ.
ಯುವಕ ಬೈಕ್'ನ್ನು ಸೇತುವೆಯ ಮೇಲೆ ನಿಲ್ಲಿಸಿದ್ದು, ನದಿಗೆ ಹಾರಿದ್ದಾನೆಯೇ ಅಥವಾ ಅಲ್ಲಿಂದ ಬೇರೆ ಕಡೆಗೆ ತೆರಳಿದ್ದಾನೆಯೇ ಎನ್ನುವುದನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಯುವಕನ ಕುಟುಂಬಸ್ಥರನ್ನು ಪೊಲೀಸರು ಸಂಪರ್ಕಿಸಿದ್ದಾರೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story