ವಿಚಾರಣೆಗೆ ಬರುವಂತೆ 2ನೆ ಬಾರಿ ಝಾಕಿರ್ ನಾಯ್ಕ್ ಗೆ ಸಮನ್ಸ್
ಕೌಲಾಲಂಪುರ, ಆ. 19: ಹಿಂದೂಗಳು ಮತ್ತು ಚೀನಿಯರ ವಿರುದ್ಧ ಜನಾಂಗೀಯ ನಿಂದನೆಯ ಮಾತುಗಳನ್ನು ಆಡಿದ್ದಾರೆನ್ನಲಾದ ಆರೋಪಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ಮಲೇಶ್ಯದ ಅಧಿಕಾರಿಗಳು ಧಾರ್ಮಿಕ ವಿದ್ವಾಂಸ ಝಾಕಿರ್ ನಾಯ್ಕ್ ರಿಗೆ ಎರಡನೇ ಬಾರಿ ಕರೆ ಕಳುಹಿಸಿದ್ದಾರೆ.
ಇದಕ್ಕೂ ಮುನ್ನ, ದೇಶದಲ್ಲಿ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಲು ನಾಯ್ಕ್ ರಿಗೆ ಅವಕಾಶವಿಲ್ಲ ಎಂದು ಮಲೇಶ್ಯ ಪ್ರಧಾನಿ ಮಹಾತಿರ್ ಮುಹಮ್ಮದ್ ಹೇಳಿದ್ದರು.
ಇಲ್ಲಿನ ರಾಯಲ್ ಮಲೇಶ್ಯ ಪೊಲೀಸ್ ಪ್ರಧಾನ ಕಚೇರಿ ‘ಬುಕಿತ್ ಅಮಾನ್’ನಲ್ಲಿ ಹೇಳಿಕೆ ನೀಡಲು ಬರುವಂತೆ ಅಧಿಕಾರಿಗಳು ಝಾಕಿರ್ ನಾಯ್ಕ್ ರಿಗೆ ಎರಡನೇ ಬಾರಿ ಕರೆ ಕಳುಹಿಸಿದ್ದಾರೆ ಎಂದು ಅಧಿಕೃತ ಬೆರ್ನಾಮ ಸುದ್ದಿ ಸಂಸ್ಥೆ ಸೋಮವಾರ ವರದಿ ಮಾಡಿದೆ.
Next Story