Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಮನುಷ್ಯ ಸಂಬಂಧಗಳ ಸಂಘರ್ಷವನ್ನು ಹೇಳುವ...

ಮನುಷ್ಯ ಸಂಬಂಧಗಳ ಸಂಘರ್ಷವನ್ನು ಹೇಳುವ ‘ಪ್ರಾಪ್ತಿ’

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ21 Aug 2019 12:06 AM IST
share
ಮನುಷ್ಯ ಸಂಬಂಧಗಳ ಸಂಘರ್ಷವನ್ನು ಹೇಳುವ ‘ಪ್ರಾಪ್ತಿ’

‘ನನ್ನ ನೆಚ್ಚಿನ ಗುಡ್‌ವಿನ್’, ‘ಅದ್ಭುತ ಕನಸುಗಾರ ಚಾಣಕ್ಯ’ ಮತ್ತು ‘ಅಂಡಮಾನ್ ಆಳ ಅಗೆದಷ್ಟೂ ಕರಾಳ’ ಕೃತಿಗಳ ಮೂಲಕ ಗುರುತಿಸಿಕೊಂಡಿರುವ ಓ. ಆರ್. ಪ್ರಕಾಶ್ ಅವರ ಸ್ವತಂತ್ರ ಕಾದಂಬರಿ ‘ಪ್ರಾಪ್ತಿ’.

ಕೆ. ಟಿ. ಗಟ್ಟಿಯವರು ಈ ಕಾದಂಬರಿಯ ಕುರಿತಂತೆ ಬೆನ್ನುಡಿಯಲ್ಲಿ ಬರೆಯುತ್ತಾ ‘‘ಪ್ರಾಪ್ತಿಯನ್ನು ಓದಿದಾಗ, ಅವರು ಕಂಡು ಅರಸಿದ ಪಾತ್ರಗಳು ನನ್ನ ಸುತ್ತಮುತ್ತ ಓಡಾಡುತ್ತಿವೆ ಎಂದೆನಿಸಿತು. ಆ ಪಾತ್ರಗಳ ಬದುಕಿನ ಬಹಳ ಭಾಗ ನನಗೆ ಕಾಣಿಸಿತು. ಆ ಪಾತ್ರಗಳ ಜೀವಂತಿಕೆ ನನ್ನ ಮನ ಮುಟ್ಟಿತು. ಸುಂದರವಾದ ಚಿತ್ರಣ, ಅಷ್ಟೇ ಸುಂದರವಾದ ಭಾಷೆ...’’ ಎಂದು ಅಭಿಪ್ರಾಯ ಪಡುತ್ತಾರೆ. ನಾ. ಡಿಸೋಜ ಅವರು ಮುನ್ನುಡಿಯಲ್ಲಿ ‘‘ಕಾದಂಬರಿಯ ಒಂದು ವಿಶೇಷತೆ ಅಂದರೆ ಅದು ಚಕಚಕನೆ ಸಾಗುತ್ತದೆ. ಯಾವ ಯಾವ ಕಾಲಕ್ಕೆ ಏನೇನು ಸಿದ್ಧವಾಗಿರಬೇಕೋ ಅದೆಲ್ಲ ಸಿದ್ಧವಾಗಿ ಬಂದು ಕತೆ ಒಂದು ವೇಗವನ್ನು ಪಡೆದು ಮುಂದೆ ಸಾಗಿ ಮುಕ್ತಾಯವಾಗುತ್ತದೆ. ಪಾತ್ರ ಸೃಷ್ಟಿ, ಸಂಭಾಷಣೆ, ಘಟನೆಗಳು ಹೇಳಿ ಮಾಡಿಸಿದಂತೆ ಬರುತ್ತವೆ. ಉತ್ತಮ ಶೈಲಿ ಇದೆ. ಭಾಷೆ ಸರಳವಾಗಿದೆ....’’

ಕಾದಂಬರಿ ಪೂರ್ವಸಿದ್ಧವಾಗಿರುವ ಕತೆಯನ್ನು ಹೊಂದಿದೆ. ಅಂದರೆ, ಈ ದಾರಿಯಲ್ಲಿ ಹೋಗಿ ಆ ದಾರಿಯಲ್ಲಿ ಮುಗಿಯಬೇಕು ಎಂದು ನಿರ್ಧರಿಸಿದಂತೆ. ತಂದೆ-ತಾಯಿ ಮತ್ತು ಮಗು ಇವರ ಭಾವನೆಗಳನ್ನು ಕೇಂದ್ರವಾಗಿಟ್ಟು ಕಾದಂಬರಿಯನ್ನು ಹೆಣೆಯಲಾಗಿದೆ. ಮನುಷ್ಯ ಸಂಬಂಧಗಳ ಘನತೆಯನ್ನು ಕಾದಂಬರಿ ಎತ್ತಿಹಿಡಿಯುತ್ತದೆ. ರಾಮ್‌ಪ್ರಸಾದ್ ಮತ್ತು ಶುಭ ದಂಪತಿಗೆ ಮಕ್ಕಳಿರುವುದಿಲ್ಲ. ಅವರು ಮಗುವೊಂದನ್ನು ದತ್ತು ತೆಗೆದುಕೊಂಡು ಅದಕ್ಕೆ ಹರ್ಷ ಎಂದು ನಾಮಕರಣ ಮಾಡುತ್ತಾರೆ. ಈ ಹರ್ಷ ಅವರ ಬದುಕಿನಲ್ಲಿ ಕೇವಲ ಹರ್ಷವನ್ನಷ್ಟೇ ತರುವುದಿಲ್ಲ. ಒಂದು ನಿರ್ಣಾಯಕ ಘಟ್ಟದಲ್ಲಿ ದಂಪತಿ ಮತ್ತು ಮಗುವಿನ ನಡುವಿನ ಸಂಬಂಧ ನಿಕಷಕ್ಕೊಡ್ಡುತ್ತದೆ. ಮಗು ಬೆಳೆದು ವಿದ್ಯಾರ್ಥಿ ಕಾಲಘಟ್ಟದಲ್ಲಿ ತನ್ನ ಕಿಡ್ನಿಯನ್ನು ಕಳೆದುಕೊಳ್ಳುತ್ತದೆ. ಮಗುವಿಗೆ ಕೃತಕ ಕಿಡ್ನಿಯನ್ನು ಜೋಡಿಸಬೇಕು. ಈ ಸಂದರ್ಭದಲ್ಲಿ ಎದುರಾಗುವ ಸಂಘರ್ಷ, ಹರ್ಷನ ನಿಜ ತಂದೆಗಾಗಿ ಹುಡುಕಾಟ ಇವೆಲ್ಲವುಗಳ ಜೊತೆಗೆ ಕಾದಂಬರಿ ಬೆಳೆಯುತ್ತದೆ. ಮೊದಲೇ ನಿಶ್ಚಯಿಸಿದಂತೆ, ಕಾದಂಬರಿ ಸುಖಾಂತವಾಗುತ್ತದೆ. ಕಾದಂಬರಿಯ ಕಥಾವಸ್ತುವಿಗೆ ಪೂರಕವಾಗಿರುವ ಅಪಾರ ಮಾಹಿತಿಗಳನ್ನೂ ಲೇಖಕರು ಸಂಗ್ರಹಿಸಿದ್ದಾರೆ. ಕ್ರೀಡೆಯ ನಿಯಮಾವಳಿಗಳು, ಗರ್ಭಧಾರಣೆ, ದತ್ತಕ ಪ್ರಕ್ರಿಯೆ, ಜೀನ್ಸ್ ಗುಣ ಸ್ವಭಾವಗಳು ಇವುಗಳನ್ನೆಲ್ಲ ಕಲೆ ಹಾಕಿ, ಕಾದಂಬರಿಗೆ ಪೂರಕವಾಗಿಸಿದ್ದಾರೆ. ಸಾಧಾರಣವಾಗಿ ಸೃಜನಶೀಲ ಕಾದಂಬರಿಕಾರರು ಒಳ ಅನ್ವೇಷಣೆಗೆ ನೀಡುವ ಆದ್ಯತೆಯನ್ನು, ಹೊರ ಮಾಹಿತಿ ಕಲೆ ಹಾಕಲು ನೀಡುವುದಿಲ್ಲ. ಪ್ರಾಪ್ತಿ ಜನಪ್ರಿಯ ಓದುವಿಕೆಗೆ ಅತ್ಯುತ್ತಮ ಕೊಡುಗೆಯಾಗಿದೆ.

ಬೆನಕ ಬುಕ್ಸ್ ಬ್ಯಾಂಕ್, ಶಿವಮೊಗ್ಗ ಇವರು ಹೊರತಂದಿರುವ ಕೃತಿಯ ಪುಟಗಳು 190. ಮುಖಬೆಲೆ 120 ರೂಪಾಯಿ. ಆಸಕ್ತರು 73384 37666 ದೂರವಾಣಿಯನ್ನು ಸಂಪರ್ಕಿಸಬಹುದು.

share
-ಕಾರುಣ್ಯಾ
-ಕಾರುಣ್ಯಾ
Next Story
X