Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ನಿಮ್ಮ ಪಾದಗಳು ವಾಸನೆ ಬೀರುತ್ತಿವೆಯೇ ?...

ನಿಮ್ಮ ಪಾದಗಳು ವಾಸನೆ ಬೀರುತ್ತಿವೆಯೇ ? ಇಲ್ಲಿವೆ ಅದರ ಕಾರಣಗಳು

ವಾರ್ತಾಭಾರತಿವಾರ್ತಾಭಾರತಿ24 Aug 2019 12:22 AM IST
share
ನಿಮ್ಮ ಪಾದಗಳು ವಾಸನೆ ಬೀರುತ್ತಿವೆಯೇ ? ಇಲ್ಲಿವೆ ಅದರ ಕಾರಣಗಳು

ನೀವು ನಿಮ್ಮ ಶೂಗಳನ್ನು ಕಳಚಿದಾಕ್ಷಣ ಇಡೀ ಕೋಣೆಯಲ್ಲಿ ದುರ್ಗಂಧವುಂಟಾಗುತ್ತದೆಯೇ? ನೀವು ಕಾಲುಗಳನ್ನು ನಿಯಮಿತವಾಗಿ ತೊಳೆದುಕೊಳ್ಳುತ್ತೀರಿ ಮತ್ತು ಅವುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುತ್ತೀರಿ,ಆದರೂ ಅವು ಕೆಟ್ಟ ವಾಸನೆಯನ್ನು ಸೂಸುತ್ತಿವೆಯೇ? ನಿಮ್ಮ ಪಾದಗಳ ವಾಸನೆಯಿಂದಾಗಿ ನಿಮ್ಮ ಸಹೋದ್ಯೋಗಿಗಳ ಎದುರು ಶೂಗಳನ್ನು ಕಳಚಲು ಮುಜುಗರ ಉಂಟಾಗುತ್ತದೆಯೇ? ಇದಕ್ಕೆಲ್ಲ ನಿಮ್ಮ ಉತ್ತರ ಹೌದು ಎಂದಾದರೆ ನೀವು ದುರ್ಗಂಧದ ಪಾದಗಳ ಸಮಸ್ಯೆಯ ಬಲಿಪಶುವಾಗಿದ್ದೀರಿ.

 ವೈದ್ಯಕೀಯವಾಗಿ ಬ್ರೊಮೊಡೊಸಿಸ್ ಎಂದು ಕರೆಯಲಾಗುವ ಈ ಸಮಸ್ಯೆಗೆ ಬ್ಯಾಕ್ಟೀರಿಯಾ ಸೋಂಕಿನಿಂದ ಹಿಡಿದು ಶಿಲೀಂಧ್ರ ಸೋಂಕಿನವರೆಗೆ ಹಲವಾರು ಕಾರಣಗಳಿವೆ. ಕಾಲುಗಳನ್ನು ಸ್ವಚ್ಛವಾಗಿಟ್ಟುಕೊಳ್ಳದಿರುವುದು ಅಥವಾ ಸೂಕ್ತವಲ್ಲದ ಪಾದರಕ್ಷೆಗಳನ್ನು ಧರಿಸುವುದು ಕೂಡ ಪಾದಗಳು ದುರ್ವಾಸನೆಯನ್ನು ಬೀರಲು ಕಾರಣವಾಗುತ್ತವೆ. ಇಂತಹ ಕೆಲವು ಸಾಮಾನ್ಯ ಕಾರಣಗಳು ಕುರಿತು ಮಾಹಿತಿ ಇಲ್ಲಿದೆ...

ಶರೀರದ ಯಾವುದೇ ಭಾಗಕ್ಕಿಂತ ಹೆಚ್ಚಿನ ಬೆವರು ಗ್ರಂಥಿಗಳು ಪಾದಗಳಲ್ಲಿವೆ. ಶೂಗಳು ಮತ್ತು ಸಾಕ್ಸ್‌ಗಳು ಬೆವರು ಆವಿಯಾಗುವುದನ್ನು ತಡೆಯುತ್ತವೆ ಮತ್ತು ಇದು ಬ್ಯಾಕ್ಟೀರಿಯಾಗಳನ್ನು ಆಕರ್ಷಿಸುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ಈ ಬ್ಯಾಕ್ಟೀರಿಯಾಗಳು ಅಭಿವೃದ್ಧಿಗೊಂಡು ಪಾದಗಳಲ್ಲಿ ಕೆಟ್ಟ ವಾಸನೆಗೆ ಕಾರಣವಾಗುತ್ತವೆ.

ಅತಿಯಾಗಿ ಬೆವರುವಿಕೆಯನ್ನುಂಟು ಮಾಡುವ ಜನ್ಮದತ್ತ ಸ್ಥಿತಿ ಹೈಪರ್‌ಹೈಡ್ರಾಸಿಸ್ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಕಾರಣವಾಗುತ್ತದೆ ಮತ್ತು ತನ್ಮೂಲಕ ಪಾದಗಳು ವಾಸನೆ ಬೀರುವಂತೆ ಮಾಡುತ್ತದೆ.

ಪ್ರತಿ ದಿನ ಒಂದೇ ಜೊತೆ ಶೂಗಳನ್ನು ಧರಿಸುವುದು ಆರ್ದ್ರ ಸ್ಥಿತಿಯಿಂದಾಗಿ ಬ್ಯಾಕ್ಟೀರಿಯಾಗಳ ಸಂತತಿ ವೃದ್ಧಿಗೊಳ್ಳಲು ಉತ್ತಮ ನೆಲೆಯನ್ನು ಕಲ್ಪಿಸುತ್ತದೆ. ಪ್ರತಿದಿನ ಕಾಲುಚೀಲಗಳನ್ನು ಬದಲಿಸದಿದ್ದರೆ ಅವು ಬೆವರಿನಲ್ಲಿ ನೆನೆದು ತೊಪ್ಪೆಯಾಗಿ ರುತ್ತವೆ ಮತ್ತು ಸ್ವಯಂ ದುರ್ಗಂಧ ಬೀರುವ ಜೊತೆಗೆ ಪಾದಗಳೂ ಕೆಟ್ಟ ವಾಸನೆ ಹೊಂದಿರುವಂತೆ ಮಾಡುತ್ತವೆ.

ಮುಚ್ಚಿದ ಅಥವಾ ಬಿಗಿಯಾದ ಶೂಗಳನ್ನು ಧರಿಸುವುದು ಪಾದಗಳ ಮೇಲೆ ಒತ್ತಡವನ್ನು ಹೇರುವ ಜೊತೆಗೆ ಅವುಗಳನ್ನು ಗಾಯಗಳಿಗೆ ಸುಲಭಭೇದ್ಯವನ್ನಾಗಿಸುತ್ತದೆ,ಜೊತೆಗೆ ಅತಿಯಾದ ಬೆವರುವಿಕೆಯಿಂದ ಪಾದಗಳು ದುರ್ವಾಸನೆ ಬೀರುವಂತೆ ಮಾಡುತ್ತವೆ.

ಪ್ರತಿ ದಿನ ಮನೆಗೆ ಮರಳಿದ ಬಳಿಕ ಪಾದಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳದಿದ್ದರೆ ಅದೂ ಈ ಸಮಸ್ಯೆಗೆ ಕಾರಣವಾಗುತ್ತದೆ.

  ಕಾಲುಗಳು ವಾಸನೆ ಬೀರಲು ಕಾರಣಗಳು ಏನೇ ಇರಲಿ,ಅದು ವ್ಯಕ್ತಿಗೆ ತೀರ ಮುಜುಗರವನ್ನುಂಟು ಮಾಡುತ್ತದೆ ಎನ್ನ್ನುವುದು ಸುಳ್ಳಲ್ಲ. ಆದರೆ ಇದನ್ನು ಕಡೆಗಣಿಸುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ ಮತ್ತು ಚರ್ಮದ ಸೋಂಕುಗಳೂ ಉಂಟಾಗಬಹುದು. ಮಧುಮೇಹ ರೋಗಿಗಳು ಈ ಸಮಸ್ಯೆಯನ್ನೆದುರಿಸುತ್ತಿದ್ದರೆ ಅದರಿಂದ ಪಾರಾಗಲು ಮೊದಲು ಡರ್ಮಟಾಲಜಿಸ್ಟ್‌ರನ್ನು ಭೇಟಿಯಾಗಬೇಕು. ಮಧುಮೇಹ ನಿಯಂತ್ರಣದಲ್ಲಿಲ್ಲದಿದ್ದರೆ ಅದು ನರಗಳ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ ಮತ್ತು ಡಯಾಬಿಟಿಕ್ ಫೂಟ್‌ನ ಅಪಾಯವನ್ನು ಹೆಚ್ಚಿಸುವ ಜೊತೆಗೆ ಗ್ಯಾಂಗ್ರಿನ್‌ಗೂ ಕಾರಣವಾಗುತ್ತದೆ. ಅಲ್ಲದೆ ಮಧುಮೇಹಿಗಳು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ಸೋಂಕುಗಳಿಗೆ ಗುರಿಯಾಗುವ ಹೆಚ್ಚಿನ ಅಪಾಯವನ್ನೂ ಎದುರಿಸುತ್ತಿರುತ್ತಾರೆ. ಹೀಗಾಗಿ ಇದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವುದು ಅವರಿಗೆ ಮುಖ್ಯವಾಗುತ್ತದೆ.

ಪಾದಗಳನ್ನು ಬ್ಯಾಕ್ಟೀರಿಯಾ ಪ್ರತಿರೋಧಕ ಸಾಬೂನುಗಳಿಂದ ತೊಳೆದುಕೊಳ್ಳುವುದು,ಬೆರಳುಗಳ ನಡುವಿನ ಸಂದುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು,ಪಾದಗಳನ್ನು ತೊಳೆದುಕೊಂಡ ಬಳಿಕ ಅವುಗಳನ್ನು ಒಣಬಟ್ಟೆಯಿಂದ ಚೆನ್ನಾಗಿ ಒರೆಸುವುದು,ಪ್ರತಿ ದಿನ ಒಂದೇ ಜೊತೆ ಶೂಗಳನ್ನು ಧರಿಸಿಕೊಳ್ಳುವ ಪದ್ಧತಿಯನ್ನು ಕೈಬಿಡುವುದು ಇತ್ಯಾದಿ ಸರಳ ಉಪಾಯಗಳ ಮೂಲಕ ಪಾದಗಳು ದುರ್ವಾಸನೆಯನ್ನು ಬೀರುವುದನ್ನು ತಡೆಯಬಹುದಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X