Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಜೇಟ್ಲಿ ನಿವಾಸದ ಟೇಬಲ್ ಮೇಲಿದ್ದದ್ದು ಈ...

ಜೇಟ್ಲಿ ನಿವಾಸದ ಟೇಬಲ್ ಮೇಲಿದ್ದದ್ದು ಈ ಇಬ್ಬರ ಫೋಟೋ !

ನೀವು ಊಹಿಸಲು ಸಾಧ್ಯವೇ ಇಲ್ಲದ ಇಬ್ಬರು ರಾಜಕಾರಣಿಗಳು

ವಾರ್ತಾಭಾರತಿವಾರ್ತಾಭಾರತಿ24 Aug 2019 7:03 PM IST
share
ಜೇಟ್ಲಿ ನಿವಾಸದ ಟೇಬಲ್ ಮೇಲಿದ್ದದ್ದು ಈ ಇಬ್ಬರ ಫೋಟೋ !

ಹೊಸದಿಲ್ಲಿ, ಆ.24: ಶನಿವಾರ ನಿಧನರಾದ ಬಿಜೆಪಿ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರ ಮೊನಚು ಹಾಗು ಅಷ್ಟೇ ಸಭ್ಯ ಮಾತುಗಾರಿಕೆಗೆ ಸುಪ್ರಸಿದ್ಧರು. ಬಿಜೆಪಿ ವಿರೋಧಿಗಳೂ ಅವರ ಸಮರ್ಥ ವಾದ ಮಂಡನೆಗಾಗಿಯೇ ಅವರ ಟಿವಿ ಚರ್ಚೆಗಳನ್ನು ಬಿಡದೆ ನೋಡುತ್ತಿದ್ದರು. 

ಬಿಜೆಪಿಯ ಈಗಿನ ಸಂಬಿತ್ ಪಾತ್ರ ಶೈಲಿಯ ವಕ್ತಾರರಿಗಿಂತ ಅವರ ಮಾತಿನ ಶೈಲಿ ಮತ್ತು ಗಾಂಭೀರ್ಯ ಸಂಪೂರ್ಣ ಭಿನ್ನವಾಗಿತ್ತು. ಅದು ಎಂದೂ ಘನತೆಯ ಮೇರೆ ಮೀರುತ್ತಿರಲಿಲ್ಲ. ಅಂತಹ ಜೇಟ್ಲಿ ಅವರ ವಿಶಾಲ ಸ್ನೇಹಿತರ ಬಳಗದ ಕುರಿತು ರಾಜಕೀಯ ನಾಯಕರು, ಪತ್ರಕರ್ತರು ನೆನಪಿಸಿಕೊಂಡಿದ್ದಾರೆ. 

ಬಿಜೆಪಿಯ ಅತ್ಯಂತ ಹಿರಿಯ ನಾಯಕರಾಗಿದ್ದು, ಆ ಪಕ್ಷದ ನೀತಿನಿಯಮಗಳನ್ನು ಮುಲಾಜಿಲ್ಲದೆ ಸಮರ್ಥಿಸಿಕೊಳ್ಳುವಲ್ಲಿ ಸದಾ ಮುಂಚೂಣಿಯಲ್ಲಿದ್ದ ಜೇಟ್ಲಿ ಪಕ್ಷದ ಗಡಿಯನ್ನು ಮೀರಿ ಎಲ್ಲ ಪಕ್ಷ ಹಾಗು ಕ್ಷೇತ್ರಗಳಿಂದ ಸ್ನೇಹಿತರನ್ನು ಸಂಪಾದಿಸುವುದರಲ್ಲಿ ಅಷ್ಟೇ ಮುಂದಿದ್ದರು ಎಂಬುದು ಎಲ್ಲರ ಅಭಿಪ್ರಾಯ. ಅವರಿಗೆ ಎಲ್ಲ ಪಕ್ಷಗಳಲ್ಲೂ ಮಿತ್ರರಿದ್ದರು. ಅವರ ಕೆಲವು ಅತ್ಯಾಪ್ತ ಮಿತ್ರರು ಬೇರೆ ಪಕ್ಷಗಳಲ್ಲಿದ್ದವರು ಎಂಬುದು ಗಮನಾರ್ಹ. 

ಹಿರಿಯ ಪತ್ರಕರ್ತ ಶೇಖರ್ ಗುಪ್ತ ಈ ಬಗ್ಗೆ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಅರುಣ್ ಜೇಟ್ಲಿ ಅವರ ಖಾಸಗಿ ನಿವಾಸದಲ್ಲಿ ಅವರು ಓದಲು, ಬರೆಯಲು ಕುಳಿತುಕೊಳ್ಳುವ ಡೆಸ್ಕ್ ಮೇಲೆ ಇಟ್ಟುಕೊಂಡಿರುವ ಎರಡು ಫೋಟೋಗಳೂ ಬಿಜೆಪಿ ಅಥವಾ ಸಂಘ ಪರಿವಾರದ ನಾಯಕರದ್ದಲ್ಲ. ಬದಲಾಗಿ ಹಿರಿಯ ಕಾಂಗ್ರೆಸ್ ನಾಯಕ ದಿವಂಗತ ಮಾಧವ ರಾವ್ ಸಿಂಧಿಯಾ (ಇವರು ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರ ತಂದೆ) ಹಾಗು ಖ್ಯಾತ ಹೊಟೇಲಿಗ ಹಾಗು ರಾಜ್ಯಸಭಾ ಸದಸ್ಯರಾಗಿದ್ದ ದಿವಂಗತ ಲಲಿತ್ ಸೂರಿ ಅವರದ್ದು. ಸಿಂಧಿಯಾ ಹಾಗು ಸೂರಿ ಅವರು ಜೇಟ್ಲಿ ಅವರ ಆಪ್ತ ಮಿತ್ರರಾಗಿದ್ದವರು. ಈ ಗುಂಪಿನಲ್ಲಿದ್ದ ಇನ್ನೊಬ್ಬರು ‘ಹಿಂದೂಸ್ತಾನ್ ಟೈಮ್ಸ್’ ಸಮೂಹದ ಮುಖ್ಯಸ್ಥೆ ಶೋಭನಾ ಭಾರತಿ. 

ಮಾಧವ ರಾವ್ ಸಿಂಧಿಯಾ 

ಲಲಿತ್ ಸೂರಿ

ಶೋಭನಾ ಭಾರತಿ

ಜೇಟ್ಲಿ ದಿಲ್ಲಿ ಪತ್ರಕರ್ತರ ನಡುವೆ ಕೂಡ ಬಹಳ ಸಲಿಗೆ ಇಟ್ಟುಕೊಂಡಿದ್ದವರು. ಬಹುತೇಕ ಎಲ್ಲ ಪ್ರಮುಖ ದಿನಪತ್ರಿಕೆಗಳು, ನಿಯತಕಾಲಿಕಗಳು, ಟಿವಿ ಚಾನಲ್ ಗಳ ಸಂಪಾದಕರು, ಬ್ಯುರೋ ಮುಖ್ಯಸ್ಥರು, ಹಿರಿಯ ವರದಿಗಾರರು ಜೇಟ್ಲಿ ಅವರಿಗೆ ಆಪ್ತರಾಗಿದ್ದರು. ಪತ್ರಕರ್ತರನ್ನು ಊಟ ತಿಂಡಿಗೆ ಆಹ್ವಾನಿಸುವುದು, ಅವರೊಂದಿಗೆ ಚರ್ಚಿಸುವುದು, ಅವರಿಗೆ ದಿಲ್ಲಿ ರಾಜಕೀಯ ಬೆಳವಣಿಗೆಗಳ ಕುರಿತ ಒಳನೋಟ ನೀಡುವುದು ಇತ್ಯಾದಿ ನಡೆಯುತ್ತಿತ್ತು. ಈ ಆತ್ಮೀಯತೆಯಿಂದಾಗಿ ಜೇಟ್ಲಿ ದಿಲ್ಲಿಯ ಮಾಧ್ಯಮಗಳನ್ನು ಪರೋಕ್ಷವಾಗಿ ನಿಯಂತ್ರಿಸುತ್ತಿದ್ದಾರೆ, ಅವರಿಗೆ ಬೇಕಾದ ಸುದ್ದಿಗಳು ಮಾತ್ರ ಬರುತ್ತವೆ, ಬೇಡದ ಸುದ್ದಿಗಳು ಮೂಲೆ ಸೇರುತ್ತವೆ ಎಂಬ ಆರೋಪಗಳನ್ನೂ ಎದುರಿಸಿದ್ದರು. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X