ಬೆದರಿಕೆ ಪ್ರಕರಣ: ಸ್ವರೂಪ್ ಶೆಟ್ಟಿ ವಿರುದ್ಧ ಮತ್ತೊಂದು ಪ್ರಕರಣ ದಾಖಲು
ಮಣಿಪಾಲ, ಆ.24: ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆದರಿಕೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಮಣಿಪಾಲ ಹುಡ್ಕೋ ಕಾಲನಿಯ ಸ್ವರೂಪ್ ಶೆಟ್ಟಿ ವಿರುದ್ಧ ಮತ್ತೊಂದು ಪ್ರಕರಣ ಮಣಿಪಾಲ ಠಾಣೆಯಲ್ಲಿ ದಾಖಲಾಗಿದೆ.
ಉಡುಪಿ ಕಾಡಬೆಟ್ಟು ನಿವಾಸಿ ಆದಿತ್ಯ ಕೆ.ಶೆಟ್ಟಿ(23) ಎಂಬವರ ಸಹಪಾಠಿ ಯಾಗಿದ್ದ ಸ್ವರೂಪ್ ಶೆಟ್ಟಿ, ಆದಿತ್ಯ ಶೆಟ್ಟಿಗೆ ಕರೆ ಮಾಡಿ ಹಣ ನೀಡುವಂತೆ ಬೆದರಿಕೆ ಹಾಕಿದ್ದು, ಹಣವನ್ನು ನೀಡದಿದ್ದರೆ ಮಾನಹಾನಿ ಕೇಸು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದನು. ಅದರಂತೆ ಆದಿತ್ಯ ಶೆಟ್ಟಿ ಎಪ್ರಿಲ್ ತಿಂಗಳಲ್ಲಿ ಎರಡು ಲಕ್ಷ ರೂ.ವನ್ನು ಸ್ವರೂಪ್ಗೆ ನೀಡಿದ್ದ ಎನ್ನಲಾಗಿದೆ.
ನಂತರ ಆತನ ಅಕ್ಕನ ಅಪಹರಣವಾಗಿದೆ ಎಂದು ನಂಬಿಸಿ 30,000 ರೂ. ಮತ್ತು ಜೂ.3ರಂದು ಆದಿತ್ಯ ಶೆಟ್ಟಿ ವಿರುದ್ಧ ದೂರು ದಾಖಲಿಸು ವುದಾಗಿ ಬೆದರಿಸಿ ಚೆಕ್ ಮೂಲಕ 11 ಲಕ್ಷ ರೂ. ಪಡೆದಿದ್ದನು. ಜೂ.19ರಂದು ಆದಿತ್ಯ ಮತ್ತು ಆತನ ಸ್ನೇಹಿತ ಆಕರ್ಷ್ ಎಂಬವರಿಗೆ ಬೆದರಿಸಿ 5 ಲಕ್ಷ ರೂ. ಪಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
Next Story