Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಬದುಕಿನ ಭಾಗವಾಗಿ ಕನ್ನಡ ಭಾಷೆ

ಬದುಕಿನ ಭಾಗವಾಗಿ ಕನ್ನಡ ಭಾಷೆ

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ24 Aug 2019 6:50 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಬದುಕಿನ ಭಾಗವಾಗಿ ಕನ್ನಡ ಭಾಷೆ

‘ಕನ್ನಡ’ ಭಾಷೆ ಎಂದಲ್ಲ, ದೇಶದ ಎಲ್ಲ ಪ್ರಾದೇಶಿಕ ಭಾಷೆಗಳು ಮಾಡು ಇಲ್ಲವೇ ಮಡಿ ಎನ್ನುವ ಸನ್ನಿವೇಶದಲ್ಲಿ ಸಿಲುಕಿಕೊಂಡಿದೆ. ಈ ಭಾಷೆಗಳು ಕೇವಲ ಹೊರಗಿನ ಸವಾಲನ್ನು ಮಾತ್ರವಲ್ಲ, ಒಳಗಿನ ಸವಾಲನ್ನೂ ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಒಂದೆಡೆ ಇಂಗ್ಲಿಷ್‌ನ ಸವಾಲು. ಮಗದೊಂದೆಡೆ ವಿಜ್ಞಾನ, ತಂತ್ರಜ್ಞಾನದಂತಹ ಆಧುನಿಕ ವಿಷಯಗಳನ್ನು ಈ ಭಾಷೆಗಳು ತನ್ನವಾಗಿಸಿಕೊಳ್ಳಲು ವಿಫಲವಾಗಿರುವುದು ಶಿಕ್ಷಣದಲ್ಲಿ ಪ್ರಾದೇಶಿಕ ಭಾಷೆಗಳ ವೈಫಲ್ಯಕ್ಕೆ ಇದೊಂದು ಮುಖ್ಯ ಕಾರಣ. ಇಂದು ವಿಜ್ಞಾನ, ವೈದ್ಯಕೀಯ, ತಂತ್ರಜ್ಞಾನ ಇತ್ಯಾದಿಗಳನ್ನು ಪ್ರಾದೇಶಿಕ ಭಾಷೆಗಳಿಗೆ ಅಳವಡಿಸಿಕೊಳ್ಳುವ ಸವಾಲನ್ನು ಸಮರ್ಥವಾಗಿ ಸ್ವೀಕರಿಸಲು ನಾವು ಸಂಪೂರ್ಣವಾಗಿ ವಿಫಲರಾಗಿದ್ದೇವೆ. ಜೊತೆಗೆ ಕಂಪ್ಯೂಟರ್ ಜಗತ್ತಿನ ಮುಂದೆಯೂ ಪ್ರಾದೇಶಿಕ ಭಾಷೆಗಳು ಹಿಂಜರಿಕೆಯನ್ನು ವ್ಯಕ್ತಪಡಿಸುತ್ತಿವೆ. ಇವೆಲ್ಲದರ ನಡುವೆ ನಮ್ಮದೇ ಪ್ರಭುತ್ವ ಹೇರುತ್ತಿರುವ ಹಿಂದಿ ಭಾಷೆ. ಇವುಗಳನ್ನೆಲ್ಲ ಎದುರಿಸಿ ಗೆದ್ದು ಕನ್ನಡದಂತಹ ಭಾಷೆಗಳು ಜನರ ಬದುಕಿನ ಭಾಷೆಯಾಗಿ ಎದ್ದು ನಿಲ್ಲಬಹುದೇ? ಈ ಮಹತ್ವದ ವಿಷಯವನ್ನು ಚರ್ಚಿಸುತ್ತೆ ಪ್ರೊ. ಎಸ್. ಜಿ. ಸಿದ್ದರಾಮಯ್ಯ ಅವರ ‘ಕನ್ನಡ ಭಾಷೆ-ಬದುಕು’ ಕೃತಿ. ಕನ್ನಡ ನಾಡು ನುಡಿ ಮತ್ತು ಅವುಗಳ ಅಳಿವು ಉಳಿವಿಗೆ ಸಂಬಂಧಿಸಿದ 17 ಲೇಖನಗಳು ಈ ಕೃತಿಯಲ್ಲಿವೆ. ಜೊತೆಗೆ ಕನ್ನಡ ಭಾಷೆ ಬದುಕಿಗೆ ಸಂಬಂಧಿಸಿದ 6 ಕವಿತೆಗಳೂ ಕನ್ನಡದ ಇಂದಿನ ದಯನೀಯ ಸ್ಥಿತಿಯನ್ನು ತೆರೆದಿಡುತ್ತವೆ.
  ಇಲ್ಲಿರುವ ಹೆಚ್ಚಿನ ಲೇಖನಗಳು ಸಾಂದರ್ಭಿ ಕವಾದವುಗಳು. ಸದ್ಯ ಕನ್ನಡ ಎದುರಿಸುತ್ತಿರುವ ಸಮಸ್ಯೆ ಸವಾಲುಗಳಿಗೆ ಕಾಲಕಾಲಕ್ಕೆ ಪ್ರತಿಕ್ರಿಯಿಸಿ ಬರೆದ ಲೇಖನಗಳು. ಸರಳವಾಗಿ, ನೇರವಾಗಿ ಮತ್ತು ಸ್ಪಷ್ಟವಾಗಿ ಕನ್ನಡದ ಅಭಿವೃದ್ಧಿಗೆ ಆಗಬೇಕಾದ ಕೆಲಸಗಳ ಬಗ್ಗೆ ಈ ಲೇಖನಗಳು ಮಾತನಾಡುತ್ತವೆ. ಭಾಷೆಯನ್ನೇ ಬುದ್ಧಿ ಎಂದು ಸಮೀಕರಿಸಿಕೊಂಡ ಮತಿಗೇಡಿತನ ಹೇಗೆ ಕನ್ನಡಕ್ಕೆ ಮುಳುವಾಗುತ್ತಿದೆ ಎನ್ನುವುದನ್ನು ‘ಇಚ್ಛಾಶಕ್ತಿ ಎಂಬ ಜೀವಧಾತು’ ಕೃತಿಯಲ್ಲಿ ವಿವರಿಸುತ್ತಾರೆ. ‘ಶಿಕ್ಷಣ-ಆರೋಗ್ಯಗಳನ್ನು ಪ್ರಜೆಗಳಿಗೆ ನೀಡುವುದು ಪ್ರಜಾಪ್ರಭುತ್ವದ ಮೂಲಭೂತ ಕರ್ತವ್ಯ. ಇದನ್ನು ಖಾಸಗಿಯವರಿಗೆ ವಹಿಸಿರುವುದರಿಂದ ಅವರು ಇವೆರಡನ್ನೂ ಉದ್ಯಮ ಕ್ಷೇತ್ರವಾಗಿ ಮಾಡಿಕೊಂಡು ಉಳ್ಳವರಿಗೆ ಶಿಕ್ಷಣ, ಉಳ್ಳವರಿಗೆ ಆರೋಗ್ಯ ಎನ್ನುವಂತಾಗಿದೆ. ಉಚಿತ ಶಿಕ್ಷಣ, ಕಡ್ಡಾಯ ಶಿಕ್ಷಣ ಎಂಬುದು ಕಳೆದು ಹೋಗಿದೆ. ಸಮಾಜದಲ್ಲಿ ಅಸಮಾನತೆಯ ಕಂದಕ ಅಗಾಧವಾಗಿ ಬೆಳೆಯುತ್ತಿದೆ’ ಎಂದು ಲೇಖಕರು ಆತಂಕ ಪಡುತ್ತಾರೆ. ಪ್ರಾಧಿಕಾರಕ್ಕೆ ಹಿಡಿಯುವ ‘ಕನ್ನಡ ಜಾಗೃತಿ ಪತ್ರಿಕೆ’, ದ್ರಾವಿಡ ಭಾಷಾ ಒಕ್ಕೂಟವೂ, ಭಾರತ ಒಕ್ಕೂಟವೂ, ಪ್ರಾದೇಶಿಕ ಭಾಷೆಗಳನ್ನು ಉಳಿಸುವುದರಲ್ಲಿ ರಾಜಕೀಯ ಪಕ್ಷಗಳ ಹೊಣೆಗಾರಿಕೆ, ಕಲ್ಲಕುಂಡವೆಂಬ ಇಂಗ್ಲಿಷೂ ನೆಲಮೂಲವೆಂಬ ಕನ್ನಡವೂ, ಸರಕಾರಿ ಶಾಲೆಗಳ ಸಬಲೀಕರಣದ ಸಮಿತಿ ವರದಿ, ಜಾನಪದ ಪದಕೋಶ ಅಗತ್ಯ, ವರದಿಗಳ ಅಗತ್ಯತೆ-ಅನುಷ್ಠಾನ ಹೀಗೆ ಕನ್ನಡದ ಉಳಿವಿಗೆ ಸಂಬಂಧಿಸಿದ ಹಲವು ಲೇಖನಗಳು ಈ ಕೃತಿಯಲ್ಲಿವೆ. ‘ಕನ್ನಡಂಗಳೊಳವು’ ಲೇಖನದಲ್ಲಿ ಅಭಿವೃದ್ಧಿ ಪ್ರಾಧಿಕಾರವು ಕನ್ನಡದ ಸಬಲೀಕರಣಕ್ಕೆ ನಡೆಸಿದ ಕೆಲಸದ ಸಂಕ್ಷಿಪ್ತ ವರದಿಯಿದೆ. ಕೃತಿಯ ಕೊನೆಯಲ್ಲಿ ಲೇಖನದ ಆಶಯಗಳನ್ನು ಹೇಳುವ ಇಗೋ ಕನ್ನಡ, ಕನಸು ಮಾರುವ ದಾರಿ, ತಬ್ಬಲಿರಾಜ್ಯಗಳು, ಬಸವ ಕನ್ನಡ, ಮುಚ್ಚೇವು ಕನ್ನಡದ ಶಾಲೆ, ನೆಲಭಾಷೆ ಹೀಗೆ ಆರು ಕವಿತೆಗಳಿವೆ.
ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 128. ಮುಖಬೆಲೆ 125 ರೂ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
-ಕಾರುಣ್ಯಾ
-ಕಾರುಣ್ಯಾ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X