ಎಸ್ಆರ್ಎಂ ಕುಲಪತಿಯಿಂದ ಸರಕಾರಿ ಶಾಲೆಗಳಿಗೆ 100 ಕಂಪ್ಯೂಟರ್ ಕಾಣಿಕೆ

ಚೆನ್ನೈ,ಆ.26: ಶ್ರೀ ರಾಮಚಂದ್ರ ವಿಶ್ವವಿದ್ಯಾನಿಲಯದ ಕುಲಪತಿ ಮತ್ತು ಸಂಸದ ಡಾ. ಟಿ.ಆರ್ ಪರಿವೇಂಧರ್ ಅವರು ತನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ತಮಿಳುನಾಡಿನ ಪೆರಂಬುಲರ್ ಕ್ಷೇತ್ರದಲ್ಲಿರುವ ಸರಕಾರಿ ಶಾಲೆಗಳಿಗೆ ನೂರು ಕಂಪ್ಯೂಟರ್ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪರಿಸರ ರಕ್ಷಣೆಯ ಬಗ್ಗೆ ತನ್ನ ಬದ್ಧತೆಯನ್ನು ಪ್ರದರ್ಶಿಸಿದ ಪರಿವೇಂಧರ್ ಅವರು ಒಂದು ಲಕ್ಷ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿದರು. ಟಿ.ಪಿ ಗಣೇಶನ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಕಂಪ್ಯೂಟರ್ಗಳನ್ನು ಹಸ್ತಾಂತರಿಸಲಾಯಿತು. ಎಸ್ಆರ್ಎಂ ತಮಿಳ್ ಪೆರಯಮ್ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಾಯಕ ಉಪಕುಲಪತಿ ಡಾ.ಆರ್. ಬಾಲಸುಬ್ರಮಣ್ಯನ್ ವಹಿಸಿದ್ದರು.
ಸಹಾಯಕ ಉಪಕುಲಪತಿ ಡಾ.ಟಿ.ಪಿ ಗಣೇಶನ್, ರಿಜಿಸ್ಟ್ರಾರ್ ಡಾ. ಎನ್. ಸೇತುರಾಮನ್, ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ನಿದೇಶಕ ಡಾ. ಸಿ. ಮುತ್ತುಸೆಲ್ವಂ ಮತ್ತು ವಾಣಿಜ್ಯ ವಿಭಾಗದ ನಿರ್ದೇಶಕ ಎಂ.ಬಾಲಸುಬ್ರಮಣ್ಯನ್ ಉಪಸ್ಥಿತರಿದ್ದರು. ಚಿತ್ರತಯಾರಕ ಲಿಂಗುಸಾಮಿ ವಿಶೇಷ ಅಥಿತಿಯಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಎಂ. ಬಾಲಸುಬ್ರಮಣ್ಯನ್ ಅವರು ಎಸ್ಆರ್ಎಂ ಸಿಬ್ಬಂದಿಗಾಗಿ ಕಲ್ಯಾಣ ಯೋಜನೆಗಳನ್ನು ಘೋಷಿಸಿದರು. ದಿನವನ್ನು ಮತ್ತಷ್ಟು ಅರ್ಥಪೂರ್ಣಗೊಳಿಸಲು ಉಚಿತ ವೈದ್ಯಕೀಯ ಶಬಿರ, ಅಂಗಾಂಗ ದಾನ ಅಭಿಯಾನ, ನೇತ್ರದಾನ ಮತ್ತು ರಕ್ತದಾನ ಶಿಬಿರಗಳನ್ನೂ ಆಯೋಜಿಸಲಾಗಿತ್ತು.