ಸಹಕಾರಿ ಬ್ಯಾಂಕ್ಗಳಿಂದ ಉತ್ತಮ ಸೇವೆ: ಡಾ.ಎಂ.ಎನ್ ರಾಜೇಂದ್ರ ಕುಮಾರ್

ಕಾಪು : ಉತ್ತಮ ಸೇವೆಯಿಂದ ಜನರ ಬ್ಯಾಂಕಾಗಿ ಸಹಕಾರಿ ಬ್ಯಾಂಕ್ಗಳು ಪರಿವರ್ತಿತವಾಗಿದೆ ಎಂದು ಎಸ್ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಹೇಳಿದರು.
ಸೋಮವಾರ ಸ್ಥಳಾಂತರಗೊಂಡ ದಕ್ಷಿಣಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಕಾಪು ಶಾಖೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಹಕಾರಿ ಬ್ಯಾಂಕ್ನಲ್ಲಿ ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ನೀಡಲು ಬದ್ಧವಾಗಿದೆ. ಎಸ್ಡಿಸಿಸಿ ಬ್ಯಾಂಕ್ನ ಸೇವೆ ಕಂಡು ಹಲವು ಕಡೆ ಶಾಖೆ ಆರಂಭಿಸುವಂತೆ ಜನರು ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಹತ್ತು ಕಡೆಗಳಲ್ಲಿ ಸುಸಜ್ಜಿತ ವ್ಯವಸ್ಥೆಯೊಂದಿಗೆ ಶಾಖೆ ಪ್ರಾರಂಭಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಶಾಸಕ ಲಾಲಾಜಿ ಆರ್ ಮೆಂಡನ್ ಮಾತನಾಡಿ, ಜನರ ಅವಶ್ಯಕತೆಗೆ ಸುಲಭವಾಗಿ ಸ್ಪಂದಿಸುವ ಸಹಕಾರಿ ಬ್ಯಾಂಕ್ಗಳು ವೇಗವಾಗಿ ಬೆಳವಣಿಗೆಯಾಗಿದೆ. ಸ್ವ ಸಹಾಯ ಗುಂಪುಗಳು ಹಾಗೂ ಸ್ತ್ರೀ ಶಕ್ತಿಗೆ ನೈಜ ಶಕ್ತಿ ತುಂಬುವ ಕೆಲಸ ಸಹಕಾರಿ ಬ್ಯಾಂಕ್ಗಳಿಂದಾಗಿದೆ ಎಂದರು.
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ ಬ್ಯಾಂಕ್ ಶಾಖೆ ಉದ್ಘಾಟಿಸಿ ಶುಭ ಹಾರೈಸಿದರು. ಪಡುಬಿದ್ರಿ ಖಡ್ಗೇಶ್ವರಿ ಬ್ರಹ್ಮಸ್ಥಾನದ ಪ್ರಥಮ ಪಾತ್ರಿ ಭದ್ರತಾ ಕೊಠಡಿಯನ್ನು ಉದ್ಘಾಟಿಸಿ ಆಶೀರ್ವಚಿಸಿದರು.
5 ನವೋದಯ ಸ್ವಸಹಾಯ ಗುಂಪುಗಳನ್ನು ಉದ್ಘಾಟಿಸಲಾಯಿತು. 6 ಜನರಿಗೆ ಚೈತನ್ಯ ವಿಮಾ ಯೋಜನೆ ಚೆಕ್ ವಿತರಿಸಲಾಯಿತು. ಬಿಲ್ಲವರ ಸಹಾಯಕ ಸಂಘದ ಅಧ್ಯಕ್ಷ ವಿಕ್ರಂ ಕಾಪು, ಬ್ಯಾಂಕ್ನ ಕಾಪು ಶಾಖೆ ಪ್ರಬಂಧಕ ಪ್ರಭೋದ್ಚಂದ್ರ ಹೆಜಮಾಡಿ ಅವರನ್ನು ಸನ್ಮಾನಿಸಲಾಯಿತು. ಬ್ಯಾಂಕ್ ಸಿಬಂದಿಗಳಾದ ನಿತ್ಯಾನಂದ ಶೇರಿಗಾರ, ಬಾಲಕೃಷ್ಣ ಭಟ್, ಹರಿನಾಥ್, ಪ್ರೇರಕಿ ಅನಿತಾ, ನಿತ್ಯನಿಧಿ ಸಂಗ್ರಾಹಕರಾದ ಟಿ. ಧನಂಜಯ ಮಲ್ಲಾರು, ದೇವರಾಜ ಕೋಟ್ಯಾನ್ ಪಡು, ಭಾಸ್ಕರ ಕುಮಾರ್ ಕರಂದಾಡಿ ಅವರನ್ನು ಗೌರವಿಸಲಾಯಿತು.
ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕಾಪು ಸಹಕಾರಿ ವ್ಯವಸಾಯಿಕ ಸಂಘ ಉಪಾಧ್ಯಕ್ಷ ಮಾಧವ ಪಾಲನ್, ಕಾಪು ಕ್ಷೇತ್ರ ಸ್ತ್ರೀ ಶಕ್ತಿ ಸ್ವಸಹಾಯ ಪೂಜಾರಿ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಬಿ ನಾಯಕ್, ಎಸ್ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಭಾಸ್ಕರ ಎಸ್ ಕೋಟ್ಯಾನ್, ಎಂ. ವಾದಿರಾಜ ಶೆಟ್ಟಿ, ಎಸ್. ರಾಜು ಪೂಜಾರಿ, ಶಶಿಕುಮಾರ ರೈ ಬಿ., ಕೆ. ಜೈರಾಜ್ ರೈ, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಬಿ., ವಿವಿಧ ಸಿಎ ಬ್ಯಾಂಕ್ಗಳ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್, ಅಲೆವೂರು ಶ್ರೀಧರ ಶೆಟ್ಟಿ, ತಿಮ್ಮ ಪೂಜಾರಿ, ಕಟಪಾಡಿ ಶಂಕರ ಪೂಜಾರಿ, ನಾರಾಯಣ ಬಲ್ಲಾಳ್, ಕೊನ್ರಾಜ್ ಕ್ಯಾಸ್ತಲಿನೋ ಉಪಸ್ಥಿತರಿದ್ದರು.
ನಿರ್ದೇಶಕರಾದ ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ರಾಜೇಶ್ ರಾವ್ ಪಾಂಗಾಳ ವಂದಿಸಿದರು. ವಾಲ್ಟ್ಸನ್ ಡೇಸಾ ಕಾರ್ಯಕ್ರಮ ನಿರ್ವಹಿಸಿದರು.







