Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಅಮಿತ್ ಶಾ ಹೆಲಿಕಾಪ್ಟರ್ ಹಾರಾಟ ನಡೆಸಲು...

ಅಮಿತ್ ಶಾ ಹೆಲಿಕಾಪ್ಟರ್ ಹಾರಾಟ ನಡೆಸಲು ನಕಲಿ ಇಮೇಲ್ ಕಳುಹಿಸಿದ ಕಾರ್ಗಿಲ್ ಹೀರೋ: ಬಿಎಸ್‍ಎಫ್ ತನಿಖೆ ಆರಂಭ

ವಾರ್ತಾಭಾರತಿವಾರ್ತಾಭಾರತಿ27 Aug 2019 1:36 PM IST
share
ಅಮಿತ್ ಶಾ ಹೆಲಿಕಾಪ್ಟರ್ ಹಾರಾಟ ನಡೆಸಲು ನಕಲಿ ಇಮೇಲ್ ಕಳುಹಿಸಿದ ಕಾರ್ಗಿಲ್ ಹೀರೋ: ಬಿಎಸ್‍ಎಫ್ ತನಿಖೆ ಆರಂಭ

ಹೊಸದಿಲ್ಲಿ, ಆ.27: ಗೃಹ ಸಚಿವ ಅಮಿತ್ ಶಾ ಅವರು ಪ್ರಯಾಣಿಸುವ ಹೆಲಿಕಾಪ್ಟರ್ ನ ಪೈಲಟ್ ಆಗುವ ಉದ್ದೇಶದಿಂದ ಭಾರತೀಯ ವಾಯುಸೇನೆಯ ಕಾರ್ಗಿಲ್ ಹೀರೋ ಒಬ್ಬರು ಬಿಎಸ್‍ಎಫ್ ವಾಯುದಳದ ಹೆಸರಿನಲ್ಲಿ ನಕಲಿ ಇಮೇಲ್ ಕಳುಹಿಸಿ ತನ್ನ ಸ್ವಂತ ಹೆಸರನ್ನು ಶಿಫಾರಸು ಮಾಡಿದ ಘಟನೆ ಬೆಳಕಿಗೆ ಬಂದಿದ್ದು, ಈ ಕುರಿತಂತೆ ಬಿಎಸ್‍ಎಫ್ ಹಾಗೂ ದಿಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಜೂನ್ ಹಾಗೂ ಜುಲೈ ತಿಂಗಳಲ್ಲಿ ಗೃಹ ಸಚಿವರು ಪ್ರಯಾಣಿಸುವ ಹೆಲಿಕಾಪ್ಟರ್ ನಿರ್ವಹಿಸುವ ಎಲ್ & ಟಿ ಸಂಸ್ಥೆಗೆ ಹಲವು ಇಮೇಲ್ ಗಳು ಬಿಎಸ್‍ಎಫ್ ವಾಯುದಳದಿಂದ ಬಂದು ನಿವೃತ್ತ ವಿಂಗ್ ಕಮಾಂಡರ್ ಹಾಗೂ ಬಿಎಸ್‍ಎಫ್ ಪೈಲಟ್  ಜೆ.ಎಸ್. ಸಂಗ್ವಾನ್  ಅವರಿಗೆ  ವಿಮಾನ ಹಾರಾಟಕ್ಕೆ ಅನುಮತಿ ನೀಡಬೇಕೆಂದು ಎಲ್ & ಟಿಯನ್ನು ಕೋರಿತ್ತು.

ಅವರು ತರಬೇತಿ ಹೊಂದಿದ ಎಂಬ್ರೇರ್ ಪೈಲಟ್, ಪೈಲಟ್ ಇನ್ ಕಮಾಂಡ್ ಗ್ರೇಡಿಂಗ್ ಹೊಂದಿದ್ದಾರೆ ಹಾಗೂ  4,000ಕ್ಕೂ ಹೆಚ್ಚು ಗಂಟೆಗಳ ಹಾರಾಟ ಅನುಭವವಿದೆಯೆಂದು ಹೇಳಲಾಗಿತ್ತು. ಈ ಉನ್ನತ ಮಟ್ಟದ ಶಿಫಾರಸಿನಂತೆ ಎಲ್&ಟಿ ಪೈಲಟ್ ಗೆ ತನ್ನ ಚೆನ್ನೈ- ದಿಲ್ಲಿ-ಮುಂಬೈ  ವಿಮಾನದಲ್ಲಿ ಜುಲೈ ತಿಂಗಳಲ್ಲಿ ಹಾರಾಟ ನಡೆಸುವ ಅವಕಾಶದ ಆಫರ್ ಮಾಡಿತ್ತು. ಆದರೆ ಪೈಲಟ್ ಚೆನ್ನೈಗೆ ತೆರಳುವ ಮುನ್ನ ಎಲ್ & ಟಿ ಬಿಎಸ್‍ಎಫ್ ವಾಯು ದಳಕ್ಕೆ ಕರೆ ಮಾಡಿ  ವಿಚಾರಿಸಿದಾಗ ಬಿಎಸ್‍ಎಫ್ ಯಾವುದೇ ಪೈಲಟ್ ಹೆಸರು ಶಿಫಾರಸು ಮಾಡಿಲ್ಲ ಎಂದು ತಿಳಿದು ಬಂದಾಗ ಸಂಗ್ವಾನ್ ವಂಚಿಸಿರುವುದು ತಿಳಿದು ಬಂದಿತ್ತು.

ಎಂಬ್ರೇರ್ ವಿಮಾನ ಹಾರಾಟದಲ್ಲಿ ಅಗತ್ಯ ಗಂಟೆಗಳನ್ನು ದಾಖಲಿಸಲು ಯತ್ನಿಸಿ ಈ ಮೂಲಕ ಗೃಹ ಸಚಿವರ ಪೈಲಟ್ ಆಗಬಹುದೆಂದು ಆತ ಹೀಗೆ ಮಾಡಿದ್ದರು. ನಿಯಮ ಪ್ರಕಾರ ವಿಐಪಿ ವಿಮಾನ ಹಾರಾಟಕ್ಕೆ ಪೈಲಟ್ ಗಳಿಗೆ ಕನಿಷ್ಠ 500 ಗಂಟೆಗಳ ಹಾರಾಟ ಅನುಭವ ಬೇಕಿದ್ದರೆ ಗೃಹ ಸಚಿವರ ವಿಮಾನ ಹಾರಾಟಕ್ಕೆ 1,000ಕ್ಕೂ ಅಧಿಕ ಗಂಟೆಗಳ ಹಾರಾಟ ಅನುಭವ ಅಗತ್ಯ.

ಆದರೆ ಪೈಲಟ್ ಸಂಗ್ವಾನ್‍ಗೆ ಗೃಹ ಸಚಿವರ  ವಿಮಾನ ಹಾರಾಟ ಮಾಡಾಬೇಕೆಂಬ ಇಚ್ಛೆ ಏಕಿದೆಯೆಂದು ಗೊತ್ತಿಲ್ಲ. 1999ರ ಕಾರ್ಗಿಲ್ ಯುದ್ಧ ಕಾರ್ಯಾಚರಣೆಯ ವೇಳೆ ತೋರಿದ ಸಾಹಸಕ್ಕಾಗಿ  ಪದಕ ಗಳಿಸಿದ್ದ ಸಂಗ್ವಾನ್ ತನ್ನನ್ನು ತಪ್ಪಾಗಿ ಅರ್ಥೈಸಲಾಗಿದೆ ಹಾಗೂ ಒಳ್ಳೆಯ ಉದ್ದೇಶದಿಂದ  ತಾನು ಈ ರೀತಿ ಮಾಡಿದ್ದಾಗಿ, ತನ್ನ  ವಿರುದ್ಧದ ಯಾವುದೇ ಕ್ರಮಕ್ಕೂ ಸಿದ್ಧ  ಎಂದಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X