ಸೆ.6ರಿಂದ ರಂಜನಿ ಸಂಸ್ಮರಣಾ ಕಾರ್ಯಕ್ರಮಗಳು
ಉಡುಪಿ, ಆ.28: ಸ್ಥಳೀಯ ರಂಜನಿ ಮೆಮೋರಿಯಲ್ ಟ್ರಸ್ಟ್ ಆಶ್ರಯದಲ್ಲಿ ಈ ಬಾರಿಯ ರಂಜನಿ ಸಂಸ್ಮರಣಾ ಕಾರ್ಯಕ್ರಮವನ್ನು ಸೆ. 6ರಿಂದ 10ರವರೆಗೆ ಹಮ್ಮಿಕೊಳ್ಳಲಾಗಿದೆ. ಈ ಸಂಬಂಧಿ ವಿವಿಧ ಕಾರ್ಯಕ್ರಮಗಳು ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿವೆ.
ಸೆ.6ರ ಶುಕ್ರವಾರ, ಸಂಜೆ 5:30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಮಣಿಪಾಲ ಡಾಟ್ ನೆಟ್ನ ಶಶಿಕಲಾ ಮತ್ತು ನರಸಿಂಹ ಭಟ್ ಹಾಗೂ ಉದ್ಯಮಿ ನಾಗರಾಜ ಬಲ್ಲಾಳ ಭಾಗವಹಿಸಲಿದ್ದಾರೆ. ಸಂಜೆ 6ಕ್ಕೆ ಬೆಂಗಳೂರಿನ ಐಶ್ಚರ್ಯಾ ವಿದ್ಯಾರಘುನಾಥ್ ಅವರ ಹಾಡುಗಾರಿಕೆ ಇರುತ್ತದೆ.
ಸೆ.7ರ ಶನಿವಾರ ಸಂಜೆ 4:30ಕ್ಕೆ ಮಣಿಪಾಲದ ದಿವ್ಯಶ್ರೀ ಹಾಡುಗಾರಿಕೆ, 5:45ಕ್ಕೆ ಚೆನ್ನೈನ ಪ್ರಸನ್ನ ವೆಂಕಟರಾಮ್ ಅವರ ಹಾಡುಗಾರಿಕೆ ನಡೆಯಲಿದೆ.
ಸೆ.8ರ ರವಿವಾರ ಬೆಳಗ್ಗೆ 9:30ಕ್ಕೆ ಶಾಸ್ತ್ರೀಯ ಸಂಗೀತವನ್ನು ನಾವು ಯಾರಿಗಾಗಿ ಹಾಡಬೇಕು?’ ಈ ವಿಷಯದ ಕುರಿತು ಲಕ್ಷ್ಮೀಶ ತೋಳ್ಪಾಡಿ ಇವರ ಉಪನ್ಯಾಸ ನಡೆಯಲಿದೆ. 10:45ಕ್ಕೆ ಅರ್ಚನಾ ಮತ್ತು ಸಮನ್ವಿ ಇವರಿಂದ ಕರ್ನಾಟಕ ಸಂಗೀತದಲ್ಲಿ ಗ್ರಹಭೇದಗಳು’ ಎಂಬ ವಿಷಯದಲ್ಲಿ ಸೋದಾಹರಣ ಉಪನ್ಯಾಸ ನಡೆಯಲಿದೆ. ಸಮನ್ವಯಕಾರರಾಗಿ ಬೆಂಗಳೂರಿನ ಡಾ.ಟಿ.ಎಸ್. ಸತ್ಯವತಿ ಭಾಗವಹಿಸುತ್ತಾರೆ. ಸಂಜೆ 5:30ಕ್ಕೆ ವಿಜಯವಾಡದ ಮಲ್ಲಾಡಿ ಸಹೋದರರಿಂದ ಹಾಡುಗಾರಿಕೆ ನಡೆಯಲಿದೆ.
ಸೆ.9ರ ಸೋಮವಾರ ಸಂಜೆ 5:15ಕ್ಕೆ ಚಿಕ್ಕಮಗಳೂರಿನ ಹಿರೇಮಗಳೂರು ಕಣ್ಣನ್ರ ಉಪನ್ಯಾಸ ನಡೆಯಲಿದೆ. ಸಂಜೆ 6:30ಕ್ಕೆ ಮೈಸೂರಿನ ಶ್ರೀಮತಿದೇವಿ ಇವರಹಾಡುಗಾರಿಕೆಯನ್ನು ಆಯೋಜಿಸಲಾಗಿದೆ.
ಸೆ.10ರಂದು ಬೆಳಗ್ಗೆ 10:00ಕ್ಕೆ ಬೆಂಗಳೂರಿನ ಛಾಯಾಪತಿ ಗುರೂಜಿ ಅವರ ನೇತೃತ್ವದಲ್ಲಿ ಸತ್ಸಂಗ, ಅಪರಾಹ್ನ ಎರಡು ಗಂಟೆಗೆ ಸ್ಥಳೀಯ ಕಲಾವಿದರಿಂದ ಗಾನಸೌರಭ, ಸಂಜೆ 4ಕ್ಕೆ ಮೈಸೂರಿನ ಹರೀಶ್ ಪಾಂಡವ್ರ ಸ್ಯಾಕ್ಸೋಫೋನ್ ವಾದನ ನಡೆಯಲಿದೆ. ಸಂಜೆ 5ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ವಿಜಯ್ ಹಾಗೂ ಮಣಿಪಾಲ ಎಂಐಟಿಯ ಜಂಟಿ ನಿರ್ದೇಶಕ ಡಾ.ಬಿ.ಎಚ್.ವಿ.ಪೈ ಭಾಗವಹಿಸುವರು. ಸಂಜೆ 6:30ಕ್ಕೆ ಬೆಂಗಳೂರಿನ ಹೇರಂಭ ಮತ್ತು ಹೇಮಂತರ ದ್ವಂದ್ವ ಕೊಳಲುವಾದನ ನಡೆಯಲಿದೆ ಎಂದು ಟ್ರಸ್ಟ್ನ ಮುಖ್ಯಸ್ಥ ವಿ.ಅರವಿಂದ ಹೆಬ್ಬಾರ್ ತಿಳಿಸಿದ್ದಾರೆ.







