ಇಂದಿನಿಂದ ಭಾರತ ‘ಎ’ -ಆಫ್ರಿಕ ಅನಧಿಕೃತ ಏಕದಿನ ಸರಣಿ
ತಿರುವನಂತಪುರ, ಆ.28: ಭಾರತ ‘ಎ’ ಮತ್ತು ದಕ್ಷಿಣ ಆಫ್ರಿಕ ತಂಡಗಳ ನಡುವೆ ಐದು ಪಂದ್ಯಗಳ ಅನಧಿಕೃತ ಏಕದಿನ ಸರಣಿಯ ಮೊದಲ ಪಂದ್ಯ ಗುರುವಾರ ನಡೆಯಲಿದೆ.
ಯುವ ಆಟಗಾರ ಶುಭ್ಮನ್ ಗಿಲ್ ಈ ಸರಣಿಯಲ್ಲಿ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ. ಅವರಿಗೆವೆಸ್ಟ್ಇಂಡೀಸ್ ಪ್ರವಾಸ ಸರಣಿಯಲ್ಲಿ ಅವಕಾಶ ಸಿಕ್ಕಿರಲಿಲ್ಲ. ಪಂಜಾಬ್ನ ಬಲಗೈ ಬ್ಯಾಟ್ಸ್ಮನ್ ಗಿಲ್ ನ್ಯೂಝಿಲ್ಯಾಂಡ್ ವಿರುದ್ಧದ ಸರಣಿಯಲ್ಲಿ ಎರಡು ಏಕದಿನ ಪಂದ್ಯಗಳನ್ನು ಆಡಿದ್ದರು.
ಗಿಲ್ ಜೊತೆಗೆ ವಿಜಯ್ ಶಂಕರ್ ಅವರು ಆಯ್ಕೆ ಸಮಿತಿಯ ಗಮನ ಸೆಳೆಯುವ ಪ್ರಯತ್ನದಲ್ಲಿದ್ದಾರೆ. ವಿಜಯ್ ಶಂಕರ್ಗಾಯದಿಂದ ಚೇತರಿಸಿಕೊಂಡು ಮತ್ತೆ ರಾಷ್ಟ್ರೀಯ ತಂಡ ಸೇರುವ ತಯಾರಿಯಲ್ಲಿದ್ದಾರೆ.ವಿಜಯ್ ಶಂಕರ್ ಇಂಗ್ಲೆಂಡ್ನಲ್ಲಿ ಕಳೆದ ಐಸಿಸಿ ವಿಶ್ವಕಪ್ ಟೂರ್ನಮೆಂಟ್ನ ವೇಳೆ ಗಾಯಗೊಂಡು ತವರಿಗೆ ವಾಪಸಾಗಿದ್ದರು. ಬಳಿಕ ಚೇತರಿಸಿಕೊಂಡು ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ಆಡಿದ್ದರು.
ಇತ್ತೀಚೆಗೆ ಭಾರತದ ಸೀಮಿತ ಓವರ್ಗಳ ತಂಡಕ್ಕೆ ವಾಪಸಾಗಿದ್ದ ಮನೀಷ್ ಪಾಂಡೆ ಸರಣಿಯ ಐದು ಪಂದ್ಯಗಳ ಪೈಕಿಮೂರು ಪಂದ್ಯಗಳಲ್ಲಿ ತಂಡವನ್ನು ನಾಯಕರಾಗಿ ಮುನ್ನಡೆಸುವರು. ಅಂತಿಮ ಎರಡು ಪಂದ್ಯಗಳಲ್ಲಿ ಶ್ರೇಯಸ್ ಅಯ್ಯರ್ ತಂಡದ ನಾಯಕರಾಗಿರುತ್ತಾರೆ. ಪಾಂಡೆ ಮುಂಬರುವ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾದ ಮಧ್ಯಮ ಸರದಿಯ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
ಸ್ಪಿನ್ನ ಸ್ಪಿನ್ನರ್ ಯಜುವೇಂದ್ರ ಚಹಾಲ್ ತಂಡದಲ್ಲಿದ್ದಾರೆ. ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್ ಮತ್ತು ನಿತೀಶ್ ರಾಣಾ . ವೇಗಿಗಳಾದ ಖಲೀಲ್ ಅಹ್ಮದ್, ದೀಪಕ್ ಚಹಾರ್, ತೆಂಬಾ ಬಾವುಮಾ ತಂಡದಲ್ಲಿದ್ದಾರೆ.ಬವುಮಾ 36 ಟೆಸ್ಟ್ ಹಾಗೂ 2 ಏಕದಿನ ಪಂದ್ಯಗಳನ್ನು ಆಡಿದ್ದಾರೆ.







