ಚಿದಂಬರಮ್ ಬಂಧನ ನಿಜಕ್ಕೂ 'ಶುಭ ಸುದ್ದಿ ': ಇಂದ್ರಾಣಿ ಮುಖರ್ಜಿ

ಮುಂಬೈ, ಆ.29: ಐಎನ್ ಎಕ್ಸ್ ಮೀಡಿಯಾ ಹಗರಣದಲ್ಲಿ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಮ್ ಅವರನ್ನು ಸಿಬಿಐ ಬಂಧಿಸಿರುವ ಸುದ್ದಿ ಕೇಳಿ ನನಗೆ ಸಂತಸವಾಗಿದೆ. ಅವರ ಬಂಧನ ನಿಜಕ್ಕೂ ನನ್ನ ಪಾಲಿಗೆ ಶುಭ ಸುದ್ದಿ ಎಂದು ಐಎನ್ ಎಕ್ಸ್ ನ ಮಾಜಿ ಮುಖ್ಯಸ್ಥೆ ಇಂದ್ರಾಣಿ ಮುಖರ್ಜಿ ಹೇಳಿದ್ದಾರೆ.
ಮಗಳು ಶೀನಾ ಬೊರಾ ಕೊಲೆ ಪ್ರಕರಣದಲ್ಲಿ ಪ್ರಧಾನ ಆರೋಪಿಯಾಗಿ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ಇಂದ್ರಾಣಿ ಮುಖರ್ಜಿ ನೀಡಿದ ಹೇಳಿಕೆಯ ಆಧಾರದಲ್ಲಿ ಚಿದಂಬರಮ್ ಅವರನ್ನು ಸಿಬಿಐ ಬಂಧಿಸಿತ್ತು.
ಶೀನಾ ಬೋರಾ ಕೊಲೆ ಪ್ರಕರಣದ ವಿಚಾರಣೆಗೆ ಹಾಜರಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಇಂದ್ರಾಣಿ ಅವರು ಚಿದಂಬರಮ್ ಪುತ್ರ ಕಾರ್ತಿ ಚದಂಬರಮ್ ಗೆ ನೀಡಿರುವ ಜಾಮೀನು ರದ್ದಾಗಬೇಕು ಎಂದು ಆಗ್ರಹಿಸಿದರು.
Next Story