ಗಣೇಶ ಚತುರ್ಥಿ: ಮದ್ಯ ಮಾರಾಟ ನಿಷೇಧ
ಉಡುಪಿ, ಆ.31: ಸೆ.2ರಂದು ಗಣೇಶ ಚತುರ್ಥಿ ಹಬ್ಬ ಆಚರಣೆ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಅದ್ಧೂರಿ ಪುರ ಮೆರವಣಿಗೆಗಳು ನಡೆಯಲಿರುವುದರಿಂದ ಈ ಸಂದರ್ಭದಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ.ಜಗದೀಶ್ ಈ ಕೆಳಕಂಡ ಪ್ರದೇಶಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ, ಆದೇಶ ಹೊರಡಿಸಿದ್ದಾರೆ.
ಉಡುಪಿ ನಗರ ಠಾಣಾವ್ಯಾಪ್ತಿಯ ಗ್ರಾಮವಾದ ಕೊರಂಗ್ರಪಾಡಿ(4 ಕಿ.ಮಿ. ವ್ಯಾಪ್ತಿ)ಯಲ್ಲಿ ಸೆ.2ರಂದು ಬೆಳಗ್ಗೆ 6ರಿಂದ ಸೆ.3ರ ಬೆಳಗ್ಗೆ 6 ಗಂಟೆವರೆಗೆ. ಮಲ್ಪೆ ಠಾಣಾ ವ್ಯಾಪ್ತಿಯ ಗ್ರಾಮಗಳಾದ ಕೊಡವೂರು, ಕಿದಿಯೂರು, ಕಡೆಕಾರು, ಮೂಡುತೊನ್ಸೆ, ಪಡುತೊನ್ಸೆ, ತೆಂಕನಿಡಿ ಯೂರು, ಕೆಳಾರ್ಕಳಬೆಟ್ಟು, ಬಡಾ ನಿಡಿಯೂರಿನಲ್ಲಿ ಸೆ.2ರಂದು ಬೆಳಗ್ಗೆ 6ರಿಂದ ಸೆ.3ರ ಬೆಳಗ್ಗೆ 6 ಗಂಟೆವರೆಗೆ.
ಕೋಟ ಠಾಣಾ ವ್ಯಾಪ್ತಿಯ ತೆಕ್ಕಟ್ಟೆ (1ಕಿ.ಮೀ.ವ್ಯಾಪ್ತಿ)ಯಲ್ಲಿ ಸೆ.2ರಂದು ಬೆಳಗ್ಗೆ 6ರಿಂದ ರಾತ್ರಿ 11ರವರೆಗೆ. ಕೋಟ ಠಾಣೆಯ ಹಾರ್ದಳ್ಳಿ ಮಂಡಳ್ಳಿ (500ಮೀ.)ಯಲ್ಲಿ ಸೆ.2ರಂದು ಅಪರಾಹ್ನ 3:30ರಿಂದ ರಾತ್ರಿ 11ರವರೆಗೆ. ಕೋಟ ಠಾಣಾ ವ್ಯಾಪ್ತಿಯ ಗ್ರಾಮಗಳಾದ ಹಳ್ಳಾಡಿ-ಹರ್ಕಾಡಿ, ಗುಂಡ್ಮಿ, ಬನ್ನಾಡಿ, ಹಂಗಾರಕಟ್ಟೆ, ಬೇಳೂರು, ಶಿರಿಯಾರಗಳಲ್ಲಿ ಸೆ.3ರಂದು ಅಪರಾಹ್ನ 3:00ರಿಂದ ರಾತ್ರಿ 11ರವರೆಗೆ.
ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕರ್ಕುಂಜೆ (ನೇರಳಕಟ್ಟೆ ಪೇಟೆ 3ಕಿ.ಮಿ.)ಯಲ್ಲಿ ಸೆ.3ರಂದು ಅಪರಾಹ್ನ 12ರಿಂದ ರಾತ್ರಿ 11:30ರವರೆಗೆ. ಮಲ್ಪೆ ಠಾಣಾ ವ್ಯಾಪ್ತಿಯ ಪಡುತೊನ್ಸೆ (1 ಕಿ.ಮಿ.)ಯಲ್ಲಿ ಸೆ.4ರಂದು ಬೆಳಗ್ಗೆ 6ರಿಂದ ಸೆ.5ರ ಬೆಳಗ್ಗೆ 6 ಗಂಟೆಯವರೆಗೆ. ಉಡುಪಿ ನಗರ ಠಾಣಾ ವ್ಯಾಪ್ತಿಯ ಮೂಡು ನಿಡಂಬೂರಿನಲ್ಲಿ (5ಕಿ.ಮೀ.) ಸೆ.4ರಂದು ಬೆಳಗ್ಗೆ 11ರಿಂದ ರಾತ್ರಿ 11ರವರೆಗೆ
ಕೋಟ ಠಾಣಾ ವ್ಯಾಪ್ತಿಯ ಗ್ರಾಮಗಳಾದ ಚಿತ್ರಪಾಡಿ, ಹೊಂಬಾಡಿ ಮುಂಡಾಡಿ, ಶಿರಿಯಾರ, ಗಿಳಿಯಾರು, ತೆಕ್ಕಟ್ಟೆಯಲ್ಲಿ ಸೆ.4ರಂದು ಅಪರಾಹ್ನ 3ರಿಂದ ರಾತ್ರಿ 11ರವರೆಗೆ. ಹಿರಿಯಡ್ಕ ಠಾಣಾ ವ್ಯಾಪ್ತಿಯ ಬೊಮ್ಮರಬೆಟ್ಟುನಲ್ಲಿ (3 ಕಿ.ಮಿ.) ಸೆ.4ರಂದು ಬೆಳಗ್ಗೆ 6 ಗಂಟೆಯಿಂದ ಸೆ.5ರ ಬೆಳಗ್ಗೆ 6ರವರೆಗೆ.
ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಾವ್ರಾಡಿ (ಕಂಡ್ಲೂರು ಪೇಟೆ 2 ಕಿ.ಮೀ.)ಯಲ್ಲಿ ಸೆ.4ರಂದು ಅಪರಾಹ್ನ 12ರಿಂದ ರಾತ್ರಿ 21:30ರವರೆಗೆ. ಅಮಾಸೆಬೈಲು ಠಾಣಾ ವ್ಯಾಪ್ತಿಯ ಹೊಸಂಗಡಿಯಲ್ಲಿ ಸೆ.4ರಂದು 12ರಿಂದ ಸೆ.5ರ ಬೆಳಗ್ಗೆ 6 ಗಂಟೆಯವರೆಗೆ. ಶಂಕರನಾರಾಯಣ ಠಾಣಾ ವ್ಯಾಪ್ತಿಯ ಗ್ರಾಮಗಳಾದ ಸಿದ್ದಾಪುರ (3 ಕಿ.ಮಿ.), ಅಂಪಾರು(2ಕಿ.ಮಿ)ನಲ್ಲಿ ಸೆ.4ರಂದು ಅಪರಾಹ್ನ 12ರಿಂದ ಸೆ.5ರ ಬೆಳಗ್ಗೆ 6 ಗಂಟೆಯವರೆಗೆ.
ಶಂಕರನಾರಾಯಣ ಠಾಣಾ ವ್ಯಾಪ್ತಿಯ ಬೆಳ್ವೆ (3 ಕಿ.ಮಿ.)ಯಲ್ಲಿ ಸೆ.4ರಂದು ಬೆಳಗ್ಗೆ 6 ಗಂಟೆಯಿಂದ ಸೆ.5ರ ಬೆಳಗ್ಗೆ 6 ಗಂಟೆವರೆಗೆ. ಉಡುಪಿ ನಗರ ಠಾಣಾ ವ್ಯಾಪ್ತಿಯ ಗ್ರಾಮಗಳಾದ ಅಂಬಲಪಾಡಿ, ಪುತ್ತೂರಿನಲ್ಲಿ (6 ಕಿ.ಮಿ.) ಸೆ.5ರಂದು ಬೆಳಗ್ಗೆ 11ರಿಂದ ರಾತ್ರಿ 11:00 ಗಂಟೆವರೆಗೆ. ಬೈಂದೂರು ಠಾಣಾ ವ್ಯಾಪ್ತಿಯ ಗ್ರಾಮಗಳಾದ ಯಡ್ತೆರೆ, ಬೈಂದೂರಿನಲ್ಲಿ (5 ಕಿ.ಮಿ.) ಸೆ.6ರಂದು ಅಪರಾಹ್ನ 12ರಿಂದ ರಾತ್ರಿ 11 ಗಂಟೆಯವರೆಗೆ.
ಬೈಂದೂರು ಠಾಣಾ ವ್ಯಾಪ್ತಿಯ ಗ್ರಾಮಗಳಾದ ಬಿಜೂರು, ಉಪ್ಪುಂದದಲ್ಲಿ (4 ಕಿ.ಮಿ. ವ್ಯಾಪ್ತಿ) ಸೆಪ್ಟಂಬರ್ 6 ರಂದು ಮಧ್ಯಾಹ್ನ 12 ಗಂಟೆುಂದ ರಾತ್ರಿ 11 ಗಂಟೆಯವರೆಗೆ
ಗಂಗೊಳ್ಳಿ ಠಾಣಾ ವ್ಯಾಪ್ತಿಯ ಗಂಗೊಳ್ಳಿ, ಗುಜ್ಜಾಡಿ, ಹೊಸಾಡು, ತ್ರಾಸಿ ಗ್ರಾಮಗಳಲ್ಲಿ (9 ಕಿ.ಮಿ. ವ್ಯಾಪ್ತಿ) ಸೆಪ್ಟಂಬರ್ 6 ರಂದು ಬೆಳಗ್ಗೆ 6 ರಿಂದ ಸೆಪ್ಟಂಬರ್ 7 ರ ಬೆಳಗ್ಗೆ 6 ರ ವರೆಗೆ.
ಕುಂದಾಪುರ ಠಾಣಾ ವ್ಯಾಪ್ತಿಯ ಗ್ರಾಮಗಳಾದ ಕುಂದಾಪುರ, ಕಸಬಾ, ವಡೇರ ಹೋಬಳಿ, ಹಂಗಳೂರು, ಕೋಟೇಶ್ವರದಲ್ಲಿ ಸೆಪ್ಟಂಬರ್ 6 ರಂದು ಮಧ್ಯಾಹ್ನ 12 ಗಂಟೆುಂದ ಸೆಪ್ಟಂಬರ್ 7 ರ ಬೆಳಗ್ಗೆ 7 ಗಂಟೆಯವರೆಗೆ. ಉಡುಪಿ ನಗರ ಠಾಣಾ ವ್ಯಾಪ್ತಿಯ ಗ್ರಾಮಗಳಾದ ಮೂಡನಿಡಂಬೂರು, ಶಿವಳ್ಳಿಯಲ್ಲಿ (4 ಕಿ.ುೀ. ವ್ಯಾಪ್ತಿ) ಸೆಪ್ಟಂಬರ್ 6 ರಂದು 11 ಗಂಟೆುಂದ 23 ಗಂಟೆಯವರೆಗೆ.
ಕೋಟ ಠಾಣಾ ವ್ಯಾಪ್ತಿಯ ಗುಂಡ್ಮಿಯಲ್ಲಿ ಸೆ.6ರಂದು 15 ಗಂಟೆಯಿಂದ ರಾತ್ರಿ 11ಗಂಟೆಯವರೆಗೆ. ಕೋಟ ಠಾಣಾ ವ್ಯಾಪ್ತಿಯ ಗ್ರಾಮವಾದ ಗಿಳಿಯಾರಿ ನಲ್ಲಿ ಸೆ.7ರಂದು ಸಂಜೆ 4ರಿಂದ 24 ಗಂಟೆಯವರೆಗೆ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಬಾರ್ ರೆಸ್ಟೋರೆಂಟ್ ಮತ್ತು ವೈನ್ಶಾಪ್ಗಳಲ್ಲಿ ಮದ್ಯ ಮಾರಾಟವನ್ನು ಮೇಲೆ ತಿಳಿಸಿದ ದಿನದಂದು ಮುಚ್ಚಲು ಆದೇಶಿಸಿದ್ದು, ಉಡುಪಿ ಮತ್ತು ಕುಂದಾಪುರ ಪೊಲೀಸ್ ಉಪ ವಿಭಾಗದ ಸರಹದ್ದಿನ ಗ್ರಾಮಗಳ ವ್ಯಾಪ್ತಿಯಲ್ಲಿ ಒಣದಿನ ಎಂದು ಘೋಸಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.







