Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ…

ಓ ಮೆಣಸೇ…

ಪಿ.ಎ.ರೈಪಿ.ಎ.ರೈ1 Sept 2019 11:54 PM IST
share
ಓ ಮೆಣಸೇ…

ನನಗೆ ಅಧಿಕಾರ ದಾಹ ಇಲ್ಲ - ಡಿ.ಕೆ. ಶಿವಕುಮಾರ್, ಮಾಜಿ ಸಚಿವ
  ನೀರು ಕುಡಿಸಲು ಬಂದ ಈಡಿ ಅಧಿಕಾರಿಗಳ ಮುಂದೆ ಸ್ಪಷ್ಟೀಕರಣವೇ?
---------------------

ಬಿಜೆಪಿಗೂ ಬರಲಿದೆ ಸಮ್ಮಿಶ್ರ ಸರಕಾರದ ಗತಿ - ಬಸವರಾಜ ಹೊರಟ್ಟಿ, ವಿ.ಪ. ಸದಸ್ಯ
ಒಟ್ಟಿನಲ್ಲಿ ಮತ್ತೆ ಒಂದಿಷ್ಟು ಶಾಸಕರು ಅನರ್ಹರಾಗಲು ಸಿದ್ಧರಾಗುತ್ತಿದ್ದಾರೆ ಎಂದಾಯಿತು.

---------------------

ದೇಶದ ಮುದ್ರಣ ಮಾಧ್ಯಮಗಳ ಮೇಲೆ ನನಗೆ ಅಪಾರ ವಿಶ್ವಾಸ - ಪ್ರಣವ್ ಮುಖರ್ಜಿ, ಮಾಜಿ ರಾಷ್ಟ್ರಪತಿ
ನಿಮಗೆ ಭಾರತರತ್ನ ಸಿಕ್ಕಿರುವ ವರದಿ ಸುಂದರವಾಗಿ ಮುದ್ರಣವಾಗಿರಬೇಕು.

---------------------

ಸಾಹಿತ್ಯ ಸೃಷ್ಟಿ ತಪಸ್ಸಿನಂತಾಗಬೇಕು - ಎಸ್.ಎಲ್. ಬೈರಪ್ಪ, ಸಾಹಿತಿ
ಕಪಟ ಸನ್ಯಾಸಿಯ ತಪಸ್ಸು ಸಮಾಜಕ್ಕೆ ಅಪಾಯಕಾರಿ.

---------------------

ಬಿಜೆಪಿಯ ಹಿರಿಯ ಮುಖಂಡರ ನಿಧನಕ್ಕೆ ವಿರೋಧಪಕ್ಷಗಳ ವಾಮಾಚಾರವೇ ಕಾರಣ - ಪ್ರಜ್ಞಾಸಿಂಗ್, ಸಂಸದೆ
  ದೇಶದ ಆರ್ಥಿಕ ಹಿಂಜರಿತಕ್ಕೂ ಅದೇ ಕಾರಣವಾಗಿರಬೇಕಲ್ಲ?

---------------------

ಯಾವತ್ತೂ ಅಧಿಕಾರ ಬೇಡ ಎಂದು ಹೇಳಿದವನು ನಾನಲ್ಲ - ಎಸ್. ಅಂಗಾರ, ಶಾಸಕ
ದುರದೃಷ್ಟಕ್ಕೆ ಬೇಕಾ? ಎಂದು ಯಾರೂ ಕೇಳಿಲ್ಲ.

---------------------

ಬಿಜೆಪಿ ಹೈಕಮಾಂಡ್‌ಗೆ ಸಿಎಂ ಯಡಿಯೂರಪ್ಪ ಒಲ್ಲದ ಶಿಶು - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಶಿಶು-ಪಾಲನ ತಲೆದಂಡಕ್ಕೆ ತಪ್ಪುಗಳನ್ನು ಕಲೆ ಹಾಕಲಾಗುತ್ತಿದೆ.

---------------------

ನಾನು ಜೆಡಿಎಸ್ ಮೂಲದವ, ಬಿಜೆಪಿ ಸಿದ್ಧಾಂತ ಒಪ್ಪಿಕೊಳ್ಳಲು ಕಷ್ಟವಾಗುತ್ತಿದೆ - ಗೂಳಿಹಟ್ಟಿ ಶೇಖರ್, ಶಾಸಕ
ಗೂಳಿಯ ಬೀಜ ಒಡೆದ ಬಳಿಕವೇ ಬಿಜೆಪಿಗೆ ಸೇರಿಸಲಾಗುತ್ತದೆ.

---------------------

ನನ್ನನ್ನು ಮುಗಿಸಲು ಬಂದವರೆಲ್ಲ ಮುಳುಗಿ ಹೋಗಿದ್ದಾರೆ - ದೇವೇಗೌಡ, ಮಾಜಿ ಪ್ರಧಾನಿ
ರಾಮಕೃಷ್ಣ ಹೆಗಡೆಯವರಿಗೆ ಹೀಗೊಂದು ಶ್ರದ್ಧಾಂಜಲಿ.

---------------------

ರಾಜ್ಯದಲ್ಲಿ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರಕಾರ ಪತನಕ್ಕೆ ಬಿಜೆಪಿಯ ಕೆಲವು ಶಕುನಿಗಳು ಕಾರಣ - ವಿ.ಎಸ್. ಉಗ್ರಪ್ಪ, ಮಾಜಿ ಸಚಿವ
ಜೆಡಿಎಸ್-ಕಾಂಗ್ರೆಸ್‌ನೊಳಗೆ ಶಕುನಿಗಳಿಗೇನು ಬರವೇ?
 ---------------------

ಶಿಕ್ಷಣ ಮತ್ತು ಸಾಹಿತ್ಯ ಜೋಡೆತ್ತುಗಳಿದ್ದಂತೆ - ಎಚ್.ಎಸ್. ವೆಂಕಟೇಶ ಮೂರ್ತಿ, ಸಾಹಿತಿ
ಸೆಗಣಿಯಂತೆ ಹೊರಬರುತ್ತಿರುವ ಸಾಹಿತ್ಯ ಮತ್ತು ಪದವೀಧರರನ್ನು ನೋಡುವಾಗ ನಿಜ ಅನ್ನಿಸುತ್ತದೆ.

---------------------

ನರೆಂದ್ರ ಮೋದಿಗೆ ಇಂಗ್ಲಿಷ್ ಚೆನ್ನಾಗಿ ಗೊತ್ತು ಆದರೆ ಮಾತನಾಡಲು ಇಷ್ಟವಿಲ್ಲ - ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ಅವರು ಇಂಗ್ಲಿಷ್ ಮಾತನಾಡಿದ ಕಾರಣಕ್ಕಾಗಿಯೇ ಬ್ರಿಟಿಷರು ದೇಶ ಬಿಟ್ಟು ಹೋದರಂತೆ.

---------------------

ಅತೃಪ್ತಿ ಎಲ್ಲ ಕಾಲದಲ್ಲೂ ಇದ್ದದ್ದೇ - ಯಡಿಯೂರಪ್ಪ, ಮುಖ್ಯಮಂತ್ರಿ
ಎಲ್ಲ ಕಾಲದಲ್ಲೂ ಅತೃಪ್ತಿಯೇ ಸರಕಾರವನ್ನು ಬಲಿತೆಗೆದುಕೊಂಡಿರುವುದು ಎನ್ನುವ ಎಚ್ಚರಿಕೆಯೂ ಇರಲಿ.

---------------------

ಪಕ್ಷ ನಿಷ್ಠೆಯೇ ನನ್ನ ಶಕ್ತಿ ಮತ್ತು ದೌರ್ಬಲ್ಯ - ಸಿ.ಟಿ. ರವಿ, ಸಚಿವ
ಆ ದೌರ್ಬಲ್ಯದ ಕಾರಣಕ್ಕಾಗಿ ಕನ್ನಡ ಬಾವುಟದ ಮೇಲೆ ಶಕ್ತಿ ಪ್ರದರ್ಶನವೇ?

---------------------

ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಇನ್ನಷ್ಟು ಬಲ ನೀಡಲು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಮಾಡಲಾಗಿದೆ - ಡಾ. ಸಿ.ಎಸ್. ಅಶ್ವತ್ಥ ನಾರಾಯಣ, ಉಪಮುಖ್ಯಮಂತ್ರಿ
ಒಟ್ಟಿನಲ್ಲಿ ಯಡಿಯೂರಪ್ಪ ಪಾಲಿನ ಬಲ ಪಂಥೀಯರು ನೀವು.

---------------------

ಉಪಮುಖ್ಯಮಂತ್ರಿ ಎಂಬುದು ಅಸಾಂವಿಧಾನಿಕ ಹುದ್ದೆ - ಜಗದೀಶ ಶೆಟ್ಟರ್, ಸಚಿವ
ಅಸಾಂವಿಧಾನಿಕವಾಗಿ ರಚನೆಯಾದ ಸರಕಾರದಲ್ಲಿ ಎಲ್ಲವೂ ನಡೆಯುತ್ತದೆ.

---------------------

ಹಳೆ ಬೇರಿನೊಂದಿಗೆ ಹೊಸ ಚಿಗುರು ಎಂಬಂತೆ ನೂತನ ಮಂತ್ರಿ ಮಂಡಲ ರಚನೆಯಾಗಿದೆ - ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ
ಯಾವ ಮರದ ಚಿಗುರು ಎನ್ನುವುದನ್ನು ಕಾದು ನೋಡಬೇಕು.

---------------------

ಆರ್‌ಬಿಐ ನಿಂದ ಕೇಂದ್ರ ಸರಕಾರ ದುಡ್ಡು ಎತ್ತಿದ್ದು ಕಳ್ಳತನಕ್ಕೆ ಸಮ - ರಾಹುಲ್‌ ಗಾಂಧಿ, ಕಾಂಗ್ರೆಸ್ ನಾಯಕ
  ಕಳ್ಳರು ಹಾಡಹಗಲೇ ಕದಿಯುವುದಿಲ್ಲ.
---------------------

ದೇಶದ ಭದ್ರತೆ ಬಲವಾಗಿರದಿದ್ದರೆ ಆರ್ಥಿಕ ಪ್ರಗತಿ ಸಾಧ್ಯವಿಲ್ಲ - ಅಮಿತ್ ಶಾ, ಕೇಂದ್ರ ಸಚಿವ
ಅದಕ್ಕಾಗಿ ಸೇನೆ, ಪೊಲೀಸ್ ಇಲಾಖೆಯೊಳಗೆ ಬಲ ಪಂಥೀಯರನ್ನು ತುರುಕುತ್ತಿದ್ದೀರಿ.

---------------------

ನಮ್ಮ ಪಕ್ಷದ ನಾಯಕರೇ ನನ್ನನ್ನು ಸೋಲಿಸಿದರು - ಕೆ.ಎಚ್. ಮುನಿಯಪ್ಪ, ಕಾಂಗ್ರೆಸ್ ನಾಯಕ
ಯಾರೇ ಇರಲಿ, ಒಳ್ಳೆಯ ಕೆಲಸವನ್ನೇ ಮಾಡಿದರು.

---------------------

ನನ್ನನ್ನು ಜೈಲಿಗಟ್ಟಿದರೂ ನಾನು ಬಿಜೆಪಿಗೆ, ಮೋದಿ ಸರಕಾರಕ್ಕೆ ತಲೆ ಬಾಗುವುದಿಲ್ಲ - ಮಮತಾ ಬ್ಯಾನರ್ಜಿ, ಪ.ಬಂ.ಮುಖ್ಯಮಂತ್ರಿ
ಜೈಲಿಗಟ್ಟುವ ಕೆಲಸ ಅದೇನು ಮಾಡಿದ್ದೀರಿ?

---------------------

ನನ್ನ ಜಾತಿಯನ್ನೇ ಮಾನದಂಡ ಮಾಡಿಕೊಂಡು ಮಂತ್ರಿಸ್ಥಾನ ನೀಡುವುದಾದರೆ ನನಗೆ ಬೇಡ - ಹಾಲಾಡಿ ಶ್ರೀನಿವಾಸ ಶೆಟ್ಟಿ, ಶಾಸಕ
ಜಾತಿ ಬಿಟ್ಟರೆ ತಮಗೆ ಸ್ಥಾನಮಾನ ನೀಡಲು ಬೇರೆ ಇರುವ ಅರ್ಹತೆಯನ್ನಾದರೂ ಹೇಳಿ.

---------------------
ಮುಖ್ಯಮಂತ್ರಿ ಯಡಿಯೂರಪ್ಪರ ಕಾರ್ಯವೈಖರಿ ಕಂಡು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಟ್ಟೆ ಕಿಚ್ಚು ಪಡುತ್ತಿದ್ದಾರೆ - ಕೋಟ ಶ್ರೀನಿವಾಸ ಪೂಜಾರಿ, ಸಚಿವ
ಆ ಮಟ್ಟಿಗೆ ದುಡ್ಡು ದೋಚುತ್ತಿದ್ದಾರೆಯೇ?

---------------------

ಭಾರತದ ಅರ್ಥವ್ಯವಸ್ಥೆ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿದೆ - ಅಮಿತ್ ಶಾ, ಕೇಂದ್ರ ಸಚಿವ
ಬಹುಶಃ ಬೆಳೆಯುತ್ತಿರುವ ಸಾಲವನ್ನೇ ಅರ್ಥವ್ಯವಸ್ಥೆ ಎಂದು ತಿಳಿದಿರಬೇಕು.

---------------------

ಯೋಗ ನನ್ನನ್ನು ಮುನ್ನಡೆಸುತ್ತಿದೆ - ನರೇಂದ್ರ ಮೋದಿ, ಪ್ರಧಾನಿ
ದೇಶವನ್ನು ಹಿನ್ನಡೆಸುತ್ತಿರುವುದು ಯಾವುದು?

---------------------
ನಾವು ಕಟ್ಟಿದ ಮನೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಸಾರ ಮಾಡುತ್ತಿದ್ದಾರೆ - ಎಂ.ಟಿ.ಬಿ. ನಾಗರಾಜ್, ಅನರ್ಹ ಶಾಸಕ
ಮನೆ ಕಟ್ಟಿದವರೇ ಸಂಸಾರ ಮಾಡುವುದಾಗಿದ್ದರೆ, ಬೆಂಗಳೂರಿನಲ್ಲಿರುವ ಎಲ್ಲ ಮಹಡಿ ಮನೆಗಳಲ್ಲೂ ಉತ್ತರ ಕರ್ನಾಟಕದ ಕಟ್ಟಡ ಕಾರ್ಮಿಕರು ವಾಸಿಸಬೇಕಾಗಿತ್ತು.

share
ಪಿ.ಎ.ರೈ
ಪಿ.ಎ.ರೈ
Next Story
X