Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಧರ್ಮ: ಮಾನವ ಸಂಸ್ಕೃತಿ ಮತ್ತು ವಿಕಾಸ

ಧರ್ಮ: ಮಾನವ ಸಂಸ್ಕೃತಿ ಮತ್ತು ವಿಕಾಸ

ಈ ಹೊತ್ತಿನ ಹೊತ್ತಿಗೆ

ಕಾರುಣ್ಯಾಕಾರುಣ್ಯಾ2 Sept 2019 12:02 AM IST
share
ಧರ್ಮ: ಮಾನವ ಸಂಸ್ಕೃತಿ ಮತ್ತು ವಿಕಾಸ

ರಾಜ್ಯಶಾಸ್ತ್ರ ಪ್ರಾಧ್ಯಾಪಕ, ವಿಚಾರವಾದಿ, ಸಂಶೋಧಕ ಡಾ. ರಾವ್ ಸಾಹೇಬ್ ಕಸಬೆ ಅವರು ಬರೆದಿರುವ ‘ಧರ್ಮ’ ಕೃತಿಯನ್ನು ಮರಾಠಿಯಿಂದ ಕನ್ನಡಕ್ಕೆ ಚಂದ್ರಕಾಂತ ಪೋಕಳೆ ಅವರು ಅನುವಾದಿಸಿದ್ದಾರೆ. ಸುಮಾರು 56 ಪುಟಗಳ ಈ ಪುಟ್ಟ ಕೃತಿ, ಮಾನವ ಸಂಸ್ಕೃತಿ ಮತ್ತು ಅದರ ವಿಕಾಸಕ್ಕೆ ಧರ್ಮ ನೀಡಿದ ಕೊಡುಗೆ ಮತ್ತು ಮಾಡಿದ ಹಾನಿಯನ್ನು ಅತ್ಯಂತ ಗಹನವಾಗಿ ವಿಶ್ಲೇಷಿಸುತ್ತದೆ. ಮನುಷ್ಯನ ನಾಗರಿಕತೆಯ ವಿಕಾಸ ಹೇಗೆ ಧರ್ಮದ ಜೊತೆ ಜೊತೆಗೇ ಬೆಳೆದು ಬಂತು ಮತ್ತು ನಾಗರಿಕತೆ ಮತ್ತು ಧರ್ಮ ಪರಸ್ಪರ ಪೂರಕವಾಗುವ ಬದಲು, ಮುಖಾಮುಖಿಯಾಗುವಂತಹ ಸನ್ನಿವೇಶ ಎದುರಾಯಿತು ಎನು್ನವುದನ್ನು ಈ ಕೃತಿ ವಿವರಿಸುತ್ತದೆ.
 ‘‘20ನೇ ಶತಮಾನದ ಕೊನೆಯ ದಶಕ ಮತ್ತು 21ನೆಯ ಶತಮಾನದ ಆರಂಭವು ಜಗತ್ತಿನ ಭೀಕರ ಸಾಂಸ್ಕೃತಿಕ ಸಂಘರ್ಷದ ಕಾರಣಕ್ಕಾಗಿ ಯುದ್ಧಮಯ ಗೊಂಡಂತೆ ಕಾಣುತ್ತದೆ. ಹೀಗಾಗಿ ಇಂದು ಹಿಂದೆಂದಿಗಿಂತಲೂ ಹೆಚ್ಚು ಧರ್ಮ ಚಿಕಿತ್ಸೆಯನ್ನು ಕೈಗೊಳ್ಳಬೇಕಾದ ಅಗತ್ಯ ನಿರ್ಮಾಣವಾಗಿದೆ. ಈ ಚಿಕಿತ್ಸೆಯು ಮಾನವನ ಉದಯ, ವಿಕಾಸ, ಅವನ ಜೀವನ ಸಂಘರ್ಷದ ಮತ್ತು ಅವರ ಬದುಕಿನ ಮೂಲಭೂತ ಸಮಸ್ಯೆಗಳ ಬಗೆಗೆ ಯೋಚಿಸುವ ವಿವಿಧ ಆಧುನಿಕ ಜ್ಞಾನಶಾಖೆಗಳ ಸಹಾಯದಿಂದ ನಡೆದಾಗ ಮಾತ್ರ ಧರ್ಮದ ಮೂಲ ಸ್ವರೂಪವು ಸ್ಪಷ್ಟವಾಗಬಲ್ಲದು. ಅದರ ಸಾಮರ್ಥ್ಯ ಮತ್ತು ಮಿತಿಯನ್ನು ಗ್ರಹಿಸಬಹುದು. ಇಂದು ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಸಂಹಾರವನ್ನು ನಿಲ್ಲಿಸಲು ಅದೊಂದು ಉಪಾಯವಾಗಬಲ್ಲದು...’’ ಎಂಬ ಆಶಯವನ್ನು ಹೊತ್ತು ಈ ಕೃತಿಯನ್ನು ಬರೆಯಲಾಗಿದೆ. ನಿರ್ದಿಷ್ಟ ಸಿದ್ಧಾಂತಕ್ಕೆ ಬದ್ಧವಾಗಿರುವ ಈ ಕೃತಿ ಬುದ್ಧನಿಂದ ಮಾರ್ಕ್ಸ್‌ನ ವರೆಗೆ ಧಾರ್ಮಿಕ ಚಿಂತನೆಯನ್ನು ಅನ್ವೇಷಿಸುತ್ತದೆ. ವಿವಿಧ ಧರ್ಮಗಳ ಇತಿಹಾಸಗಳನ್ನು ಕೆದಕುತ್ತವೆಯಾದರೂ, ಭಾರತದ ಧಾರ್ಮಿಕ ಇತಿಹಾಸವನ್ನು ಕೇಂದ್ರವಾಗಿಟ್ಟುಕೊಂಡು ಈ ಕೃತಿ ಧರ್ಮವನ್ನು ಚರ್ಚಿಸುತ್ತದೆ. ಇದೇ ಸಂದರ್ಭದಲ್ಲಿ ಬುದ್ಧನಿಂದ ಹಿಡಿದು ವಿವಿಧಭಾರತೀಯ ಚಿಂತಕರು, ಸಂತರು ಧರ್ಮ ಮತ್ತು ಧರ್ಮದಾಚೆಗೆ ಬದುಕನ್ನು ನೋಡಿದ ಪರಿಯನ್ನು ವಿವರಿಸುತ್ತಾರೆ. ಹಾಗೆಯೇ ವಿದೇಶದಲ್ಲಿ ಧರ್ಮ ಹೇಗೆ ತನ್ನೊಳಗೇ ಸಂಘರ್ಷಗಳನ್ನು ಹುಟ್ಟು ಹಾಕುತ್ತಾ ಬೆಳೆಯುತ್ತಾ ಹೋಯಿತು ಎನ್ನುವುದನ್ನೂ ಕೃತಿ ದಾಖಲೆಗಳ ಸಹಿತ ಮಂಡಿಸುತ್ತದೆ. ‘‘ಮನುಷ್ಯನ ಬದುಕಿನ ಪ್ರಯೋಜನವು ಅವನಲ್ಲಿಯ ಸುಪ್ತಶಕ್ತಿಯ ಪ್ರಕಟೀಕರಣದಲ್ಲಿದೆ. ತನ್ನೊಳಗೆ ಒಂದು ಸುಪ್ತ ಸಾಮರ್ಥ್ಯವಿದೆ. ಅದನ್ನು ತಾನೇ ಪ್ರಕಟಪಡಿಸಬಲ್ಲೆ. ಅದರ ಉಪಯೋಗವನ್ನು ತನ್ನನ್ನು ಒಳಗೊಂಡಂತೆ ಲೋಕಕಲ್ಯಾಣಕ್ಕಾಗಿ ಮಾಡಬಲ್ಲೆ. ಇದರ ಬಗೆಗೆ ಮನುಷ್ಯನಿಗೆ ಬರುವ ಅರಿವು ಇದೇ ನಿಜವಾದ ಆತ್ಮಪ್ರಜ್ಞೆ. ಇದನ್ನೇ ನಾನು ಅಧ್ಯಾತ್ಮವೆಂದುಕೊಂಡಿದ್ದೇನೆ....’’ ಎಂದು ಲೇಖಕರು ಕೃತಿಯ ಕೊನೆಯಲ್ಲಿ ಅಭಿಪ್ರಾಯಪಡುತ್ತಾರೆ.
ನವಕರ್ನಾಟಕ ಪ್ರಕಾಶನ ಹೊರತಂದಿರುವ ಕೃತಿಯ ಒಟ್ಟು ುಟಗಳು 56. ಮುಖಬೆಲೆ 45 ರೂ.

share
ಕಾರುಣ್ಯಾ
ಕಾರುಣ್ಯಾ
Next Story
X