ಕಾಂಗ್ರೆಸ್ ಸೇರಲಿರುವ ಅಲ್ಕಾ ಲಾಂಬಾ ?

ಹೊಸದಿಲ್ಲಿ, ಸೆ.3: ಆಮ್ ಆದ್ಮಿ ಪಕ್ಷದ ಬಂಡಾಯ ಶಾಸಕಿ ಅಲ್ಕಾ ಲಂಬಾ ಹೊಸದಿಲ್ಲಿ ಮಂಗಳವಾರ ಬೆಳಗ್ಗೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಕಾಂಗ್ರೆಸ್ ಪಕ್ಷಕ್ಕೆ ಸೇರುವ ಸುಳಿವನ್ನು ನೀಡಿದರು.
ಈ ಹಿಂದೆ ಶಾಸಕಿ ಅಲ್ಕಾ ಲಾಂಬಾ ಅವರು ಪಕ್ಷವನ್ನು ತೊರೆಯುವ ಇಂಗಿತ ವ್ಯಕ್ತಪಡಿಸಿದ್ದರು. ಮುಂಬರುವ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಯೋಚಿಸುತ್ತಿದ್ದಾರೆ ಎಂದು ಹೇಳಿದ್ದರು. ಆಗ ಆಪ್ ಇದನ್ನು ಕೇವಲ "ಪ್ರಚಾರದ ಸಾಹಸ" ಎಂದು ಕರೆದಿತ್ತು.
ಚಾಂದನಿ ಚೌಕ್ ಕ್ಷೇತ್ರದ ಶಾಸಕರಾದ ಲಾಂಬಾ ಅವರು ಪಕ್ಷದಿಂದ ಹಲವಾರು ಸಂದರ್ಭಗಳಲ್ಲಿ ತಮಗೆ ಅಗೌರವ ನೀಡಲಾಗಿದೆ ಎಂದು ದೂರಿದ್ದಾರೆ. “ನನ್ನನ್ನು ಸಭೆಗಳಿಗೆ ಕರೆಯಲಾಗುವುದಿಲ್ಲ. ನನ್ನನ್ನು ಪದೇ ಪದೇ ವಮಾನಿಸಲಾಗುತ್ತಿದೆ. ನಾನು ಕಾಂಗ್ರೆಸ್ನಲ್ಲಿ 20 ವರ್ಷಗಳನ್ನು ಕಳೆದಿದ್ದೇನೆ ಮತ್ತು ಅಲ್ಲಿಯೂ ನಾನು ಕುಟುಂಬ ರಾಜಕಾರಣದೊಂದಿಗೆ ಹೋರಾಡಿದೆ ಆದರೆ ಎಎಪಿಯಲ್ಲಿ ನನಗೆ ಗೌರವ ಸಿಗುತ್ತಿಲ್ಲ ”ಎಂದು ಅವರು ಹೇಳಿದ್ದಾರೆ.
"ನನ್ನ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗಾಗಿ ಮೀಸಲಾದ ಹಣವನ್ನು ಬಳಕೆ ಮಾಡಿದ ಮರುದಿನ ನಾನು ಪಕ್ಷವನ್ನು ತೊರೆಯುತ್ತೇನೆ" ಎಂದು ಅವರು ಹೇಳಿದರು. "ಅಲ್ಕಾ ಲಾಂಬಾ. ಅವರು ಪಕ್ಷವನ್ನು ತೊರೆಯುವ ಬಗ್ಗೆ ಈ ಹಿಂದೆ ಹಲವು ಬಾರಿ ಘೋಷಿಸಿದ್ದಾರೆ ಆದರೆ ಅವರು ತಮ್ಮ ಶಾಸಕ ಸ್ಥಾನವನ್ನು ಕಳೆದುಕೊಳ್ಳುವ ಭಯದಲ್ಲಿದ್ದಾರೆ. ಅವರು ರಾಜೀನಾಮೆ ನೀಡಬೇಕಾದರೆ, ಅವರು ಪಕ್ಷದ ಹೈಕಮಾಂಡ್ ಗೆ ರಾಜೀನಾಮೆ ಪತ್ರವನ್ನು ಕಳುಹಿಸಬೇಕು, ಅದನ್ನು ಬಿಟ್ಟು . ಮಾಧ್ಯಮಗಳಿಗೆ ತಿಳಿಸುವ ಮೂಲಕ ಅವರು ನಾಟಕ ಮಾಡುತ್ತಿದ್ದಾರೆ "ಎಂದು ಆಪ್ ಕೈಲಾಶ್ ಶಾಸಕ ಸೌರಭ್ ಭಾರದ್ವಾಜ್ ಹೇಳಿದ್ದಾರೆ.
ರಾಜೀವ್ ಗಾಂಧಿಗೆ ನೀಡಲಾಗಿದ್ದ ಭಾರತ ರತ್ನವನ್ನು ಹಿಂತೆಗೆದುಕೊಳ್ಳುವ ನಿರ್ಣಯವನ್ನು ಅಂಗೀಕರಿಸುವ ಪಕ್ಷದ ನಿರ್ಣಯಕ್ಕೆ ಲಂಬಾ ಆಕ್ಷೇಪ ವ್ಯಕ್ತಪಡಿಸಿದ್ದರು. 2013 ರ ದಿಲ್ಲಿ ಚುನಾವಣೆಯಲ್ಲಿ ಅವರು ಚಾಂದನಿ ಚೌಕ್ ವಿಧಾನಸಭಾ ಸ್ಥಾನವನ್ನು ಗೆದ್ದಿದ್ದರು. ಆಪ್ ಸೇರುವ ಮೊದಲು ಅವರು ಕಾಂಗ್ರೆಸ್ ಪಕ್ಷದಲ್ಲಿದ್ದರು.